ಲಾರ್ಸನ್ ಮತ್ತು ಟರ್ಬೊ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯ ಅವರು ನೌಕರರು ಭಾನುವಾರವೂ ಸೇರಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಲಿ ಎಂದಿರುವುದು ಕೆಲಸ-ಜೀವನದ ಸಮತೋಲನದ (life and work balance) ಚರ್ಚೆಗೆ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಅವರ ಹೇಳಿಕೆಯ ಬಗ್ಗೆ ವಾರಕ್ಕೆ 90 ಗಂಟೆಗಳ ಕೆಲಸ' ಎಂಬ ಹೇಳಿಕೆ ಬಗ್ಗೆಅನೇಕ ಗಣ್ಯರು ಕೂಡಾ ಪ್ರತಿಕ್ರಿಯಿಸಿದ್ದು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಬಂಡವಾಳಶಾಹಿಗಳು ನೌಕರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಕೌಂಟರ್ ಕೊಟ್ಟ ಗಣ್ಯರು
ಇವುಗಳಲ್ಲಿ ಸಕತ್ ಆಗಿ ಕೌಂಟರ್ ಕೊಟ್ಟಿರುವುದು ಬಜಾಜ್ ಆಟೋ ಮುಖ್ಯಸ್ಥರಾಗಿರುವ ರಾಜೀವ್ ಬಜಾಜ್. ಮೊದಲಿಗೆ ಬಾಸ್ ಗಳು ವಾರಕ್ಕೆ 90 ಗಂಟೆಗಳ ಕೆಲಸ ಮಾಡುವ ಮೂಲಕ ಸಾಧಿಸಿ ತೋರಿಸಬೇಕು ಎಂದಿದ್ದಾರೆ. ಹೇಳಿಕೆ ನೀಡುವುದು ಸುಲಭ. ಆದರೆ ಹೇಳಿದಂತೆ ನಡೆದುಕೊಳ್ಳುವುದು ಕಷ್ಟ. ಓಡಾಟದ ಸಮಯವನ್ನು ಲೆಕ್ಕ ಹಾಕಿದಾರೆ ಜನರು ಈಗಾಗಲೇ ದಿನಕ್ಕೆ೧೨ ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಸುಬ್ರಮಣಿಯನ್ ಅವರ ಹೇಳಿಕೆಗಳಿಗೆ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಆರ್ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾರವರು, ಕೆಲಸ- ಜೀವನದ ಸಮತೋಲನವು ಒಂದು ಆಯ್ಕೆಯಲ್ಲ, ಅದು ಅಗತ್ಯ. ನಿಮ್ಮ ಕಲ್ಪನೆಯಂತೆ ಭಾನುವಾರವನ್ನು "ಸನ್-ಡ್ಯೂಟಿ" ಎಂದು ಹೆಸರು ಬದಲಿಸಬಹುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ನಿರ್ಧಾರಗಳು ಯಶಸ್ಸಿಗೆ ಅಲ್ಲ, ವಿನಾಶಕ್ಕೆ ಕಾರಣವಾಗುತ್ತವೆ ಎಂದು ಹೇಳಿರುವ ಅವರು "ವರ್ಕ್ ಸ್ಮಾರ್ಟ್ ನಾಟ್ ಸ್ಲೇವ್" ಎಂಬ ಹ್ಯಾಶ್ಟ್ಯಾಗ್ ಅನ್ನು ಕೂಡ ಸೇರಿಸಿದ್ದಾರೆ.
ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈ ಹೇಳಿಕೆ ವಿರೋಧಿಸಿ ಮಾತನಾಡಿದ್ದು, " ವಿದ್ಯಾವಂತರು ಮತ್ತು ಹಿರಿಯ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಸಮತೋಲನವನ್ನು ಕಡೆಗಣಿಸುವುದು ಮತ್ತು ಸಾರ್ವಜನಿಕವಾಗಿ ಲಿಂಗ ತಾರತಮ್ಯದ ಹೇಳಿಕೆಗಳನ್ನು ನೀಡುವುದು ನಿರಾಶಾದಾಯಕ ಮತ್ತು ಅರ್ಥವಾಗದ ಸಂಗತಿ" ಎಂದು ಹೇಳಿದ್ದಾರೆ
ನಟಿ ದೀಪಿಕಾ ಪಡುಕೋಣೆಯೂ " ಇಂತಹ ಉನ್ನತ ಸ್ಥಾನಗಳಲ್ಲಿ ಇರುವ ಜನರು ಇಂತಹ ಹೇಳಿಕೆಗಳನ್ನು ನೀಡುವುದು ಆಘಾತಕಾರಿ. ಮಾನಸಿಕ ಆರೋಗ್ಯ ಮುಖ್ಯ" ಎಂದು ಹ್ಯಾಶ್ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.
ನೆಟಿಜನ್ಗಳ ಪ್ರತಿಕ್ರಿಯೆ
2024 ರಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡರೆ, ವಿಷಕಾರಿ ಕೆಲಸದ ಸಂಸ್ಕೃತಿಯಿಂದಾಗಿ 26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರೈಲ್ ಅವರ ದುರಂತ ಸಾವು " ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ಹೋರಾಟದ ಬಗ್ಗೆ ಭಾರತದಲ್ಲಿ ವ್ಯಾಪಕ ಚರ್ಚೆಗೆ ಹುಟ್ಟುಹಾಕಿತ್ತು.
ಈಗಲೂ ಕೂಡಾ ಉದ್ಯೋಗಿಗಳಿಗೆ ಕೆಲಸ-ಜೀವನ ಸಮತೋಲನ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಬಂಡವಾಳಶಾಹಿಗಳು ಉನ್ನತ ಹುದ್ದೆಯಲ್ಲಿದ್ದವರು ಅನೇಕರು ನಿರಾಕರಿಸುತ್ತಾ ಬಂದಿದ್ದಾರೆ. ಉದ್ಯೋಗಿಗಳ ಬೇಡಿಕೆಗಳನ್ನು ನಿರ್ಲಕ್ಷಿಸುವುದರಿಂದ ಅವರ ಯೋಗಕ್ಷೇಮ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳಲು ಸೋತಂತೆ ಕಾಣುತ್ತದೆ ಎಂದು ನೆಟ್ತಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ನೆಟ್ಟಿಗನು ವ್ಯಂಗ್ಯವಾಗಿ, "ಉದ್ಯೋಗಿಗಳು ಎಷ್ಟು ಸಮಯದವರೆಗೆ ಪರದೆಗಳು ಮತ್ತು ಡೇಟಾ ನಿರ್ವಾಹಕರನ್ನು ನೋಡುತ್ತಿರಬಹುದು?" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೋರ್ವ ನೇರವಾಗಿ ಪ್ರಶ್ನಿಸಿದ್ದು "ನೀವು ಏಕೆ ಬದುಕುತ್ತಿದ್ದೀರಿ? ಈ ಕೆಲಸದ ರಾಶಿಯೊಂದಿಗೆ ಜೀವಿಸಿ.'" ಎಂದು ಹೇಳಿದ್ದಾರೆ. ಇನ್ನು ಕೆಲವರು ಸುಬ್ರಮಣಿಯನ್ ಅವರ ಹೇಳಿಕೆಯೂ" ಲಿಂಗ ತಾರತಮ್ಯದ ಮತ್ತು ಕುಟುಂಬ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದಾರೆ.
ಮತ್ತೋರ್ವ ನೆಟ್ಟಿಗ" ಎಲ್ & ಟಿ ಅಧ್ಯಕ್ಷ ಸುಬ್ರಹ್ಮಣ್ಯನ್ ಅವರ ವೇತನವು ಎಲ್ & ಟಿ ಉದ್ಯೋಗಿಗಳ ಸರಾಸರಿ ವೇತನದ 534.57 ಪಟ್ಟು ಹೆಚ್ಚಾಗಿದೆ. ನನಗೆ ವರ್ಷಕ್ಕೆ 56 ಕೋಟಿ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷರಂತಹ ಎಲ್ಲಾ ಸವಲತ್ತುಗಳನ್ನು ಪಾವತಿಸಿದರೆ, ಭಾನುವಾರವನ್ನು ಮರೆತುಬಿಡಿ, ನಾನು ಕೆಲಸ ಮಾಡಲು ವಾರದಲ್ಲಿ 7 ದಿನಗಳಿಗಿಂತ ಹೆಚ್ಚು ದಿನಗಳನ್ನು ಆವಿಷ್ಕರಿಸುತ್ತೇನೆ" ಎಂದು ವ್ಯಂಗವಾಡಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications