ಯಾವುದೇ ಮೇಲಾಧಾರವಿಲ್ಲದೆ ಆಧಾರ್ ಕಾರ್ಡ್ ಮೂಲಕ ನೀವು ಸಾಲವನ್ನ ಪಡೆಯಬಹುದು. ಹೌದು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮೂಲಕ ನೀವು ಯಾವುದೇ ಮೇಲಾಧಾರವಿಲ್ಲದೆ ಬರೀ ಆಧಾರ್ ಕಾರ್ಡ್ ಮೂಲಕ ಸಾಲವನ್ನ ಪಡೆಯಬಹುದು. ಕೋವಿಡ್ ಸಮಯದಲ್ಲಿ ಸಣ್ಣ ವ್ಯಾಪಾರಿಗಳನ್ನ ಬೆಂಬಲಿಸಲು ಸರ್ಕಾರ ಈ ಯೋಜನೆಯನ್ನ ತಂದಿದೆ. ಈ ಯೋಜನೆ 2020ರಲ್ಲಿ ಆರಂಭಿಸಿದ್ದು, ಸಣ್ಣ ವ್ಯಾಪಾರಿಗಳು ಹಾಗೆ ಬೀದಿಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನ ಜಾರಿ ಮಾಡಲಾಗಿದೆ.
ಈ ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳು ಆಧಾರ್ ಕಾರ್ಡ್ನ ಮೂಲಕ ಯಾವುದೇ ಮೇಲಾಧಾರವಿಲ್ಲದೆ ಸಾಲವನ್ನ ಪಡೆಯಬಹುದು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಬಗ್ಗೆ ತಿಳಿಯಿರಿ
ಈ ಯೋಜನೆ ಆರಂಭದಲ್ಲಿ ವ್ಯಾಪಾರಿಗಳಿಗೆ 10 ಸಾವಿರದವರೆಗೆ ಸಾಲವನ್ನ ನೀಡುತ್ತಿತ್ತು. ಅಲ್ಲದೆ ಸಾಲವನ್ನ ಪಡೆದವರು ಆ ಸಾಲವನ್ನ ಸರಿಯಾದ ಸಮಯಕ್ಕೆ ತೀರಿಸಿದರೆ ಮತ್ತೆ ಅವರು ಮುಂದಿನ ಬಾರಿ 20,000 ಪಡೆಯಬಹುದು. ಆದ್ರೆ ಈ ಬಾರಿ ಈ ಸಾಲದ ಮೊತ್ತವನ್ನ ಏರಿಕೆ ಮಾಡಲಾಗಿದೆ. ಸಾಲದ ಮೊತ್ತವನ್ನ 50,000 ರೂ. ಏರಿಕೆ ಮಾಡಲಾಗಿದೆ.
ಇನ್ನು ಈ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲವನ್ನ ಪಡೆಯಲು ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗಿದೆ. ಸಣ್ಣ ವ್ಯಾಪಾರಿಗಳು ಆಧಾರ್ ಕಾರ್ಡ್ ಬಳಸಿ ಸರ್ಕಾರಿ ಬ್ಯಾಂಕ್ನಲ್ಲಿ ಸಾಲವನ್ನ ಪಡೆಯಬಹುದು. ಈ ಸಾಲವನ್ನು ಪಡೆದವರು 12 ತಿಂಗಳೊಳಗೆ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಈ ಯೋಜನೆಯು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಸಹಾಯ ಮಾಡಲು ಕೈಗೆಟುಕುವ ಸಾಲಗಳನ್ನು ನೀಡುತ್ತದೆ. ಸಾಲಗಳು ಒಂದು ವರ್ಷದ ಅವಧಿ ಮತ್ತು ಸುಲಭವಾದ ಮಾಸಿಕ ಮರುಪಾವತಿಯ ಆಯ್ಕೆಯೊಂದಿಗೆ ಬರುತ್ತವೆ.
ತಮ್ಮ ಸಾಲಗಳನ್ನು ಸಮಯಕ್ಕೆ ಮರುಪಾವತಿ ಮಾಡುವವರು 7% ಬಡ್ಡಿ ಸಬ್ಸಿಡಿಗೆ ಅರ್ಹರಾಗಿರುತ್ತಾರೆ, ಸಕಾಲಿಕ ಮರುಪಾವತಿಯನ್ನು ಉತ್ತೇಜಿಸುತ್ತಾರೆ. ಈ ಯೋಜನೆಯು ಮಾರಾಟಗಾರರನ್ನು ಡಿಜಿಟಲ್ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ, ಕ್ಯಾಶ್ಬ್ಯಾಕ್ನಂತಹ ಹೆಚ್ಚುವರಿ ಪ್ರೋತ್ಸಾಹವನ್ನು ನೀಡುತ್ತದೆ. ಇದಲ್ಲದೆ, ಇದು ಮಾರಾಟಗಾರರ ಸಾಮರ್ಥ್ಯ ನಿರ್ಮಾಣದ ಮೇಲೆ ಕೇಂದ್ರೀಕರಿಸುತ್ತದೆ. ಅವರ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಅವರ ವ್ಯಾಪಾರ ಕಾರ್ಯಾಚರಣೆಗಳನ್ನು ಸುಧಾರಿಸಲು ಅವರಿಗೆ ತರಬೇತಿಯನ್ನು ನೀಡುತ್ತದೆ.
ಈ ಉಪಕ್ರಮದ ಮೂಲಕ, ಸರ್ಕಾರವು ಬೀದಿ ವ್ಯಾಪಾರಿಗಳನ್ನು ಸಬಲೀಕರಣಗೊಳಿಸಲು, ಅವರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಔಪಚಾರಿಕ ಹಣಕಾಸು ವ್ಯವಸ್ಥೆಯಲ್ಲಿ ಅವರನ್ನು ಸಂಯೋಜಿಸುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
1. ಸಾಲದ ಅರ್ಜಿ ಅವಶ್ಯಕತೆಗಳು
ಈ ಯೋಜನೆ ಅರ್ಜಿ ಸಲ್ಲಿಸುವವರು ಮೊದಲು ಈ ಯೋಜನೆಯ ಬಗ್ಗೆ ತಿಳಿದಿರಬೇಕು. ಪ್ರಧಾನ ಮಂತ್ರಿ ಸ್ವಾನಿಧಿ ವೆಬ್ಸೈಟ್ನ ಪ್ರಕಾರ ಸಾಲಗಾರರು ಈ ಸಾಲದ ಅರ್ಜಿಯನ್ನು ತುಂಬಲು ಇದಕ್ಕೆ ಬೇಕಾಗುವ ದಾಖಲೆಗಳ ಬಗ್ಗೆ ತಿಳಿದಿರಬೇಕು.
2. ಮೊಬೈಲ್ ಸಂಖ್ಯೆ ಆಧಾರ್ಗೆ ಲಿಂಕ್ ಆಗಿರಬೇಕು
ನಿಮ್ಮ ಮೊಬೈಲ್ ಸಂಖ್ಯೆಯನ್ ಆಧಾರ್ ಕಾರ್ಡ್ಗೆ ಲಿಂಕ್ ಮಾಡಿರಬೇಕು. ಏಕೆಂದರೆ ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಲು ಇ-ಕೆವೈಸಿ ಅಥವಾ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಸಾಲಗಾರರು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನವನ್ನ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳಿಂದ(ULB) ಶಿಫಾರಸು ಪತ್ರವನ್ನು ಪಡೆಯಬೇಕಾಗುತ್ತದೆ.
ಹಾಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್ಡೇಟ್ ಮಾಡಲು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಹಾಗೆ ಬೇರೆ ಯಾವುದೇ ದಾಖಲೆಗಳ ಅಗತ್ಯ ಇರುವುದಿಲ್ಲ.
3. ಅರ್ಹತೆಯ ಸ್ಥಿತಿಯನ್ನು ಪರಿಶೀಲಿಸಿ
ಈ ಯೋಜನೆ ಮೂಲಕ ಸಾಲವನ್ನು ಪಡೆಯಲು ನೀವು ಅರ್ಹರ ಎಂದು ತಿಳಿದುಕೊಳ್ಳಬೆಕಾಗುತ್ತದೆ. ಈ ಯೋಜನೆ ಮುಖ್ಯವಾಗಿ ನಾಲ್ಕು ಅರ್ಹ ವರ್ಗಗಳನ್ನ ಹೊಂದಿದೆ. ಅರ್ಹತಾ ಮಾನದಂಡಗಳನ್ನ ಪರಿಶೀಲನೆ ಮಾಡಿ ಈ ಮೂಲಕ ಅದಕ್ಕೆ ಅನುಗುಣವಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಮೂರು ಪ್ರಮುಖ ಹಂತಗಳನ್ನ ನೀವು ಅನುಸರಿಸಬೇಕು, ನಂತರ ಪೋರ್ಟಲ್ನಲ್ಲಿ ಅರ್ಜಿ ಪ್ರಕ್ರಿಯೆಯನ್ನು ಆಂಭಿಸಬಹುದು. ಸಾಲವನ್ನ ಪಡೆಯಲು ಇಚ್ಛಿಸುವವರು ನೇರವಾಗಿ ಪೋರ್ಟಲ್ ಅಥವಾ ತಾವಿರುವ ಪ್ರದೇಶದ ಸಮೀಪವಿರುವ ಸಾಮಾನ್ಯ ಸೇವಾ ಕೇಂದ್ರದ(CSC) ಮೂಲಕ ಈ ಅರ್ಜಿಯನ್ನ ಸಲ್ಲಿಸಬಹುದು.
ಬಡ್ಡಿ ದರ
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು (RRB), ಸಣ್ಣ ಹಣಕಾಸು ಬ್ಯಾಂಕ್ಗಳು (SFB), ಸಹಕಾರಿ ಬ್ಯಾಂಕ್ಗಳು ಮತ್ತು ನಿಗದಿತ ವಾಣಿಜ್ಯ ಬ್ಯಾಂಕ್ಗಳ ಬಡ್ಡಿದರಗಳು ದರಗಳಂತೆಯೇ ಇರುತ್ತವೆ. ಎನ್ಬಿಎಫ್ಸಿ, ಎನ್ಬಿಎಫ್ಸಿ-ಎಂಎಫ್ಐ ಇತ್ಯಾದಿಗಳ ಬಡ್ಡಿದರಗಳು ಆಯಾ ಸಂಸ್ಥೆಗಳಿಗೆ ತಕ್ಕಂತೆ ಹಾಗು ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಬಡ್ಡಿದರಗಳು ಇರುತ್ತದೆ. MFI ಗಳು (NBFC ಅಲ್ಲದ) ಮತ್ತು RBI ಮಾರ್ಗಸೂಚಿಗಳ ಅಡಿಯಲ್ಲಿ ಬಾರದ ಇತರ ಸಾಲದಾತ ವರ್ಗಗಳಿಗೆ, NBFC-MFI ಗಳಿಗೆ ಅಸ್ತಿತ್ವದಲ್ಲಿರುವ RBI ಮಾರ್ಗಸೂಚಿಗಳ ಪ್ರಕಾರ ಯೋಜನೆಯ ಅಡಿಯಲ್ಲಿ ಬಡ್ಡಿದರಗಳು ಇರುತ್ತದೆ.


Click it and Unblock the Notifications