ಅದಾನಿ ಗ್ರೂಪ್ ಹಲವಾರು ವಂಚನೆಗಳನ್ನು ಮಾಡಿದೆ ಎಂದು ಆರೋಪಿಸಿ ಹಿಂಡನ್ಬರ್ಗ್ ಮಾಡಿದ ವರದಿಯ ಬಳಿಕ ಅದಾನಿ ಎಂಟರ್ಪ್ರೈಸಸ್ನಲ್ಲಿ ಹಲವಾರು ಬೆಳವಣಿಗೆಗಳು ಕಂಡುಬಂದಿದೆ. ಸಂಸ್ಥೆಯ ಷೇರು ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ನಡುವೆ ಅದಾನಿ ಸಂಸ್ಥೆಯೊಂದಿಗೆ ಸಂಬಂಧವನ್ನು ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯಲ್ಲಿ ಡೈರೆಕ್ಟರ್ ಸ್ಥಾನದಲ್ಲಿದ್ದ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಲಂಡನ್ ಮೂಲದ ಎಲಾರಾ ಕ್ಯಾಪಿಟಲ್ ಸಂಸ್ಥೆಯ ನಿರ್ವಾಹಕರಾಗಿ ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ರ 51 ವರ್ಷದ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ನೇಮಕಗೊಂಡಿದ್ದರು. ಆದರೆ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅದಾನಿ ಗ್ರೂಪ್ ಎಫ್ಪಿಒ ಅನ್ನು ಹಿಂಪಡೆಯುವ ಘೋಷಣೆ ಮಾಡಿದ ದಿನವೇ ಲಾರ್ಡ್ ಜೋ ಜಾನ್ಸನ್ ರಾಜೀನಾಮೆ ನೀಡಿದ್ದಾರೆ.
ಭಾರತದ ಕಾರ್ಪೋರೇಟ್ ಸಂಸ್ಥೆಗಳಿಗೆ ಫಂಡ್ ರೈಸ್ ಮಾಡುವ ಬಂಡವಾಳ ಮಾರುಕಟ್ಟೆ ವಹಿವಾಟನ್ನು ನಡೆಸುವ ಸಂಸ್ಥೆಯೇ ಎಲಾರಾ ಆಗಿದೆ. ಎಫ್ಪಿಒನಲ್ಲಿ ಪ್ರಮುಖ ಪಾತ್ರವನ್ನು ಈ ಸಂಸ್ಥೆ ವಹಿಸುತ್ತದೆ. ಸಂಸ್ಥೆಯ ಉತ್ತಮ ನಿರ್ಧಾರವನ್ನು ತಾನು ಗೌರವಿಸುತ್ತೇನೆ, ನಾನು ನನ್ನ ವೈಯಕ್ತಿಕ ಅನುಭವದ ಕೊರತೆಯಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಲಾರ್ಡ್ ಜೋ ಜಾನ್ಸನ್ ತಿಳಿಸಿದ್ದಾರೆ.

ಯುಕೆ ಮಾಜಿ ಪಿಎಂ ಬೋರಿಸ್ ಸಹೋದರ ಹೇಳುವುದೇನು?
"ಲಂಡನ್ ಮೂಲದ ಭಾರತದ ಮೇಲೆ ನಿರ್ದಿಷ್ಟ ಗುರಿ ಹೊಂದಿರುವ ಹೂಡಿಕೆ ಸಂಸ್ಥೆಯಾದ ಎಲಾರಾ ಕ್ಯಾಪಿಟಲ್ಗೆ ನಾವು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕಳೆದ ಜೂನ್ನಲ್ಲಿ ಸೇರ್ಪಡೆಯಾದೆ. ಯುಕೆ-ಭಾರತ ವಹಿವಾಟು ಮತ್ತು ಹೂಡಿಕೆ ಒಪ್ಪಂದಗಳ ಬಗ್ಗೆ ಭರವಸೆಯೊಂದಿಗೆ ಸಂಸ್ಥೆಗೆ ಸೇರ್ಪಡೆಯಾದೆ," ಎಂದು ತನ್ನ ರಾಜೀನಾಮೆ ಪತ್ರದಲ್ಲಿ ಜೋ ಜಾನ್ಸನ್ ಬರೆದಿರುವುದಾಗಿ ಮಾಧ್ಯಮ ವರದಿ ಮಾಡಿದೆ.
"ಕಾನೂನು ಬಾಧ್ಯತೆಗಳಿಗೆ ಸಂಬಂಧಿಸಿ ದೂರು ಮತ್ತು ಇತರೆ ವಿಚಾರಗಳಲ್ಲಿ ನನಗೆ ಎಲಾರಾ ಕ್ಯಾಪಿಟಲ್ನಿಂದ ಭರವಸೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲೇ ನನಗೆ ಈಗ ಈ ಸ್ಥಾನಕ್ಕೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹಣಕಾಸು ನಿಯಂತ್ರಣದ ಪರಿಣತಿ ಇರುವುದು ಅಗತ್ಯ ಎಂದು ತಿಳಿದುಬಂದಿದೆ. ಅದಕ್ಕಾಗಿ ನಾನೀಗ ರಾಜೀನಾಮೆಯನ್ನು ನೀಡಿದ್ದೇನೆ," ಎಂದು ಕೂಡಾ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ಪ್ರಕಾರ ಈ ಲಂಡನ್ ಮೂಲದ ಎಲಾರಾ ಸಂಸ್ಥೆಯ ಆಸ್ತಿ ನಿರ್ವಹಣೆ ಮಾಡುವ ವಹಿವಾಟು ಅದಾನಿ ಗ್ರೂಪ್ ಬಗ್ಗೆ ಯುಎಸ್ ಸಂಸ್ಥೆ ಹಿಂಡನ್ಬರ್ಗ್ ವರದಿ ಮಾಡಿದ ಬಳಿಕ ಮುನ್ನಲೆಗೆ ಬಂದಿದೆ. ಇನ್ನು ಹಿಂಡನ್ಬರ್ಗ್ ವರದಿಯನ್ನು ಅದಾನಿ ಗ್ರೂಪ್ ನಿರಂತರವಾಗಿ ಖಂಡಿಸಿದೆ ಮತ್ತು ಅಲ್ಲಗಳೆದಿದೆ. ಇದು ಭಾರತದ ಮೇಲೆ ಮಾಡಿದ ಆರೋಪ ಎಂದು ಕೂಡಾ ಹೇಳಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications