ಬೆಂಗಳೂರು, ಮಾರ್ಚ್ 26: ಕೆಲವರಿಗೆ ಕೂತು ತಿಂದರೂ ದುಡ್ಡು ಕರಗೋದಿಲ್ಲ, ಆದರೆ ಬಡವನಿಗೆ ದುಡಿದು ಬರದೇ ಇದ್ದರೆ ಆ ದಿನ ಒಂದು ಹೊತ್ತಿನ ಗಂಜಿ ಕೂಡ ಸಿಗುವುದಿಲ್ಲ. ಹೀಗೆ ಶ್ರಮ ಜೀವಿಗಳು ಕಷ್ಟಪಟ್ಟು ತಮ್ಮ ರಕ್ತ ಬಸಿದು, ಬೆವರು ಹರಿಸುತ್ತಾ ಒಂದೊಂದು ರೂಪಾಯಿ ಕೂಡಿ ಇಡುತ್ತಾರೆ. ಅದರಲ್ಲೂ ಪ್ರತಿ ನೌಕರ ಕೂಡ ತನ್ನ ನೌಕರರ ಭವಿಷ್ಯ ನಿಧಿ ಎಂದರೆ ಇಪಿಎಫ್ಒ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಈಗ ಭರ್ಜರಿ ಸುದ್ದಿಯು ಹೊರಬಿದ್ದಿದೆ.
ಅಷ್ಟಕ್ಕೂ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್ಒ) 2024 ರ ಜನವರಿಯಲ್ಲಿ 16.02 ಲಕ್ಷ ಚಂದಾದಾರರು ಸೇರ್ಪಡೆ ಆಗಿದ್ದಾರೆ. ಜನವರಿ ತಿಂಗಳಲ್ಲೇ, ಸುಮಾರು 8.08 ಲಕ್ಷ ಸದಸ್ಯರು ಮೊದಲ ಬಾರಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇದೀಗ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಮೂಲಕ ಭಾರತದ ಇಪಿಎಫ್ಒ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ, ಸದ್ದು ಕೂಡ ಮಾಡಿದೆ. ಹಾಗಾದರೆ, ಈಗ ಇಪಿಎಫ್ಒಗೆ ಸೇರ್ಪಡೆ ಆಗಿರುವವರ ವಯಸ್ಸು ಎಷ್ಟಿರಬಹುದು ಎಂಬ ಬಗ್ಗೆ ಮಾಹಿತಿ ನಿಮಗೆ ತಿಳಿದಿದೆಯೇ?

ಯುವಕರಿಗೆ ಹೆಚ್ಚಿನ ಉದ್ಯೋಗ ಸಿಕ್ಕಿದೆ!
ಈಗ 18ರಿಂದ 25 ರ ವಯೋಮಾನದವರ ನೋಂದಣಿಯು, ಸೇರ್ಪಡೆಗೊಂಡ ಹೊಸ ಸದಸ್ಯರಲ್ಲಿ ಶೇ 56 ರಷ್ಟು ಇದೆ. ಈ ಮೂಲಕ ಹೆಚ್ಚಿನ ಯುವ ಜನರು ಕೆಲಸಕ್ಕೆ ಸೇರ್ಪಡೆ ಆಗುತ್ತಿರುವುದು ಈ ಅಂಕಿ & ಅಂಶದಿಂದ ಗೊತ್ತಾಗುತ್ತದೆ. ಅಂದಾಜು 12.17 ಲಕ್ಷ ಸದಸ್ಯರು 'EPFO' ದಿಂದಲೇ ಹೊರ ನಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಂತರ ಅವರು, ಮರು ಸೇಪರ್ಡೆ ಆಗಿದ್ದಾರೆ ಎಂದು ವೇತನದಾರರ ಅಂಕಿ & ಅಂಶ ಮಾಹಿತಿ ತಿಳಿಸಿದೆ. 8.08 ಲಕ್ಷ ಹೊಸ ಸದಸ್ಯರ ಪೈಕಿ ಒಟ್ಟು 2.05 ಲಕ್ಷ ಮಹಿಳೆಯರು ಇದ್ದಾರೆ ಎಂಬುದು ಮತ್ತೊಂದು ಪ್ರಮುಖ ವಿಚಾರವಾಗಿದೆ.
ಕೇಂದ್ರ ಸರ್ಕಾರದಿಂದ ಬೆಂಬಲ
ಮತ್ತೊಂದು ಕಡೆ ಉದ್ಯಮವಾರು ಮಾಸಿಕ ಅಂಕಿ ಅಂಶ ತಯಾರಿಕೆ, ಮಾರುಕಟ್ಟೆ ಸೇವೆ ಸೇರಿದಂತೆ, ಆಸ್ಪತ್ರೆ ಇತ್ಯಾದಿ ಕೆಲಸದಲ್ಲಿ ತೊಡಗಿದವರ ವಿವರ ನೀಡುತ್ತಿದೆ. ಒಟ್ಟು ಸದಸ್ಯತ್ವದಲ್ಲಿ, ಸುಮಾರು ಶೇ 40.71 ರಷ್ಟು ಪರಿಣತ ಸೇವೆಗಳನ್ನ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಮೂಲಕ ದೇಶ ಹೊಸ ಬದಲಾವಣೆ ಕಾಣುತ್ತಿದ್ದು, ಇಪಿಎಫ್ಒ ನೋಂದಣಿ ಸಂಖ್ಯೆ ಕೂಡ ದಾಖಲೆ ಪ್ರಮಾಣದ ಏರಿಕೆಯನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ಕೂಡ ನೌಕರರ ಭವಿಷ್ಯ ನಿಧಿಗೆ ಒತ್ತು ನೀಡುತ್ತಿದೆ.
ನೌಕರರು ಕೂಡ ತಮ್ಮ ಜೀವನ ಪೂರ್ತಿ ದುಡಿದು ಸಂಗ್ರಹಿಸಿದ ಹಣದಿಂದ, ತಮ್ಮ ನಿವೃತ್ತಿಯ ಜೀವನ ಸುಖಕರವಾಗಿ ಇರಲಿ ಎಂದು ಆಶಿಸುತ್ತಿದ್ದಾರೆ. ಅವರ ಈ ಆಶಯಕ್ಕೆ ಇಪಿಎಫ್ಒ ಸಂಸ್ಥೆ ಕೂಡ ಬೆಂಬಲ ನೀಡುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡ ನೌಕರರ ನಿವೃತ್ತಿ ಜೀವನಕ್ಕಾಗಿ, ಅಗತ್ಯ ಇರುವ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications