ದೇಶೀಯವಾಗಿ ಕಚ್ಚಾ ನೈಸರ್ಗಿಕ ಅನಿಲದ ಉತ್ಪಾದನೆ ಕಡಿಮೆಗೊಳಿಸಲಾಗುತ್ತಿದ್ದು, ಇದರಿಂದ ಸಿಎನ್ಜಿ ರೀಟೇಲ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಸತತ ಎರಡನೇ ತಿಂಗಳಲ್ಲಿ ಕೂಡ ಅಗ್ಗದ ಗ್ಯಾಸ್ ಪೂರೈಕೆ ಕಡಿತಗೊಂಡ ಹಿನ್ನೆಲೆಯಲ್ಲಿ ಸಿಎನ್ ಜಿ ಬೆಲೆ ಏರಿಕೆ ಮಾಡುವಂತೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ನ ಪ್ರಸ್ತಾಪವನ್ನು ಕೇಂದ್ರ ಸದ್ಯಕ್ಕೆ ತಳ್ಳಿಹಾಕಿದೆ ಎನ್ನಲಾಗಿದೆ.
ಅದರ ಬದಲಾಗಿ ಸರ್ಕಾರವು ಕಂಪೆನಿಗಳ ಲಾಭದ ವಿರುದ್ಧವಿಲ್ಲ, ಆದರೆ ಸಿಎನ್ ಜಿ ತಯಾರಿಕೆಗೆ ಆಗುವ ವೆಚ್ಚದ ವಿವರವನ್ನು ಕಂಪೆನಿಗಳು ಘೋಷಿಸಬೇಕಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಕೇಂದ್ರ ಹಾಗೂ ಕಂಪೆನಿಗಳ ನಡುವೆ ಹಗ್ಗಜಗ್ಗಾಟದ ಸ್ಥಿತಿ ಉಂಟಾಗಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಸಂಸ್ಥೆಯು ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಸಿಎನ್ ಜಿ ಪೂರೈಸುತ್ತದೆ. ಅದೇ ರೀತಿ ಮಹಾನಗರ ಗ್ಯಾಸ್ ಲಿಮಿಡೆಟ್ (MGL) ಕಂಪೆನಿಯು ಮುಂಬೈಗೆ ಗ್ಯಾಸ್ ಸರಬರಾಜು ಮಾಡುತ್ತದೆ. ಉಳಿದಂತೆ ಅದಾನಿ ಸಂಸ್ಥೆಯು ಗುಜರಾತ್ ಸೇರಿ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದೆ.
ಕಳೆದ ಅಕ್ಟೋಬರ್ 16ರಂದು ಸರ್ಕಾರವು ನೈಸರ್ಗಿಕ ಅನಿಲದ ಪೂರೈಕೆಯನ್ನು ಶೇಕಡಾ 21 ರಷ್ಟು ಕಡಿತಗೊಳಿಸಿದ್ದರೆ ನವೆಂಬರ್ 16 ರಿಂದ ಜಾರಿಗೆ ಬರುವಂತೆ ಶೇಕಡಾ 20 ರಷ್ಟು ಕಡಿತಗೊಳಿಸಿತ್ತು. ಇದರಿಂದ ಹಲವು ಕಂಪೆನಿಗಳಿಗೆ ಲಾಭವಾಗುವುದು ತಪ್ಪಿದಂತಾಗುತ್ತಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ಗ್ಯಾಸ್ ಬೆಲೆಯನ್ನು ಹೆಚ್ಚಿಸಲು ಕಂಪೆನಿಗಳು ಮುಂದಾಗಿವೆ ಎನ್ನಲಾಗಿದೆ. ಆದರೆ ಸರ್ಕಾರ ಮಾತ್ರ ಕಂಪೆನಿಗಳು ವೆಚ್ಚದ ವಿವರವನ್ನು ಕಂಪೆನಿಗಳು ಘೋಷಿಸಬೇಕಿದೆ ಎಂದು ತಿಳಿಸಿದೆ.
ಲಾಭದತ್ತ ಚಿಲ್ಲರೆ ಮಾರಾಟ ಕಂಪೆನಿಗಳು!
ಅದೂ ಅಲ್ಲದೆ ಸಗಟುದಾರರ ಸಿಎನ್ ಜಿ ಉತ್ಪಾದನಾ ವೆಚ್ಚ ಹಾಗೂ ಮಾರಾಟ ಬೆಲೆಯಲ್ಲಿ ಭಾರೀ ವ್ಯತ್ಯಾಸವಿದೆ ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಅದೂ ಅಲ್ಲದೆ ಚಿಲ್ಲರೆ ವ್ಯಾಪಾರಿಗಳು ಭಾರೀ ಲಾಭ ಮಾಡುತ್ತಿದ್ದಾರೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಬೆಲೆಯ ಅನಿಲದಿಂದ ಅಥವಾ ಆಮದು ಮಾಡಿಕೊಳ್ಳಲು ಅವರು ಮಾಡಬೇಕಾದ ಹೆಚ್ಚುವರಿ ವೆಚ್ಚವನ್ನು ಸುಲಭವಾಗಿ ಸರಿದೂಗಿಸುತ್ತಾರೆ ಎಂದು ತಿಳಿಸಿದ್ದು, ಈ ಮೂಲಕ ಬೆಲೆ ಏರಿಕೆ ಮಾಡಬೇಕೆಂಬ ಕಂಪೆನಿಗಳ ನಿಲುವಿಗೆ ಅಪಸ್ವರ ತೆಗೆದಿದ್ದಾರೆ.
ಸ್ವತಹ ಅಧಿಕಾರಿಗಳ ಪ್ರಕಾರ, ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ವಿಚಾರವನ್ನು ತೆಗೆದುಕೊಳ್ಳುವುದಾದರೆ ಕಂಪೆನಿಯು ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ 16,000 ಕೋಟಿ ರೂಪಾಯಿಗಳ ಆದಾಯದ ಮೇಲೆ 1,748 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಪಡೆದುಕೊಂಡಿದ್ದು, ಶೇಕಡಾ 11 ರ ಅಂತರವನ್ನು ಹೊಂದಿದೆ. ಅತ್ತ MGL 7,000 ಕೋಟಿ ಆದಾಯದ ಮೇಲೆ ಸುಮಾರು 1,300 ಕೋಟಿ ಲಾಭವನ್ನು ಗಿಟ್ಟಿಸಿಕೊಂಡಿದೆ.
ಯಾವ ಚಿಲ್ಲರೆ ವ್ಯಾಪಾರಿ ಅಂತಹ ಲಾಭ ಗಳಿಸುತ್ತಾನೆ ಎಂದು ಹಿರಿಯ ಅಧಿಕಾರಿಗಳು ಶುಲ್ಕ ಹೆಚ್ಚಿಸುವ ಕಂಪೆನಿಗಳ ಆಗ್ರಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಭದಾಯಕತೆಯ ಸಂಖ್ಯೆಗಳು ಕಂಪೆನಿಗಳು ದೊಡ್ಡ ಲಾಭಾಂಶ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆಂದು ತೋರಿಸುತ್ತವೆ. ಚಿಲ್ಲರೆ ವ್ಯಾಪಾರಿಯೂ ಆಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು 8.71 ಲಕ್ಷ ಕೋಟಿ ರೂಪಾಯಿಗಳ ಆದಾಯದಲ್ಲಿ 39,617 ಕೋಟಿ ರೂಪಾಯಿಗಳ ಅತ್ಯುತ್ತಮ ಲಾಭವನ್ನು ಹೊಂದಿದೆ, ಇದು ಶೇಕಡಾ 4.5 ರ ಮಾರ್ಜಿನ್ ಅನ್ನು ಸೂಚಿಸುತ್ತದೆ ಎಂದು ಇನ್ನೊಬ್ಬ ಅಧಿಕಾರಿಯೊಬ್ಬರು ಹೆಚ್ಚಿನ ಮಾಹಿತಿ ನೀಡಿದ್ದಾರೆ.
APM ಗ್ಯಾಸ್ ಎಂದು ಕರೆಯಲ್ಪಡುವ ಪಾರಂಪರಿಕ ಕ್ಷೇತ್ರಗಳಿಂದ ಉತ್ಪಾದನೆಯು ಮತ್ತು ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಆಹಾರಕ್ಕಾಗಿ ಸರ್ಕಾರವು ಅದರ ಬೆಲೆಯನ್ನು ನಿಯಂತ್ರಿಸುತ್ತದೆ, ಇದು ನೈಸರ್ಗಿಕ ಕುಸಿತದಿಂದಾಗಿ ವಾರ್ಷಿಕವಾಗಿ ಶೇಕಡಾ 5 ರಷ್ಟು ಕುಸಿಯುತ್ತಿದೆ. ಇದು ನಗರಕ್ಕೆ ಪೂರೈಕೆ ಕಡಿತಕ್ಕೆ ಕಾರಣವಾಗಿದೆ. ಅನಿಲ ಚಿಲ್ಲರೆ ವ್ಯಾಪಾರಿಗಳು, ಅಧಿಕಾರಿಗಳು ಹೇಳಿದರು. ಮನೆಯವರು ಪಡೆಯುವ ಪೈಪ್ ಮೂಲಕ ಅಡುಗೆ ಅನಿಲದ ಇನ್ಪುಟ್ ಗ್ಯಾಸ್ ಅನ್ನು ರಕ್ಷಿಸಲಾಗಿದೆ, ಆದರೆ ಸರ್ಕಾರವು CNG ಗಾಗಿ ಕಚ್ಚಾ ವಸ್ತುಗಳ ಪೂರೈಕೆಯನ್ನು ಕಡಿತಗೊಳಿಸಿದೆ.
ಮೇ 2023 ರಲ್ಲಿ ಸಿಎನ್ಜಿ ಬೇಡಿಕೆಯ 90 ಪ್ರತಿಶತವನ್ನು ಪಾರಂಪರಿಕ ಕ್ಷೇತ್ರಗಳಿಂದ ಅನಿಲವು ಪೂರೈಸುತ್ತದೆ. ಭಾರತದೊಳಗೆ ಅರಬ್ಬೀ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೆ ನೆಲದ ಕೆಳಗಿನಿಂದ ಮತ್ತು ಸಮುದ್ರದ ತಳದಿಂದ ಪಂಪ್ ಮಾಡಲಾದ ನೈಸರ್ಗಿಕ ಅನಿಲವು CNG ಯಾಗಿ ವಾಹನಗಳಿಗೆ ಮಾರಾಟ ಮಾಡಲು ಮತ್ತು ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲಕ್ಕೆ ಕಚ್ಚಾ ವಸ್ತುವಾಗಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications