ನವದೆಹಲಿ, ಜೂನ್ 29: ಭಾರತದಲ್ಲಿ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಕಾರುಗಳ ಸಂಗ್ರಹದ ಬಗ್ಗೆ ನಾವು ಮಾತನಾಡುವಾಗ ಸಾಮಾನ್ಯವಾಗಿ ಮುಖೇಶ್ ಅಂಬಾನಿ, ಗೌತಮ್ ಸಿಂಘಾನಿಯಾ, ರತನ್ ಟಾಟಾ ಮುಂತಾದ ಭಾರತೀಯ ಉದ್ಯಮಿಗಳ ಹೆಸರುಗಳು ನೆನಪಾಗುತ್ತದೆ. ಇದು ಬಿಟ್ಟರೆ ಬಾಲಿವುಡ್ ಅಥವಾ ಇತರ ಚಿತ್ರರಂಗದ ಖ್ಯಾತ ನಟನಟಿಯರ ಬಳಿ ದುಬಾರಿ ಕಾರುಗಳ ಸಂಗ್ರಹವಿರುವುದನ್ನು ನಾವು ನೋಡುತ್ತೇನೆ. ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಎಡಿಷನ್ ದೇಶದ ಅತ್ಯಂತ ದುಬಾರಿ ಕಾರಾಗಿದ್ದು ಇವುಗಳ ಬೆಲೆ 14 ಕೋಟಿ ರೂ., ಆಗಿದೆ.
ಭಾರತದಲ್ಲಿನ ಜನಪ್ರಿಯ ಬಿಲಿಯನೇರ್ ಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಸಿಂಘಾನಿಯಾ ಅವರ ಒಡೆತನದ ರೋಲ್ಸ್ ರಾಯ್ಸ್ ಮತ್ತು ಫೆರಾರಿಸ್ಗಿಂತಲೂ ಹೆಚ್ಚು ದುಬಾರಿ ಕಾರು ಬೆಂಟ್ಲಿ ಮುಲ್ಸಾನ್ನೆ ಮಾಲೀಕರಾಗಿದ್ದಾರೆ ವಿ.ಎಸ್ ರೆಡ್ಡಿ. ಬೆಂಟ್ಲಿ ಮುಲ್ಸಾನ್ನೆ EWB ಸೆಂಟಿನರಿ ಆವೃತ್ತಿಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದರ ಮಾಲೀಕರಾಗಿರುವ ವಿ.ಎಸ್ ರೆಡ್ಡಿ ಮತ್ತೊಂದು ದುಬಾರಿ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ.

ಭಾರತದ ಪ್ರಮುಖ ನ್ಯೂಟ್ರಾಸ್ಯುಟಿಕಲ್ ಕಂಪನಿಯಾದ ಬ್ರಿಟಿಷ್ ಬಯೋಲಾಜಿಕಲ್ಸ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು 'ದಿ ಪ್ರೊಟೀನ್ ಮ್ಯಾನ್ ಆಫ್ ಇಂಡಿಯಾ' ಎಂದು ಪ್ರೀತಿಯಿಂದ ಕರೆಯಲಾಗುವ ವಿಎಸ್ ರೆಡ್ಡಿ ಹೊಸ Mercedes-Maybach S680 ಗಾಗಿ ರೂ 3.34 ಕೋಟಿ ಖರ್ಚು ಮಾಡಿದ್ದಾರೆ.
ಅಂದಹಾಗೇ ಮರ್ಸಿಡಿಸ್-ಮೇಬ್ಯಾಕ್ ಎಸ್ 680 ಮೇಬ್ಯಾಕ್ ಎಸ್-ಕ್ಲಾಸ್ನ ಹೆಚ್ಚು ಪ್ರೀಮಿಯಂ ಆವೃತ್ತಿಯಾಗಿದೆ. ಸುಮಾರು 5.5 ಮೀಟರ್ ಉದ್ದದೊಂದಿಗೆ, ಮೇಬ್ಯಾಕ್ ಎಸ್ 680 ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ. ಇದು 6.0-ಲೀಟರ್ ಟರ್ಬೋಚಾರ್ಜ್ಡ್ ವಿ 12 ಎಂಜಿನ್ ಹೊಂದಿದೆ. ಈ ಎಂಜಿನ್ 610 ಬಿಹೆಚ್ಪಿ ಪವರ್ ಹಾಗೂ 900 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಹಲವು ವಿಶೇಷತೆಗಳುಳ್ಳ ಮರ್ಸಿಡೀಸ್ ಎಸ್ 680 ನಲ್ಲಿ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಬ್ಯಾಕ್ ಸೀಟ್ ನಲ್ಲಿ ಎಂಟರ್ಟೈನ್ಮೆಂಟ್ ಸ್ಕ್ರೀನ್ಗಳು, ಎಲ್ಲಾ ಸೀಟ್ಗಳಿಗೆ ರೆಕ್ಲೈನರ್ ಫಂಕ್ಷನ್, ವೆಂಟಿಲೇಟೆಡ್ ಸೀಟ್ಗಳೊಂದಿಗೆ ಮಸಾಜ್ ಫಂಕ್ಷನ್ ಮುಂತಾದ ಫೀಚರ್ ಒಳಗೊಂಡಿದೆ.
ಕರ್ನಾಟಕ ಮೂಲದ ವಿ ಎಸ್ ರೆಡ್ಡಿ ಅವರು 52 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಅವರು ವಿವಿಧ ವಯೋಮಾನದ ಜನರಿಗೆ ತಡೆಗಟ್ಟುವ ಪೋಷಣೆಯನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಬ್ರಿಟಿಷ್ ಬಯೋಲಾಜಿಕಲ್ಸ್ ಅನ್ನು ಪ್ರಾರಂಭಿಸಿದರು. ಬ್ರಿಟಿಷ್ ಬಯೋಲಾಜಿಕಲ್ಸ್ ವೆಬ್ಸೈಟ್ ಪ್ರಕಾರ, ಇದು ಸಂಶೋಧನೆ-ಆಧಾರಿತ ಹೆಲ್ತ್ಕೇರ್ ನ್ಯೂಟ್ರಾಸ್ಯುಟಿಕಲ್ ಕಂಪನಿಯಾಗಿದೆ.
ವಿಎಸ್ ರೆಡ್ಡಿ ಅವರು ಆಟೋಮೋಟಿವ್ ಉತ್ಸಾಹಿಯಾಗಿದ್ದು ಇವೊ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ದೇಶದ ಎಲ್ಲಾ ಬ್ರಾಂಡ್ಗಳನ್ನು ಸಂಗ್ರಹಿಸುವುದು ಅವರ ಬಾಲ್ಯದ ಕನಸು ಎಂದು ಹೇಳಿಕೊಂಡಿದ್ದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications