ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಬರುವ EPS-95 ಪಿಂಚಣಿದಾರರ ಕನಿಷ್ಠ ಪೆನ್ಷನ್ ಹಣವನ್ನು ಹೆಚ್ಚಿಸಬೇಕೆಂಬ ಬೇಡಿಕೆ, ಇದೀಗ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಮತ್ತೆ ಮುನ್ನೆಲೆಗೆ ಬಂದಿದೆ. ಡಿಸೆಂಬರ್ 1, 2025 ರಂದು ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರವಾಗಿ, ಸರ್ಕಾರವು EPS-95 ಯೋಜನೆಯಡಿ ಪಿಂಚಣಿ ಹೆಚ್ಚಳ ಮತ್ತು ತುಟ್ಟಿ ಭತ್ಯೆ (DA) ಕುರಿತು ತನ್ನ ನಿಲುವೇನು ಎಂಬುದನ್ನು ಮತ್ತೆ ಸ್ಪಷ್ಟಪಡಿಸಿದೆ.

ಸಂಸದ ಬಾಲ್ಯಾ ಮಾಮಾ ಸುರೇಶ್ ಗೋಪಿನಾಥ್ ಮ್ಹಾತ್ರೆ ಅವರು ಪ್ರಸ್ತುತ 1,000 ರೂಪಾಯಿಗಳ ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಏರಿಕೆ ಮಾಡುವುದರ ಬಗ್ಗೆ ಸರ್ಕಾರದ ಚಿಂತೆ ಏನು ಎಂದು ಪ್ರಶ್ನಿಸಿದ್ದರು. ಈ ಬೇಡಿಕೆಯನ್ನು ದೇಶಾದ್ಯಂತ ಲಕ್ಷಾಂತರ ಪಿಂಚಣಿದಾರರು ಹಲವು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಮುಂದಿಡುತ್ತಿದ್ದಾರೆ. ಆದ್ದರಿಂದ ಇದೀಗ ಸಂಸತ್ನಲ್ಲೂ ಪ್ರಶ್ನೆ ಎತ್ತಿದರು
EPS-95 ಎಂದರೇನು?
EPS-95 ಯೋಜನೆ ಎಂದರೆ, ಭಾರತದ ಖಾಸಗಿ ಮತ್ತು ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ನೀಡಲಾಗುವ ಅತಿ ದೊಡ್ಡ ಪಿಂಚಣಿ ಯೋಜನೆಯಾಗಿದೆ. ಇದು ಸದ್ಯ 80 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರನ್ನು ಒಳಗೊಂಡಿದೆ. 1995 ರಲ್ಲಿ ಪರಿಚಯಿಸಲಾದ ಈ ಯೋಜನೆಯು ಉತ್ತಮ ಕೊಡುಗೆ ಹಾಗೂ ನಿಶ್ಚಿತ ಲಾಭದ ಸಾಮಾಜಿಕ ಭದ್ರತಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ನಿಧಿ ಸಂಗ್ರಹಕ್ಕಾಗಿ ಇಪಿಎಫ್ಒ ಉದ್ಯೋಗದಾತರಿಂದ ನೌಕರರ ವೇತನದ 8.33% ಮತ್ತು ಕೇಂದ್ರ ಸರ್ಕಾರದಿಂದ (15,000 ರೂ. ವೇತನದ ಮಿತಿಯವರೆಗೆ) 1.16% ರಷ್ಟು ದೇಣಿಗೆಗಳನ್ನು ಪಡೆಯುತ್ತದೆ. ವೃದ್ಧಾಪ್ಯದಲ್ಲಿ, ನಿವೃತ್ತಿ ಸಮಯದಲ್ಲಿ ಆರ್ಥಿಕ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಗಿದೆ. 2014 ರಲ್ಲಿ 1000 ರೂ. ನೀಡುವಂತೆ ನಿಗದಿಯಾಗಿದ್ದರೂ, ಹೆಚ್ಚುತ್ತಿರುವ ಬೆಲೆಗಳು, ಜೀವನ ವೆಚ್ಚ ಮತ್ತು ಹಣದುಬ್ಬರದಿಂದಾಗಿ ಸಾಕಾಗುತ್ತಿಲ್ಲ ಎಂದು ಪಿಂಚಣಿದಾರರು ದೂರುತ್ತಿದ್ದಾರೆ.
ಸುಮಾರು ಒಂದು ದಶಕದಿಂದ, EPS-95 ಪಿಂಚಣಿದಾರರ ಸಂಘಟನೆಗಳು ನಿರಂತರವಾಗಿ ಪಿಂಚಣಿಯನ್ನು 7,500 ರೂ.ನಿಂದ 9,000 ರೂ.ಗೆ ಹೆಚ್ಚಿಸಲು, ನಿಯಮಿತ ತುಟ್ಟಿ ಭತ್ಯೆ ನೀಡಲು, ಹೆಚ್ಚಿನ ಪಿಂಚಣಿ ಸೌಲಭ್ಯಗಳನ್ನು ಒದಗಿಸುವಂತೆ ಬೇಡಿಕೆ ಇಡುತ್ತಲೇ ಇದೆ..
ಸಂಸದರು ಕೇಳಿದ ಪ್ರಮುಖ ಪ್ರಶ್ನೆಗಳೆಂದರೆ:
ಸರ್ಕಾರವು ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸಲು ಯೋಜಿಸುತ್ತಿದೆಯೇ? ಇಲ್ಲದಿದ್ದರೆ ಏಕೆ? ಹಣದುಬ್ಬರ ಹೆಚ್ಚಿದ್ದರೂ EPS-95 ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಏಕೆ ನೀಡುತ್ತಿಲ್ಲ? ಪಿಂಚಣಿ ಮೊತ್ತವನ್ನು ಜೀವನಕ್ಕೆ ಯೋಗ್ಯವಾಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆಯೇ? ಪಿಂಚಣಿದಾರರ ಬೇಡಿಕೆಗಳನ್ನು ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆಯೇ? ಹಾಗಿದ್ದರೆ, ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯಿಸಿ, ಯೋಜನೆಯ ಆರ್ಥಿಕ ಅಡೆತಡೆಗಳ ಕುರಿತು ವಿವರವಾದ ಉತ್ತರ ನೀಡಿದರು. ಸದ್ಯಕ್ಕೆ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಿದರು.
More From GoodReturns

Central Govt: ಇನ್ಮೇಲೆ ವಾಹನ ವರ್ಗಾಯಿಸುವುದು ಮತ್ತಷ್ಟು ಸುಲಭ? ಕೇಂದ್ರದಿಂದ ಮಹತ್ವದ ಕ್ರಮ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications