ಕರ್ನಾಟಕದಲ್ಲಿ ಮತ್ತೆ ಕೊರೋನಾ ಸುಳಿದಿರುವ ಸುದ್ದಿ ಹರಿದಾಡುತ್ತಿದೆ. 2025ರ ಆರಂಭದಿಂದ ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ತಿಳಿದುಬರುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 32 ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ತಿಳಿಯಲಾಗಿದೆ. ಇತರ 3 ಪ್ರಕರಣಗಳು ರಾಜ್ಯದ ಬೇರೆ ಭಾಗಗಳಲ್ಲಿ ಕಂಡುಬಂದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಈ ವರೆಗೂ ಯಾವುದೇ ಸಾವಿನ ವರದಿ ಕಂಡುಬಂದಿಲ್ಲದಿದ್ದರೂ, ಕಳೆದ 20 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕ್ರಮೇಣ ಏರಿಕೆಯಾಗುತ್ತಿರುವುದು ಸರ್ಕಾರದ ಗಮನ ಸೆಳೆದಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಕೊರೋನ ಬಗ್ಗೆ ಕಾಳಜಿ ವಹಿಸುವುದು ಹೊಣೆ ಎಂದು ತಿಳಿಸಲಾಗೊದೆ. ಇದರಲ್ಲಿ ಮುಖ್ಯವಾಗಿ ಈ ಕೆಳಗಿನ ಕ್ರಮಗಳು ಒಳಗೊಂಡಿರುತ್ತವೆ:
-ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
-ಮಾಸ್ಕ್ ಧರಿಸುವುದು
-ಕೈ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ
ಇವು ಸಾಮಾನ್ಯ ಆದರೆ ಪರಿಣಾಮಕಾರಿ ಕ್ರಮಗಳು. ಸಾರ್ವಜನಿಕರು ಇದನ್ನು ನಿರ್ಲಕ್ಷ್ಯ ಮಾಡಿದರೆ, ಸೋಂಕು ವಿಸ್ತರಿಸಬಹುದೆಂಬ ಆತಂಕ ವ್ಯಕ್ತವಾಗಿದೆ.
ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು?
ಗರ್ಭಿಣಿಯರು: ಕೊರೊನಾ ವೈರಸ್ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಈ ಗುಂಪು ವಿಶೇಷ ಎಚ್ಚರಿಕೆ ವಹಿಸಬೇಕು.
ಮಕ್ಕಳು: ರೋಗ ನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಮಕ್ಕಳು ಸೋಂಕಿಗೆ ಶೀಘ್ರದಲ್ಲಿ ಒಳಗಾಗಬಹುದಾದ ಗುಂಪು.
ಇಮ್ಯೂನ್-ಕಾಂಪ್ರೊಮೈಸ್ಡ್ ವ್ಯಕ್ತಿಗಳು: ಶಸ್ತ್ರಚಿಕಿತ್ಸೆಯ ನಂತರದ ವ್ಯಕ್ತಿಗಳು, ಕ್ಯಾನ್ಸರ್ ಪೀಡಿತರು, ಎಚ್ಐವಿ ಪೀಡಿತರು ಮೊದಲಾದವರು.
ಕೋ-ಮಾರ್ಬಿಡ್ ಸ್ಥಿತಿಯವರು: ಡಯಬೆಟಿಸ್, ಹೃದಯದ ತೊಂದರೆ, ಶ್ವಾಸಕೋಶದ ಸಮಸ್ಯೆ ಇತ್ಯಾದಿ ಇದ್ದವರು.
ಇವರುಗಳು ಜನಸಂದಣಿಯಿಂದ ದೂರವಿದ್ದು, ಮಾಸ್ಕ್ ಧರಿಸುವುದು, ಸರಿಯಾದ ನೈಸರ್ಗಿಕ ಆಹಾರ ಸೇವನೆ, ದಿನಚರಿ ಪದ್ದತಿಯ ಪಾಲನೆ ಮತ್ತು ಆವಶ್ಯಕತೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ಸಂಕೇತ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ:
ಆರೋಗ್ಯ ಇಲಾಖೆ ತನ್ನ ಸೂಚನೆಯಲ್ಲಿ ವಿಶೇಷವಾಗಿ ಉಲ್ಲೇಖಿಸಿರುವ ವಿಷಯವೆಂದರೆ: Severe Acute Respiratory Illness (SARI) ಅಥವಾ ತೀವ್ರ ಉಸಿರಾಟದ ತೊಂದರೆ ಹೊಂದಿರುವವರು ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಇಂತಹ ಲಕ್ಷಣಗಳಲ್ಲಿ:
ಇನ್ನು ಜ್ವರ ಮತ್ತು ಕೆಮ್ಮು, ನಿಶ್ವಾಸ ತೆಗೆದುಕೊಳ್ಳಲು ಕಷ್ಟ ಎಂಬೆಲ್ಲಾ ಸಮಸ್ಯೆಗಳು ಎದುರಾದರೆ ಗಂಭೀರವಾಗಿ ತೆಗೆದುಕೊಳ್ಳುವುದು. ಇವುಗಳು ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆಗೆ ಹೋಗುವುದು ಮತ್ತು ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಇದು ತಾವು ಹಾಗೂ ಸುತ್ತಲಿನವರ ಆರೋಗ್ಯ ರಕ್ಷಿಸಲು ಸಹಾಯಕವಾಗುತ್ತದೆ.
ಸಾರ್ವಜನಿಕ ಜವಾಬ್ದಾರಿ:
ಸರ್ಕಾರದ ಹೇಳಿಕೆಯ ತೀವ್ರತೆಯನ್ನು ಗಮನಿಸಿದರೆ, ಈ ಸುತ್ತೋಲೆ ಯಾವುದೇ ಗಾಬರಿಯ ಪರಿಸ್ಥಿತಿ ಉಂಟುಮಾಡುವುದು ಅಲ್ಲ. ಆದರೆ, ಇದು ಒಂದು ಎಚ್ಚರಿಕೆ ಘಂಟೆ. ಕೊರೊನಾ ಸೋಂಕು ಶೂನ್ಯವಾಗಿಲ್ಲ ಎಂಬುದನ್ನು ನೆನಪಿಸಬೇಕು. ನಾವು ಎಲ್ಲರೂ ಆರೈಕೆ ಮತ್ತು ಜವಾಬ್ದಾರಿ ಜೊತೆ ವರ್ತಿಸಿದರೆ, ಸೋಂಕನ್ನು ತಡೆಗಟ್ಟುವುದು ಸಾಧ್ಯ.
ಸಾಮಾನ್ಯವಾಗಿ ಕೋವಿಡ್ ಮಿತಿಗೊಳಿಸಲು ಸರ್ಕಾರದಿಂದ ಲಾಕ್ಡೌನ್, ನಿರ್ಬಂಧಗಳು ಅಥವಾ ಸಾಂಸ್ಥಿಕ ಕ್ರಮಗಳು ತೆಗೆದುಕೊಳ್ಳುವ ಮೊದಲು, ಸಾರ್ವಜನಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಮೊದಲ ಹಂತವಾಗಿದೆ. ಈ ಹಂತದಲ್ಲೇ ನಾವು ಎಚ್ಚರಿಕೆಯಿಂದ ನಡೆದುಕೊಂಡರೆ, ಹೆಚ್ಚಿನ ಅಪಾಯವನ್ನು ತಡೆಯಬಹುದು.
ಕೊರೊನಾ ಇನ್ನೂ ಪೂರ್ತಿಯಾಗಿ ಹೋಗಿಲ್ಲ ಎಂಬುದನ್ನು ಈ ಸುದ್ದಿಗೋಷ್ಠಿ ಸ್ಪಷ್ಟಪಡಿಸುತ್ತದೆ. ಸರ್ಕಾರದ ಎಚ್ಚರಿಕೆಯು ಗಂಭೀರವಾಗಿದೆ, ಆದರೆ ಭಯಭೀತಿಯಿಂದ ವರ್ತಿಸದೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಾಸ್ಕ್, ಹೈಜೀನ್, ದೂರವಿರುವ ಕ್ರಮಗಳು ಈಗಲೂ ಪ್ರಸ್ತುತವೆಂದು ನೆನಪಿಸಿಕೊಳ್ಳಬೇಕು. ಸ್ವಚ್ಛತೆಯು ಆರೋಗ್ಯದ ಮೂರ್ತರೂಪ. ನಾವು ಎಚ್ಚರಿಕೆಯಿಂದ ಇದ್ದರೆ, ರಾಜ್ಯದ ಆರೋಗ್ಯವಂತ ಭವಿಷ್ಯವನ್ನು ರೂಪಿಸಬಹುದು. ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಿ, ತಮಗೂ, ಸಮುದಾಯಕ್ಕೂ ರಕ್ಷಣೆಯ ಕವಚ ನೀಡೋಣ.
More From GoodReturns

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications