ಜನರಿಗೆ ಈ ಟ್ಯಾಕ್ಸ್ ಕಟ್ಟುವುದೇ ಹೊರೆಯಾಗಿ ಬಿಟ್ಟಿದೆ. ಪ್ರತಿ ವಸ್ತುಗಳನ್ನ ಕೊಂಡಾಗಲೂ ಕೂಡ ಅದರ ಮೇಲೆ ನಾವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಆದಾಯದ ಲೆಕ್ಕಕ್ಕಿಂತ ತೆರಿಗೆಯ ಲೆಕ್ಕವೇ ಹೆಚ್ಚಾದಂತೆ ಕಾಣುತ್ತದೆ. ಹೀಗಿರುವಾಗ ಎಕ್ಸ್ ಖಾತೆಯಲ್ಲಿ ವ್ಯಕ್ತಿವೋರ್ವ ಹಾಕಿದ ಪೋಸ್ಟ್ ಈಗ ಸಕತ್ ವೈರಲ್ ಆಗ್ತಿದೆ. ಅಲ್ಲದೆ ಈ ಪೋಸ್ಟ್ಅನ್ನು ಗಂಭಿರವಾಗಿ ಪರಿಗಣಿಸಿದ ನೆಟ್ಟಿಗರು ಸಾಕಷ್ಟು ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.
ನವೀನ್ ಕೊಪ್ಪರಂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ದೋಸೆ ವ್ಯಾಪಾರಿಯ ಕುರಿತು ಪೋಸ್ಟ್ ಹಾಕಿದ್ದಾರೆ. ಇನ್ನು ಈ ಪೋಸ್ಟ್ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಮನೆ ಹ್ತಿರ ಇರುವ ದೋಸೆ ವ್ಯಾಪಾರಿಯ ಬಗ್ಗೆ ನವೀನ್ ಅವರು ಪೋಸ್ಟ್ ಮಾಡಿದ್ದಾರೆ. ನಮ್ಮ ಪಕ್ಕದ ಮನೆಯ ದೋಸೆ ವ್ಯಾಪಾರಿ ದೋಸೆ ಮಾರಿ ದಿನಕ್ಕೆ 20 ಸಾವಿರ ಗಳಿಸುತ್ತಾನೆ. ಅಂದರೆ ಆತ ತಿಂಗಳಿಗೆ 6 ಲಕ್ಷ ಗಳಿಕೆ ಮಾಡುತ್ತಾನೆ. ಅದರಲ್ಲಿ ಆತನ ಖರ್ಚು ವೆಚ್ಚ ಎಲ್ಲಾ ಕಳೆದು ಆತ ತಿಂಗಳಗೆ 3 ರಿಂದ 3.5 ಲಕ್ಷದವರೆಗೆ ಗಳಿಸುತ್ತಾನೆ. ಆದ್ರೂ ಕೂಡ ಆತ ಒಂದು ರೂಪಯಿಯೂ ಟ್ಯಾಕ್ಸ್ ಕಟ್ಟುವುದಿಲ್ಲ. ಆದ್ರೆ ನಾವು 60 ಸಾವಿರ ದುಡಿದರೆ ಅದರಲ್ಲಿ 10 ಪರ್ಸೆಂಟ್ ತೆರಿಗೆ ಕಟ್ಟಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನು ನವೀನ್ ಕೊಪ್ಪರಂ ಅವರ ಪೋಸ್ಟ್ ಇಂದು ನಟ್ಟಿಗರ ಚರ್ಚೆಗೆ ಎಡೆಮಾಡಿಕೊಟ್ಟದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಉದಾಹರಣೆಯು ಭಾರತದಲ್ಲಿನ ಗಳಿಕೆಯ ಅಸಮಾನತೆಗಳು ಮತ್ತು ತೆರಿಗೆ ಬಾಧ್ಯತೆಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಪೋಸ್ಟ್ ವೈರಲ್ ಆಗ್ತಿದ್ದಂತೆ, ಸ್ವಯಂ ಉದ್ಯೋಗದ ಮಾಡುತ್ತುರುವವರ ಆದಾಯ ಹಾಗ ಅವರು ಕಟ್ಟುತ್ತಿರುವ ತೆರಿಗೆ ಇದೆಲ್ಲದರ ವಿರುದ್ಧ ಸಂಬಳದ ಉದ್ಯೋಗಗಳ ಸವಾಲುಗಳು ಮತ್ತು ಅನುಕೂಲಗಳ ಬಗ್ಗೆ ಇದು ಚರ್ಚೆಗಳನ್ನು ಹುಟ್ಟುಹಾಕಿದೆ.
ನವೀನ್ ಅವರ ಈ ಪೋಸ್ಟ್ನಲ್ಲಿ ತಿಂಗಳಿಗೆ ರೂ.60,000 ಗಳಿಸುವ ಸಂಬಳದ ಉದ್ಯೋಗಿಗೆ ಹೋಲಿಕೆ ಮಾಡಿರುವುದು ಗಮನ ಸೆಳೆದಿದೆ. ಉದ್ಯೋಗಿ ತಮ್ಮ ಆದಾಯದ ಸರಿಸುಮಾರು 10% ಅನ್ನು ತೆರಿಗೆಯಾಗಿ ಪಾವತಿಸಿದರೆ, ಬೀದಿ ವ್ಯಾಪಾರಿಗಳು ತೆರಿಗೆ-ಮುಕ್ತವಾಗಿ ಕಾರ್ಯನಿರ್ವಹಿಸುತ್ತಾರೆ. ನವೀನ್ ಕೊಪ್ಪರಂ, ಈ ಪೋಸ್ಟ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇವರ ಪೋಸ್ಟ್ಗೆ ರೆಬೆಲ್ ಎಂಬ ವ್ಯಕ್ತಿ ಎಕ್ಸ್ ಖಾತೆಯಲ್ಲಿ ಬೇರೆ ಬೇರೆ ವೃತ್ತಿಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾವು ಈ ವಿಚಾರದ ಬ್ಗೆ ಅರಿಯುವ ಮುನ್ನ ನಾವು ಇನ್ನೊಂದು ಕಡೆ ಕೂಡ ಗಮನಹರಿಸಬೇಕಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ವೈದ್ಯರು, ವಕೀಲರು, ಟೀ ಅಂಡಿಯವರು, ಗ್ಯಾರೆಜ್ಗಳು ಇವರ ಬಗ್ಗೆ ಏನು? ಜನರಿಗೆ ಈ ಟ್ಯಾಕ್ಸ್ ಕಟ್ಟುವುದೇ ಹೊರೆಯಾಗಿ ಬಿಟ್ಟಿದೆ. ಪ್ರತಿ ವಸ್ತುಗಳನ್ನ ಕೊಂಡಾಗಲೂ ಕೂಡ ಅದರ ಮೇಲೆ ನಾವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಆದಾಯದ ಲೆಕ್ಕಕ್ಕಿಂತ ತೆರಿಗೆಯ ಲೆಕ್ಕವೇ ಹೆಚ್ಚಾದಂತೆ ಕಾಣುತ್ತದೆ. ಹೀಗಿರುವಾಗ ಎಕ್ಸ್ ಖಾತೆಯಲ್ಲಿ ವ್ಯಕ್ತಿವೋರ್ವ ಹಾಕಿದ ಪೋಸ್ಟ್ ಈಗ ಸಕತ್ ವೈರಲ್ ಆಗ್ತಿದೆ. ಅಲ್ಲದೆ ಈ ಪೋಸ್ಟ್ಅನ್ನು ಗಂಭಿರವಾಗಿ ಪರಿಗಣಿಸಿದ ನೆಟ್ಟಿಗರು ಸಾಕಷ್ಟು ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.
ನವೀನ್ ಕೊಪ್ಪರಂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ದೋಸೆ ವ್ಯಾಪಾರಿಯ ಕುರಿತು ಪೋಸ್ಟ್ ಹಾಕಿದ್ದಾರೆ. ಇನ್ನು ಈ ಪೋಸ್ಟ್ ಸಧ್ಯ ಸಾಮಜಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಮನೆ ಹ್ತಿರ ಇರುವ ದೋಸೆ ವ್ಯಾಪಾರಿಯ ಬಗ್ಗೆ ನವೀನ್ ಅವರು ಪೋಸ್ಟ್ ಮಾಡಿದ್ದಾರೆ. ನಮ್ಮ ಪಕ್ಕದ ಮನೆಯ ದೋಸೆ ವ್ಯಾಪಾರಿ ದೋಸೆ ಮಾರಿ ದಿನಕ್ಕೆ 20 ಸಾವಿರ ಗಳಿಸುತ್ತಾನೆ. ಅಂದರೆ ಆತ ತಿಂಗಳಿಗೆ 6 ಲಕ್ಷ ಗಳಿಕೆ ಮಾಡುತ್ತಾನೆ. ಅದರಲ್ಲಿ ಆತನ ಖರ್ಚು ವೆಚ್ಚ ಎಲ್ಲಾ ಕಳೆದು ಆತ ತಿಂಗಳಗೆ 3 ರಿಂದ 3.5 ಲಕ್ಷದವರೆಗೆ ಗಳಿಸುತ್ತಾನೆ. ಆದ್ರೂ ಕೂಡ ಆತ ಒಂದು ರೂಪಯಿಯೂ ಟ್ಯಾಕ್ಸ್ ಕಟ್ಟುವುದಿಲ್ಲ. ಆದ್ರೆ ನಾವು 60 ಸಾವಿರ ದುಡಿದರೆ ಅದರಲ್ಲಿ 10 ಪರ್ಸೆಂಟ್ ತೆರಿಗೆ ಕಟ್ಟಬೇಕು ಎಂದು ಬರೆದುಕೊಂಡಿದ್ದಾರೆ.
ಇನ್ನು ನವೀನ್ ಕೊಪ್ಪರಂ ಅವರ ಪೋಸ್ಟ್ ಇಂದು ನಟ್ಟಿಗರ ಚರ್ಚೆಗೆ ಎಡೆಮಾಡಿಕೊಟ್ಟದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಉದಾಹರಣೆಯು ಭಾರತದಲ್ಲಿನ ಗಳಿಕೆಯ ಅಸಮಾನತೆಗಳು ಮತ್ತು ತೆರಿಗೆ ಬಾಧ್ಯತೆಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಪೋಸ್ಟ್ ವೈರಲ್ ಆಗ್ತಿದ್ದಂತೆ, ಸ್ವಯಂ ಉದ್ಯೋಗದ ಮಾಡುತ್ತುರುವವರ ಆದಾಯ ಹಾಗ ಅವರು ಕಟ್ಟುತ್ತಿರುವ ತೆರಿಗೆ ಇದೆಲ್ಲದರ ವಿರುದ್ಧ ಸಂಬಳದ ಉದ್ಯೋಗಗಳ ಸವಾಲುಗಳು ಮತ್ತು ಅನುಕೂಲಗಳ ಬಗ್ಗೆ ಇದು ಚರ್ಚೆಗಳನ್ನು ಹುಟ್ಟುಹಾಕಿದೆ.
ನವೀನ್ ಅವರ ಈ ಪೋಸ್ಟ್ನಲ್ಲಿ ತಿಂಗಳಿಗೆ ರೂ.60,000 ಗಳಿಸುವ ಸಂಬಳದ ಉದ್ಯೋಗಿಗೆ ಹೋಲಿಕೆ ಮಾಡಿರುವುದು ಗಮನ ಸೆಳೆದಿದೆ. ಉದ್ಯೋಗಿ ತಮ್ಮ ಆದಾಯದ ಸರಿಸುಮಾರು 10% ಅನ್ನು ತೆರಿಗೆಯಾಗಿ ಪಾವತಿಸಿದರೆ, ಬೀದಿ ವ್ಯಾಪಾರಿಗಳು ತೆರಿಗೆ-ಮುಕ್ತವಾಗಿ ಕಾರ್ಯನಿರ್ವಹಿಸುತ್ತಾರೆ. ನವೀನ್ ಕೊಪ್ಪರಂ, ಈ ಪೋಸ್ಟ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇವರ ಪೋಸ್ಟ್ಗೆ ರೆಬೆಲ್ ಎಂಬ ವ್ಯಕ್ತಿ ಎಕ್ಸ್ ಖಾತೆಯಲ್ಲಿ ಬೇರೆ ಬೇರೆ ವೃತ್ತಿಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾವು ಈ ವಿಚಾರದ ಬ್ಗೆ ಅರಿಯುವ ಮುನ್ನ ನಾವು ಇನ್ನೊಂದು ಕಡೆ ಕೂಡ ಗಮನಹರಿಸಬೇಕಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ವೈದ್ಯರು, ವಕೀಲರು, ಟೀ ಅಂಡಿಯವರು, ಗ್ಯಾರೆಜ್ಗಳು ಇವರ ಬಗ್ಗೆ ಏನು? ಅವರಲ್ಲಿ ಹಲವರು ವಿದೇಶಕ್ಕೆ ಹೋಗುತ್ತಾರೆ. ತಮ್ಮ ಮೆನೆಗಳನ್ನ ನವೀಕರಿಸುತ್ತಾರೆ. ಪ್ರತಿ ಹೊಸ ಹೊಸ ವಾಹನಗಳನ್ನ ಖರೀದಿ ಮಾಡುತ್ತಾರೆ. ಆದ್ರೆ ಅವರೂ ಕೂಡ ಒಂದೇ ಒಂದು ರೂಪಾಯಿ ಕೂಡ ತೆರಿಗೆ ಪಾವತಿ ಮಾಡುವುದಿಲ್ಲ ಹೇಗೆ ಮತ್ತು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬ ಕಲಿ ಎಂಬ ಎಕ್ಸ್ ಖಾತೆಯ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ನವೀನ್ ಅವರ ಅಭಿಪ್ರಾಯವನ್ನ ವಿರೋಧಿಸಿದ್ದಾರೆ. ಅವರು ಕಾರ್ಪೊರೇಟ್ ವಿಮೆಯನ್ನು ಪಡೆಯುವುದಿಲ್ಲ. ಹಾಗೆ ಅವರು ಕಾರು, ಮನೆ, ಬೈಕು ಸಾಲಗಳನ್ನು ಕೂಡ ಪಡೆಯುವುದು ಕಷ್ಟ, ಯಾವುದೇ PF ಅವರಿಗೆ ಸಿಗುವುದಿಲ್ಲ, ಖಚಿತವಾದ ಆದಾಯವಿಲ್ಲ ಜೊತೆಗೆ ಅವರು ಬಹುಶಃ 60 ಸಾವಿರ ಗಳಿಸುವ ಸಾಫ್ಟ್ವೇರ್ ಎಂಜಿನಿಯರ್ ಆದಾಯ ತೆರಿಗೆಗಿಂತ ಹೆಚ್ಚಿನ ಜಿಎಸ್ಟಿಯನ್ನು ಪಾವತಿಸುತ್ತಾರೆ. ಅಲ್ಲದೆ ನಮ್ಮ ದೇಶ ಏನಾದ್ರು ನಡಯುತ್ತಿದೆ ಅದಕ್ಕೆ ಅದಕ್ಕೆ ಕಾರಣ ಇವರುಗಳೇ ಎಂದರು.
ಒಟ್ಟಾರೆ ನವೀನ್ ಕೊಪ್ಪಾರಂ ಅವರ ಪೋಸ್ಟ್ ಈಗಲೂ ಸಾಕಷ್ಟು ಚರ್ಚೆಯಾಗುತ್ತಿದ್ದು, ಕೆಲವರು ಪರವಾಗಿ ಮಾತನಾಡಿದರೆ, ಇನ್ನು ಕೆಲವರು ವಿರೋಧವನ್ನ ವ್ಯಕ್ತಪಡಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications