ಭಾರತದ ಅತೀ ದೊಡ್ಡ ಮೆಟ್ರೋ ಪಾಲಿಟನ್ ನಗರ ಖ್ಯಾತಿಯ ದೆಹಲಿಯಲ್ಲಿ ವಾಯುಮಾಲಿನ್ಯ ಎಷ್ಟು ಗಂಭೀರ ಮಟ್ಟಕ್ಕೇರಿದೆ ಎಂಬುದು ಈಗಾಗಲೇ ಬಹುತೇಕ ಮಂದಿಗೆ ಗೊತ್ತಾಗಿದೆ. ಒಂದೆಡೆ ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಸಾಂಪ್ರದಾಯಿಕ ವಾಹನಗಳ ಸಂಖ್ಯೆ, ಮತ್ತೊಂದೆಡೆ ನಗರದಲ್ಲಿರುವ ಅಥವಾ ಇತರೆ ಕಡೆಗಳಲ್ಲಿರುವ ಭಾರೀ ಕೈಗಾರಿಕೆಗಳ ಅನಿಲ ತ್ಯಾಜ್ಯವು ದೆಹಲಿಯ ಗಾಳಿಯ ಗುಣಮಟ್ಟವನ್ನು ಗಂಭಿರ ಮಟ್ಟಕ್ಕೇರಿಸಿದೆ.
ಒಂದು ಸಮಯದಲ್ಲಿ ದೆಹಲಿಯಲ್ಲಿ ನೆಲೆಸುವ ಜನರ ಸಂಖ್ಯೆ ಹೆಚ್ಚಿದ್ದರೆ ಸದ್ಯ ಒಮ್ಮೆ ನಗರವನ್ನು ಬಿಟ್ಟು ಬೇರೆಡೆಗೆ ಹೋದರೆ ಸಾಕು ಎಂಬ ಮಾತು ಕೇಳಿಬರುತ್ತಿದೆ. ಸದ್ಯ ಇದೇ ರೀತಿಯ ಚರ್ಚೆಗಳು ಪ್ರಸಿದ್ದ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅಥವಾ ಎಕ್ಸ್ನಲ್ಲಿ ನಡೆಯುತ್ತಿದೆ. ಈ ವೇಳೆ ಒಳಕೆದಾರರೊಬ್ಬರು ಭಾರತದ ಮೂರು ಪ್ರಮುಖ ನಗರಗಳನ್ನು ಅವುಗಳ ಅಂಶಗಳಿಂದ ಸಂಯೋಜಿಸಿ, ತಮ್ಮದೇ ಆದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್ನಲ್ಲಿ ತಿಳಿಸಿದ ಬಳಕೆದಾರ ಭಾರತದ ಅದ್ಬುತ ನಗರಗಳಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರಿನ ಹವಾಮಾನವನ್ನು ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈನ ಅದ್ಬುತ ಶಕ್ತಿ, ದೆಹಲಿಯ ಆಧುನಿಕ ಮೂಲಸೌಕರ್ಯ ಮತ್ತು ಬೆಂಗಳೂರಿನ ಆಹ್ಲಾದಕರ ಹವಾಮಾನವನ್ನು ಸಂಯೋಜಿಸುವುದು ಪರಿಪೂರ್ಣ ನಗರ ಪರಿಸರವನ್ನು ಸೃಷ್ಟಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ
ವೈರಲ್ ಆದ ಪೋಸ್ಟ್
ಬಳಕೆದಾರರೊಬ್ಬರ ಈ ಪೋಸ್ಟ್ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದು, ಹೆಚ್ಚು ಹೆಚ್ಚು ಬಳಕೆದಾರರು ಈ ಬಗೆಗಿನ ಚರ್ಚೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಒಂದು ವೈರಲ್ ಪೋಸ್ಟ್ ಮುಂಬೈನ ಆಕರ್ಷಣೆ, ದೆಹಲಿಯ ಮೂಲಸೌಕರ್ಯ ಮತ್ತು ಬೆಂಗಳೂರಿನ ಹವಾಮಾನವನ್ನು ವಿಲೀನಗೊಳಿಸಿದ ಆದರ್ಶ ಭಾರತೀಯ ನಗರದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು. ಅದರಲ್ಲೂ ಹೆಚ್ಚಿನ ಯುವಜನತೆ ಉತ್ಸಾಹಭರಿತ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹಲವರು ಮುಂಬೈನ ಚೆಲುವು, ದೆಹಲಿಯ ಮೂಲಸೌಕರ್ಯ ಮತ್ತು ಬೆಂಗಳೂರಿನ ಹಿತಕರವಾದ ವಾತಾವರಣವನ್ನು ಸಂಯೋಜಿಸುವ ಪರಿಕಲ್ಪನೆಯ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ರಾಮರಾಜ್ಯವನ್ನು ಸೃಷ್ಟಿಸುವ ಸವಾಲುಗಳನ್ನು ಕೂಡ ಹಾಸ್ಯಮಯವಾಗಿ ಸೂಚಿಸಿದರು. ಹೆಚ್ಚು ಹೆಚ್ಚು ಜನರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರರೊಬ್ಬರು, ಅತ್ಯಂತ ಆದರ್ಶ ನಗರದ ಬಗ್ಗೆ ತಮ್ಮದೇ ಆದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ, ಗೋವಾದಂತಹ ಕಡಲತೀರಗಳು ಮತ್ತು ಲಡಾಖ್ ತರಹದ ಭೂದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಹೈದರಾಬಾದ್ನ ಆಹಾರವನ್ನು ಕೊಂಡಾಡಿದ್ದಾರೆ. ಹೆಚ್ಚಿನ ಬಳಕೆದಾರರು ಭಾರತದ ಹಲವು ನಗರಗಳನ್ನು ಹೋಲಿಕೆ ಮಾಡಿದ್ದಾರೆ. ಕೆಲವರು ಭಾರತದ ಅತ್ಯುತ್ತಮ ನಗರವೆಂದು ಅಹಮದಾಬಾದ್ ಎಂದು ಕರೆದರೆ ಇನ್ನೂ ಕೆಲವರು ಗುರ್ಗಾಂವ್ನ ಮೂಲಸೌಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಪರಿಪೂರ್ಣ ನಗರದ ಕಲ್ಪನೆಯು ಎಷ್ಟು ವೈವಿಧ್ಯಮಯ ಮತ್ತು ವೈಯಕ್ತಿಕವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಪರಿಶುದ್ದ ಹವಾಮಾನಕ್ಕೆ ಮೆಚ್ಚುಗೆ
ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರು ನಗರವನ್ನು ಉದ್ಯಾನ ನಗರಿ ಎಂದು ಕರೆಯುತ್ತಾರೆ. ನಗರದೊಳಗೆ ಇರುವ ಅಪಾರ ಸಂಖ್ಯೆ ಮರಗಳು ಹಾಗೂ ಹಲವೆಡೆಗಳಲ್ಲಿ ಕಾಣಸಿಗುವ ಉದ್ಯಾನವನಗಳಿಂದ ಈ ಹೆಸರು ಬಂದಿದೆ. ಸದ್ಯ ಇಲ್ಲಿನ ಪರಿಶುದ್ದ ವಾತಾವರಣವನ್ನು ದೆಹಲಿಯ ವಿಷಕಾರಿ ಗಾಳಿಗೆ ಹಾಸ್ಯದಾಯಕವಾಗಿ ಹೋಲಿಕೆ ಮಾಡಿದ್ದಾರೆ. ಈ ಬಗ್ಗೆ ತಿಳಿಸಿರುವ ಬಳಕೆದಾರರೊಬ್ಬರು ಸದ್ಯ ದೆಹಲಿಯಲ್ಲಿ ಯೋಗಾಭ್ಯಾಸ ಮಾಡುವುದು
ಬೆಂಗಳೂರಿನಲ್ಲಿ ಸಿಗರೇಟು ಸೇದುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹಾಸ್ಯದಾಯಕವಾಗಿ ತಿಳಿಸಿದ್ದಾರೆ. ಸಾಗರ್ ಎಂಬ ಟ್ವಿಟ್ಟರ್ ಬಳಕೆದಾರರು ಈ ರೀತಿ ಬರೆದಿದ್ದಾರೆ. ಸದ್ಯ ಸಾಗರ್ ಅವರ ಟ್ವಿಟ್ಟರ್ ಪೋಸ್ಟ್ ಭಾರೀ ವೈರಲ್ ಸೃಷ್ಟಿಯಾಯಿತು. ಅದರಲ್ಲೂ ಬೆಂಗಳೂರಿನ ಪರಿಶುದ್ದ ವಾತಾವರಣವನ್ನು ದೆಹಲಿಯ ಮಾಲಿನ್ಯಕಾರಿ ಪ್ರದೇಶದೊಂದಿಗೆ ಹೋಲಿಕೆ ಮಾಡುವುದು ಮೂರ್ಖತನವೆಂದು ತಿಳಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಬಳಕೆದಾರರ ಒತ್ತಾಯ
ಕೆಲವು ಬಳಕೆದಾರರು ಹಾಸ್ಯದ ಮೂಲಕ ಧನಾತ್ಮಕವಾಗಿ ಪೋಸ್ಟ್ಗೆ ಪ್ರತಿಕ್ರಿಯಿಸಿದರೆ, ಇತರರು ದೆಹಲಿಯ ಗಾಳಿಯ ಗುಣಮಟ್ಟದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯವನ್ನು ಎದುರಿಸಲು ಹೆಚ್ಚಿನ ಸರ್ಕಾರದ ಗಮನಕ್ಕಾಗಿ ಹೆಚ್ಚುತ್ತಿರುವ ಕರೆ ಇದೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ತಿಳಿಸಿದ್ದಾರೆ. ಭಾರತದ "ಅತ್ಯುತ್ತಮ ನಗರ" ಎಂಬ ಚರ್ಚೆಯು ಆನ್ಲೈನ್ನಲ್ಲಿ ಟ್ರೆಂಡ್ನಲ್ಲಿ ಮುಂದುವರಿದಂತೆ, ದೆಹಲಿಯಲ್ಲಿನ ವಾಯು ಬಿಕ್ಕಟ್ಟು ಒತ್ತುವ ಸಮಸ್ಯೆಯಾಗಿ ಉಳಿದಿದೆ, ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಮತ್ತು ಲಘುವಾದ ಪ್ರತಿಕ್ರಿಯೆಗಳನ್ನು ಪ್ರೇರೇಪಿಸುತ್ತದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications