ಕೇಂದ್ರ ಸರ್ಕಾರದಿಂದ ಮಂಗಳವಾರ ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ರುಪಾಯಿ ಹಣ ಸಂಗ್ರಹಕ್ಕೆ ಅನುಮತಿ ಸಿಕ್ಕಿದೆ. ಜಿಎಸ್ ಟಿ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಓಪನ್ ಮಾರ್ಕೆಟ್ ಸಾಲದ ಮೂಲಕ ಈ ಹಣವನ್ನು ಸಂಗ್ರಹಿಸಲು ಒಪ್ಪಿಗೆ ನೀಡಿದೆ. ಜಿಎಸ್ ಟಿ ಪರಿಹಾರ ವಿಚಾರವಾಗಿ ಒಮ್ಮತದ ತೀರ್ಮಾನಕ್ಕೆ ಬರಲು ಸೋಮವಾರ ನಡೆದ ಸಭೆಯಲ್ಲಿ ವಿಫಲವಾದ ಮರು ದಿನ ಈ ನಿರ್ಧಾರ ಬಂದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ ಟಿ ಪರಿಹಾರ ಮೊತ್ತದ ಕೊರತೆ 2.35 ಲಕ್ಷ ಕೋಟಿ ಆಗಬಹುದು ಎಂಬ ಅಂದಾಜಿದೆ. ಕೇಂದ್ರ ಸರ್ಕಾರದಿಂದ ಕಳೆದ ಆಗಸ್ಟ್ ನಲ್ಲಿ ರಾಜ್ಯಗಳಿಗೆ ಎರಡು ಆಯ್ಕೆ ನೀಡಲಾಗಿತ್ತು. ಮೊದಲನೆಯದು ಆರ್ ಬಿಐ ನಿಂದ 97,000 ಕೋಟಿ ರುಪಾಯಿ ವಿಶೇಷ ಸಾಲ ಪಡೆಯುವುದು ಅಥವಾ 2.35 ಲಕ್ಷ ಕೋಟಿ ರುಪಾಯಿಯನ್ನು ಮಾರ್ಕೆಟ್ ನಿಂದ ತೆಗೆದುಕೊಳ್ಳುವುದು.
ಇನ್ನು 'ಸಿನ್ ಗೂಡ್ಸ್' ಎಂದು ಕರೆಸಿಕೊಳ್ಳುವುದರ ಮೇಲೆ ಪರಿಹಾರ ಸೆಸ್ ಅನ್ನು 2022ರ ಆಚೆಗೂ ವಿಸ್ತರಿಸುವ ಬಗ್ಗೆ ಕೂಡ ಕೇಂದ್ರ ಪ್ರಸ್ತಾಪಿಸಿತ್ತು. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 20 ರಾಜ್ಯಗಳಿಗೆ 68,825 ಕೋಟಿ ರುಪಾಯಿಯನ್ನು ಓಪನ್ ಮಾರ್ಕೆಟ್ ಸಾಲದ ಮೂಲಕ ಸಂಗ್ರಹಿಸಲು ಅನುಮತಿ ನೀಡಲಾಗಿದೆ ಎಂದು ಮಂಗಳವಾರ ಹೇಳಿಕೆ ನೀಡಲಾಗಿದೆ.

ಆಯಾ ರಾಜ್ಯಗಳ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ ನ(GSDP) 0.50% ಸಾಲ ಪಡೆಯಲು ಅನುಮತಿ ಸಿಕ್ಕಿದೆ. ಇದು ಕೇಂದ್ರದ ಮೊದಲ ಪ್ರಸ್ತಾವ ಒಪ್ಪಿಕೊಂಡ ರಾಜ್ಯಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.
ಮೊದಲನೇ ಪ್ರಸ್ತಾವವನ್ನು ಒಪ್ಪಿಕೊಂಡ ಇಪ್ಪತ್ತು ರಾಜ್ಯಗಳಿವು:
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರಪ್ರದೇಶ, ಉತ್ತರಾಖಂಡ.
ಇನ್ನು ಎಂಟು ರಾಜ್ಯಗಳು ಯಾವ ಪ್ರಸ್ತಾವವನ್ನೂ ಆಯ್ಕೆ ಮಾಡಿಕೊಂಡಿಲ್ಲ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications