ಸ್ವಉದ್ಯೋಗ ಅಥವಾ ಇಂದಿನ ಟೆಕ್ ಭಾಷೆಯಲ್ಲಿ ಸ್ಟಾರ್ಟಪ್ ಆರಂಭಿಸುವವರಿಗೆ ಬೇಕಾಗಿರು ಮೊತ್ತಮೊದಲು ಉತ್ತಮ ಸಂಕಲ್ಪ. ಇದು ಸಾಹಸಮಯ ಮತ್ತು ಸವಾಲಿನ ಮಾರ್ಗವಾಗಿದ್ದರೂ, ಸರಿಯಾದ ಯೋಜನೆ ಮತ್ತು ಕೆಲಸದಿಂದ ಯಶಸ್ಸು ಸಾಧಿಸಬಹುದು. ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಸ್ಟಾರ್ಟಪ್ ಪರಿಣಿತರು ತಮ್ಮ ಬುದ್ದಿವಂತಿಕೆ, ಕಠಿಣ ಪರಿಶ್ರಮದಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆ ತೋರಿದ್ದಾರೆ. ಅಂಥವರಲ್ಲಿ ಭಾರತದ ದಕ್ಷಿಣದ ನೆಲ್ಲೂರಿನ ಸಂಜಿತ್ ಕೊಂಡ ಕೂಡ ಒಬ್ಬರಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದ ಸಂಜಿತ್ ಕೊಂಡ ಅಲ್ಲಿ BBA ಕೋರ್ಸ್ಗೆ ಸೇರಿದ್ದರು. ಆದರೆ ಕಾರಣಾಂತರಗಳಿಂದ BBA ಕೋರ್ಸ್ ಅನ್ನು ಅರ್ಧದಲ್ಲೇ ತ್ಯಜಿಸಿದ್ದ ಸಂಜಿತ್ ಕೊಂಡ ಇಂದು ಡ್ರಾಪೌಟ್ ಚಾಯ್ವಾಲಾ' ಎಂಬ ಯಶಸ್ವಿ ಸಂಸ್ಥೆಯನ್ನು ರೂಪಿಸಿ, ಮಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿದ್ದಾರೆ.
ಚಹಾದಿಂದ ಮಿಲಿಯನೇರ್ ಆದ ಸಂಜಿತ್ !
ಬಹುಷಃ ಹೆಚ್ಚಿನವರಿಗೆ ಚಹಾದಿಂದ ಮಿಲಿಯನ್ ಡಾಲರ್ ಹಣ ಸಂಪಾದಿಸಬಹುದೇ ಎಂಬ ಮಾತು ಕೇಳಿ ಅಚ್ಚರಿಯಾಗಬಹುದು. ಆದರೆ ಕಠಿಣ ಪರಿಶ್ರಮ ಹಾಗೂ ಮುಂದೆ ಬರಬೇಕೆನ್ನುವ ಅಚಲ ಹಾಗೂ ದೃಢ ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಂಜಿತ್ ಅವರೇ ಪ್ರತ್ಯಕ್ಷ ಸಾಕ್ಷಿ. ಕಾಫಿ ಸಂಸ್ಕೃತಿಗೆ ಹೆಸರುವಾಸಿಯಾದ ನಗರವಾದ ಜಗತ್ತಿನ ಸುಂದರ ನಗರಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ 'ಡ್ರಾಪೌಟ್ ಚಾಯ್ವಾಲಾ' ಎಂಬ ಉದ್ಯಮ ಸ್ಥಾಪಿಸಿ ಇಂದು ನಗರದೆಲ್ಲೆಡೆ ಮನೆಮಾತಾಗಿದ್ದಾರೆ. ಸಂಜಿತ್ ಅವರ ಚಹಾವನ್ನು ಕುಡಿಯಲು ನಗರದೆಲ್ಲೆಡೆಯಿಂದ ಆಗಮಿಸುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ ಸಂಗತಿ.

ಉದ್ಯಮದ ಪರಿಕಲ್ಪನೆ ಹೇಗೆ ಹುಟ್ಟಿಕೊಂಡಿತು?
ಉನ್ನತ ಶಿಕ್ಷಣವನ್ನು ಅರಸಿ ದೂರದ ಮೆಲ್ಬೊರ್ನ್ಗೆ ಸಂಜಿತ್ ತೆರಳಿದ್ದರೂ ಮೆಲ್ಬೋರ್ನ್ನ ಲಾ ಟ್ರೋಬ್ ವಿಶ್ವವಿದ್ಯಾಲಯದಲ್ಲಿ ತಾನು ವಿದ್ಯಾರ್ಜನೆ ಮಾಡುತ್ತಿದ್ದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಅವರ ಜೀವನದಲ್ಲಿ ಮಹತ್ತರ ತಿರುವನ್ನು ನೀಡಿತು. ಈ ಹಿನ್ನೆಲೆಯಲ್ಲಿ ಅಸ್ರಾರ್ನಲ್ಲಿ ಒಬ್ಬ ಸಮರ್ಥ ಹೂಡಿಕೆದಾರರನ್ನು ಪಡೆದುಕೊಂಡ ಸಂಜಿತ್ ಅವರು ಮೆಲ್ಬೊರ್ನ್ನಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದರು. ಇದೇ 'ಡ್ರಾಪೌಟ್ ಚಾಯ್ವಾಲಾ' ಎಂಬ ಯಶಸ್ವಿ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ಇನ್ನು ಮೆಲ್ಬೋರ್ನ್ನಲ್ಲಿ ಕಾಫಿಯ ಜನಪ್ರಿಯತೆ ಸೇರಿದಂತೆ ಸಂಜಿತ್ ಅವರ ಬಾಲ್ಯದಿಂದಲೂ ಚಹಾದ ಮೇಲಿನ ಪ್ರೀತಿಯು ಭಾರತೀಯ ಸಮುದಾಯದಲ್ಲಿ ಕ್ರೇಜ್ ಹುಟ್ಟಿಸಿತು. ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದು, ಅದರಲ್ಲೂ ಮೆಲ್ಬೊರ್ನ್ನಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಇದೇ ಕಾರಣಕ್ಕಾಗಿ ಭಾರತದ ನೈಜ ಕಾಫಿ, ಚಹಾ ಕುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಗ್ರಾಹಕರು ಆಗಮಿಸುತ್ತಾರೆ. ಇದರ ಜೊತೆ ಭಾರತದ ಕಾಫಿ, ಚಹಾದ ಟೇಸ್ಟ್ ನೋಡಲು ಕೂಡ ವಿದೇಶಿಗರ ಆಗಮನವಾಗುತ್ತಿದ್ದು, ಉದ್ಯಮ ಹೆಚ್ಚಿನ ಲಾಭದೆಡೆಗೆ ಸಾಗಿತು.
ನಂತರದ ಬೆಳವಣಿಗೆ ಹೇಗಿತ್ತು?
'ಡ್ರಾಪೌಟ್ ಚಾಯ್ವಾಲಾ' ಪರಿಕಲ್ಪನೆಯು ಸರಳವಾಗಿದ್ದರೂ ಹೆಚ್ಚು ನವೀನತೆಯಿಂದ ಕೂಡಿದೆ. ಸಂಜಿತ್ ಅವರ ಶಾಪ್ನಲ್ಲಿ ಜನಪ್ರಿಯವಾದ 'ಬಾಂಬೆ ಕಟಿಂಗ್' ಮತ್ತು 'ಮಸಾಲಾ ಚಾಯ್' ಸೇರಿದಂತೆ ವಿವಿಧ ರೀತಿಯ ಚಹಾವನ್ನು ನೀಡುವುದರ ಜೊತೆಗೆ ಸಮೋಸಾಗಳ ರುಚಿಯನ್ನು ಕೂಡ ಮೆಲ್ಬೊರ್ನ್ ಜನತೆಗೆ ಉಣಬಡಿಸಲಾಯಿತು. ಮುಖ್ಯವಾಗಿ ಭಾರತೀಯ ಸಮುದಾಯವು ಹೆಚ್ಚಾಗಿ ʻಬಾಂಬೆ ಕಟಿಂಗ್' ಮೇಲೆ ಹೆಚ್ಚಿನ ವ್ಯಾಮೋಹ ತೋರಿಸಿದರೆ ಆಸ್ಟ್ರೇಲಿಯನ್ನರು ಮಸಾಲೆ ಚಹಾದತ್ತ ಹೆಚ್ಚು ಆಕರ್ಷಣೆಗೊಳಗಾಗಿದ್ದಾರೆ. ಈ ಸಾಂಸ್ಕೃತಿಕ ಸಮ್ಮಿಳನವು ಗ್ರಾಹಕರ ನೆಲೆಯನ್ನು ವಿಸ್ತರಿಸಿದೆ. ಅಲ್ಲದೆ ಬ್ರ್ಯಾಂಡ್ ಸುತ್ತಲೂ ವಿಶೇಷ ವಾತಾವರಣ ಸೃಷ್ಟಿಸಿದೆ. ಇನ್ನು ʻಡ್ರಾಪೌಟ್ ಚಾಯ್ವಾಲಾ' ವಿಸ್ತರಿಸಿದಂತೆ ಸಂಸ್ಥೆಯು ಭಾರತದಿಂದ ನೇರವಾಗಿ ಚಹಾವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಈ ಮೂಲಕ ನೈಜತೆಯ ರುಚಿಯನ್ನು ಮತ್ತಷ್ಟು ಬಲಪಡಿಸಿತು.
ಭಾರತೀಯರಿಗೆ ಉದ್ಯೋಗ ನೀಡಿದ ಸಂಜಿತ್!
ಒಂದು ಕಾಲದಲ್ಲಿ ಕಾಲೇಜಿನಿಂದ ಡ್ರಾಪ್ ಔಟ್ ಆಗಿ ಸಂಕಷ್ಟದಲ್ಲಿದ್ದ ಸಂಜಿತ್ ಇಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಅನೇಕರಿಗೆ ಅರೆಕಾಲಿಕ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಶಿಕ್ಷಣದ ಜೊತೆ ಅರೆಕಾಲಿಕ ಉದ್ಯೋಗ ನಿರ್ವಹಿಸುವ ಅನೇಕ ಭಾರತೀಯರ ಪಾಲಿಗೆ ಆರ್ಥಿಕವಾಗಿ ನೆರವಾಗುತ್ತಿದ್ದಾರೆ.
ಆರ್ಥಿಕ ಲಾಭ ಹೇಗಿದೆ?
ಇನ್ನು ಸಂಜಿತ್ ಅವರ ಉದ್ಯಮವು ಅಲ್ಪಾವಧಿಯಲ್ಲೇ ಭಾರೀ ಪ್ರಮಾಣದ ಲಾಭ ಗಳಿಸಿದೆ. ತೆರಿಗೆಗಳು ಮತ್ತು ಓವರ್ಹೆಡ್ ವೆಚ್ಚಗಳನ್ನು ಲೆಕ್ಕಹಾಕಿದ ನಂತರವೂ ಕಂಪನಿಯ ಆದಾಯವು ಮುಂದಿನ ತಿಂಗಳು ಸರಿಸುಮಾರು ಸುಮಾರು ರೂ 5.2 ಕೋಟಿ ತಲುಪುವ ವಿಶ್ವಾಸವನ್ನು ಸಂಜತ್ ಅವರು ನಿರೀಕ್ಷಿಸಿದ್ದಾರೆ. ಹಾಗಾಗಿ ಉದ್ಯಮವು ಭಾರೀ ದೊಡ್ಡ ಯಶಸ್ವಿನತ್ತ ಸಾಗುತ್ತಿದೆ. ಈ ಕ್ಷಿಪ್ರ ಬೆಳವಣಿಗೆಯು ಸಂಜಿತ್ ಮತ್ತು ಅವರ ತಂಡವು ವ್ಯಾಪಾರದಲ್ಲಿ ಹೂಡಿಕೆ ಮಾಡಿರುವ ಉದ್ಯಮಶೀಲತಾ ಮನೋಭಾವ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications