Rain Alert: ಈ ರಾಜ್ಯದಲ್ಲಿ ಮುಂದಿನ 2 ದಿನ ಭಾರೀ ಮಳೆ! ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಸ್ವಲ್ಪ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ, ಇದೀಗ ದೇಶದಲ್ಲಿ ಮತ್ತೆ ಆರ್ಭಟಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ಕರ್ನಾಟಕದಲ್ಲಿ (Karnataka) ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಳೆದೊಂದು ವಾರದಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ಇದೀಗ ಹೈದರಾಬಾದ್‌ ಹವಾಮಾನ ಇಲಾಖೆ ತೆಲಂಗಾಣಕ್ಕೆ ಮಳೆ ಅಲರ್ಟ್‌ (Rain Alert) ಘೋಷಿಸಿದೆ. ಕಳೆದ ಕೆಲವು ದಿನಗಳಲ್ಲಿ ತೆಲಂಗಾಣ ರಾಜ್ಯದಲ್ಲಿ (Telangana) ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಇದೀಗ ಮತ್ತೆ ಹವಾಮಾನ ಇಲಾಖೆ ಅಲರ್ಟ್‌ ಘೋಷಣೆ ಮಾಡಿದೆ. ನೈಋತ್ಯ ಮಾನ್ಸೂನ್ ಹಲವು ದಿನಗಳ ನಂತರ ರಾಜ್ಯದಿಂದ ಹಿಂತಿರುಗುತ್ತಿದೆ. ಈ ಪರಿಣಾಮ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.

ಈ ರಾಜ್ಯದಲ್ಲಿ ಮುಂದಿನ 2 ದಿನ ಭಾರೀ ಮಳೆ!

ಈ ಜಿಲ್ಲೆಗಳಲ್ಲಿ ವರುಣಾರ್ಭಟ ಶುರು!

ಇನ್ನು ನೈಋತ್ಯ ಮಾನ್ಸೂನ್ ಹಿಂದೆ ಸರಿಯುತ್ತಿರುವ ಹಿನ್ನೆಲೆ ತೆಲಂಗಾಣದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಈ ಹಿನ್ನೆಲೆ, ವಾರಂಗಲ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಹನುಮಕೊಂಡ, ಜನಗಮ, ನಾಗರ್ಕರ್ನೂಲ್, ವನಪರ್ತಿ, ಜೋಗುಳಂಬ ಗಡ್ವಾಲ, ಮೇಡ್ಚಲ್ ಮಲ್ಕಾಜ್ಗಿರಿ, ಭದ್ರದ್ರಿ ಕೊಥಗುಡೆಮ್, ಖಮ್ಮಂ, ನಲ್ಗೊಂಡ, ಸೂರ್ಯಪೇಟೆ, ಮಹಬೂಬಾಬಾದ್, ರಂಗ ರೆಡ್ಡಿ ಮತ್ತು ಹೈದರಾಬಾದ್ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ನೈಋತ್ಯ ಮಾನ್ಸೂನ್‌ಗಳು ದಕ್ಷಿಣ ಭಾರತದಲ್ಲಿ ಮೇ ತಿಂಗಳ ಅಂತ್ಯದ ವೇಳೆ ಬಂದಿದ್ದವು. ಆದ್ರೆ ಸೆಪ್ಟೆಂಬರ್ 20ರ ವೇಳೆಗೆ ಮತ್ತೆ ಉತ್ತರ ಭಾರತದಲ್ಲಿ ಆರ್ಭಟಿಸಲು ಶುರಮಾಡಿತ್ತು. ಆನಂತರ, ಸೆಪ್ಟೆಂಬರ್ 24 ರಿಂದ ಈ ಮಾನ್ಸೂನ್‌ ಕಡಿಮೆಯಾಗಲು ಶುರುವಾಯ್ತು. ಸದ್ಯ ತೆಲಂಗಾಣಕ್ಕೆ ತಲುಪಿದೆ. ಈ ನೈಋತ್ಯ ಮಾನ್ಸೂನ್‌ಗಳು ವಾಪಾಸಾಗುವ ಸಮಯದಲ್ಲಿ ಸಾಮಾನ್ಯವಾಗಿ ಕೆಲವೆಡೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 15ರ ವೇಳೆಗೆ ತೆಲಂಗಾಣದಿಂದ ನೈಋತ್ಯ ಮಾನ್ಸೂನ್‌ಗಳು ಸಂಪೂರ್ಣವಾಗಿ ಕಡಿಮೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಇದೀಗ ಹವಾಮಾನ ಇಲಾಖೆ ಅಲರ್ಟ್‌ ಘೋಷಿಸಿದೆ..

ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ತೆಲಂಗಾಣದಲ್ಲಿ ಸಾಮಾನ್ಯಕ್ಕಿಂತ ಭಾರೀ ಮಳೆಯಾಗಿದೆ ಎಂದು ವರದಿಯಾಗಿದೆ. ಈಗ ನೈಋತ್ಯ ಮಾನ್ಸೂನ್‌ಗಳು ಹಿಂದಕ್ಕೆ ತೆರಳುತ್ತಿದ್ದು, ಅಕ್ಟೋಬರ್‌ನ ಮೂರನೇ ವಾರದಲ್ಲಿ ಮತ್ತೆ ರಾಜ್ಯದಲ್ಲಿ ಈಶಾನ್ಯ ಮಾನ್ಸೂನ್‌ (Northeast Monsoon) ಬರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎನ್ನಲಾಗಿದೆ. ಹೈದರಾಬಾದ್‌ನಲ್ಲಿ ಸದ್ಯ ಯಾವುದೇ ಮಳೆಯ ವಾತಾವರ ಇಲ್ಲ, ಆದರೂ ಮೋಡ ಕವಿದ ವಾತಾವರಣದೊಂದಿಗೆ ಕೆಲವೆಡೆ ಗುಡುಗು-ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಜನರು ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಯಾವುದೇ ಮಳೆ ಅಲರ್ಟ್‌ ಘೋಷಿಸಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ಯಾವುದೇ ಮಳೆ ಸೂಚನೆಗಳಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+