ನವದೆಹಲಿ, ಜನವರಿ 17: ವಾಣಿಜ್ಯ ಬಳಕೆಗೆ ಡಿ2ಎಂ (ಡೈರೆಕ್ಟ್-ಟು-ಮೊಬೈಲ್) ತಂತ್ರಜ್ಞಾನವು ಲಭ್ಯವಾಗುವುದರಿಂದ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಕೆದಾರರು ಮುಂದಿನ ವರ್ಷದಿಂದ ಇಂಟರ್ನೆಟ್ ಸಂಪರ್ಕವಿಲ್ಲದೆ ತಮ್ಮ ವೈಯಕ್ತಿಕ ಸಾಧನಗಳಲ್ಲಿ ಟಿವಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಕಾರ್ಯದರ್ಶಿ ಅಭಯ್ ಕರಂಡಿಕರ್ ಅವರ ಪ್ರಕಾರ, ತಂತ್ರಜ್ಞಾನವು ಪ್ರಬುದ್ಧ ಹಂತದಲ್ಲಿದ್ದು, ನಗರವಾರು ಪ್ರಯೋಗಗಳನ್ನು ಮಾಡಿದ ನಂತರ ಈ ತಂತ್ರಜ್ಞಾನವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬಹುದು. ಸೆಲ್ಯುಲಾರ್ ನೆಟ್ವರ್ಕ್ಗಳ ಅಗತ್ಯವಿಲ್ಲದೇ ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ವಾಹನ ಸಾಧನಗಳಂತಹ ವೈಯಕ್ತಿಕ ಸಾಧನಗಳಲ್ಲಿ ಡಿ2ಎಂ ಬಳಕೆದಾರರು ಲೈವ್ ಟಿವಿ ವೀಕ್ಷಿಸಬಹುದಾಗಿದೆ ಎಂದು ಹೇಳಿದರು.

"ಈ ಮಾದರಿ ತಂತ್ರಜ್ಞಾನವು ಲಭ್ಯವಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಯೋಗಾಲಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈಗ ನಾವು ನಗರವಾರು ಲ್ಯಾಬ್ ಪ್ರಯೋಗಗಳನ್ನು ಮಾಡಬೇಕಾಗಿದೆ. ಆದ್ದರಿಂದ ಅದರ ಸಾಮರ್ಥ್ಯವನ್ನು ಪ್ರದರ್ಶಿಸಬಹುದು. ಒಂದು ವರ್ಷದಲ್ಲಿ ನಾವು ಈ ತಂತ್ರಜ್ಞಾನವನ್ನು (ಸಾರ್ವಜನಿಕರಿಗೆ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯೊಂದಿಗೆ ಪ್ರಾರಂಭಿಸಬಹುದು" ಎಂದು ಕರಂಡಿಕರ್ ಹೇಳಿದರು.
ಈ ತಂತ್ರಜ್ಞಾನವು ಟೆಲಿಕಾಂ ಆಪರೇಟರ್ಗಳಿಂದ ಡೇಟಾ ಟ್ರಾಫಿಕ್ ಅನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರ ಭಾವಿಸಿದೆ. ಏಕೆಂದರೆ ಅದರ ಹೆಚ್ಚಿನ ಬಳಕೆದಾರರು ವೀಡಿಯೊಗಳನ್ನು ವೀಕ್ಷಿಸಲು ಡೇಟಾವನ್ನು ಬಳಸುತ್ತಾರೆ. ಗ್ರಾಹಕರ ಪ್ರಕಾರ, ಭಾರತೀಯ ಜನಸಂಖ್ಯೆಯ ಒಂದು ಭಾಗವು ಇನ್ನೂ ಕಳಪೆ ಗುಣಮಟ್ಟದ ಸ್ಮಾರ್ಟ್ಫೋನ್ ಅನ್ನು ಬಳಸುತ್ತದೆ ಎಂದು ಎಂದು ಅಂಕಿಅಂಶಗಳು ತಿಳಿಸಿವೆ.
ಆದಾಗ್ಯೂ, ಟೆಲಿಕಾಂ ಆಪರೇಟರ್ಗಳು ಮತ್ತು ಸ್ಮಾರ್ಟ್ಫೋನ್ ತಯಾರಕರು ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಸೇರಿದಂತೆ ಸದಸ್ಯರನ್ನು ಹೊಂದಿರುವ ಸೆಲ್ಯುಲರ್ ಆಪರೇಟರ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಈ ತಂತ್ರಜ್ಞಾನದ ಪರವಾಗಿಲ್ಲ.
ಡೈರೆಕ್ಟ್-ಟು-ಮೊಬೈಲ್ ನೆಟ್ವರ್ಕ್ನ ಕರಡು ನೀತಿ ದಾಖಲೆಯು ಲೆವೆಲ್ ಪ್ಲೇಯಿಂಗ್ ಫೀಲ್ಡ್, ಸ್ಪೆಕ್ಟ್ರಮ್ ಹಂಚಿಕೆ, ನೆಟ್ವರ್ಕ್ ಏಕೀಕರಣ ಮತ್ತು ಪ್ರಸ್ತಾವಿತ ಪಿಪಿಪಿ ಮಾದರಿಯ ಪರವಾಗಿ ಮತ್ತು ಟಿಎಸ್ಪಿಗಳ ವಿರುದ್ಧ ನಿಯಂತ್ರಕ ಮತ್ತು ವೆಚ್ಚದ ಆರ್ಬಿಟ್ರೇಜ್ನ ಅಂಶಗಳ ಮೇಲೆ ಮರು-ಮೌಲ್ಯಮಾಪನ ಅಗತ್ಯವಿದೆ ಎಂದು ಉದ್ಯಮ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications