ಬೆಂಗಳೂರು ಜನತೆಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ಒಂದನ್ನು ನೀಡಿದೆ. ದಿನನಿತ್ಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಜನರ ಪರದಾಟಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಗರಕ್ಕೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವತ್ತ ರೈಲ್ವೆ ಇಲಾಖೆ ಚಿತ್ತ ಹರಿಸಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನೇರ ರೈಲ್ವೆ ಸಂಪರ್ಕ ಕಲ್ಪಿಸುವ ಮೊದಲು, ಕೆಲವು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಆ ಸಮಸ್ಯೆಗಳನ್ನು ಬಗೆಹರಿಸಲು ರೈಲ್ವೆ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಜನ ಸಾಮಾನ್ಯರು ಪ್ರಸ್ತುತ ನಮ್ಮ ಮೆಟ್ರೋ, ಬಸ್ ಹಾಗೂ ಕೆ-ರೈಡ್ ಮೂಲಕ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಹೊರತುಪಡಿಸಿ ನೇರ ರೈಲು ಸೇವೆಗಳನ್ನು ಬಳಸಿಕೊಂಡು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲು ನಮ್ಮ ಈ ಯೋಜನೆ ಅನುವು ಮಾಡಿಕೊಡಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಕೆಲವು ತಾಂತ್ರಿಕ ಸವಾಲುಗಳನ್ನು ಪರಿಗಣಿಸಿದ್ದಾರೆ. ಅಲ್ಲದೇ ಅದು 40-45 ನಿಮಿಷಗಳಿಂದ ಕೂಡಿದ ಆರಾಮದಾಯಕ ಪ್ರಯಾಣವಾಗಿತ್ತು. ಆದರೂ ಕೂಡ ಜನರು ರೈಲಿನ ಮುಖಾಂತರ ನೇರವಾಗಿ ವಿಮಾನ ನಿಲ್ದಾಣ ತಲುಪುವ ಸೇವೆ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ.
ಇನ್ನು ಈ ನೂತನ ರೈಲು ಸೇವೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ಟ್ರಾಫಿಕ್ ಹಬ್ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿಗೆ ಈ ಯೋಜನೆ ನಿಜಕ್ಕೂ ಫಲಕಾರಿಯಾಗಲಿದೆ.


Click it and Unblock the Notifications