ಎಸ್ಬಿಐ ಗ್ರಾಹಕರಿಗೆ (SBI Customers) ಗುಡ್ ನ್ಯೂಸ್! ಇದೀಗ ಭಾರತದ ನಂಬರ್ ಒನ್ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಇನ್ಮೇಲೆ ಎಲ್ಲಾ ಶಾಖೆಗಳಲ್ಲಿ 2026 ಮಾರ್ಚ್ ಒಳಗಡೆ ಏಕರೂಪದ ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಇದು ಬ್ಯಾಂಕ್ನ ಹಲವು ಸೇವೆಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಗ್ರಾಹಕರು ಇನ್ಮೇಲೆ ಒಮ್ಮೆ ಕೆವೈಸಿ ಪ್ರಕ್ರಿಯೆಯನ್ನು (KYC Update) ಪೂರ್ಣಗೊಳಿಸಿದ್ರೆ, ನಂತರ ಯಾವುದೇ ಸಾಲ ಅಥವಾ ಹೂಡಿಕೆ ಸೇವೆಗಳನ್ನು ಪಡೆಯಬೇಕೆಂದರೆ ಮತ್ತೆ ಮತ್ತೆ ಪರಿಶೀಲನೆ ನಡೆಸಬೇಕಾಗಿಲ್ಲ.

SBI ಅಧ್ಯಕ್ಷ ಸಿ.ಎಸ್. ಶೆಟ್ಟಿ ಅವರು ಬ್ಯಾಂಕಿನ ಎರಡನೇ ಹಣಕಾಸು ವರ್ಷದ ಫಲಿತಾಂಶಗಳನ್ನು ಪ್ರಕಟಿಸುವ ಸಂದರ್ಭದಲ್ಲಿ, "ನಾವು KYC ಅನ್ನು ಸೇವೆಯಾಗಿ ಒದಗಿಸುತ್ತೇವೆ" ಎಂದು ಹೇಳಿದ್ದಾರೆ. ವಂಚನೆಯನ್ನು ತಡೆಗಟ್ಟಲು ಮತ್ತು ಗ್ರಾಹಕರ ಡೇಟಾವನ್ನು ಅಪ್ಡೇಟ್ ಮಾಡಲು KYC ಅತ್ಯಗತ್ಯವಾಗಿದ್ದರೂ, ಇದು ತುಂಬಾ ಕಷ್ಟಕರ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ KYC ಪ್ರಕ್ರಿಯೆಯನ್ನು ಸರಳಗೊಳಿಸಲು ಎಸ್ಬಿಐ ನಿರ್ಧರಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ವಿಶೇಷವಾಗಿ ಮೂಲ ಮತ್ತು ಜನ ಧನ ಖಾತೆಗಳ ದೊಡ್ಡ ಪ್ರಮಾಣದ ಗ್ರಾಹಕರಿಗೆ ಆಗಾಗ ಕೆವೈಸಿ ಅಪ್ಡೇಟ್ ಮಾಡುತ್ತಿರಬೇಕು. ಆದರೆ ಇದರಿಂದ ಬಳಕೆದಾರರಿಗೂ ತುಂಬಾನೇ ತೊಂದರೆಯಾಗುತ್ತಿತ್ತು ಮತ್ತು ಕೆಲವೊಮ್ಮೆ ಖಾತೆ ನಿರ್ಬಂಧಗಳಿಗೆ ಕಾರಣವಾಗುತ್ತಿತ್ತು. ಅಲ್ಲದೇ ಸದ್ಯ SBI ಗ್ರಾಹಕರು ಹೊಸ ಸೇವೆ ಪಡೆದಾಗಲೆಲ್ಲಾ KYC ಪ್ರಕ್ರಿಯೆಯನ್ನು ಅಥವಾ ಮರು-KYC ಅಪ್ಡೇಟ್ ಮಾಡಬೇಕು. ಆದ್ರೆ ಇನ್ಮೇಲೆ ಈ ಸಮಸ್ಯೆ ಇರಲ್ಲ ಎಂದು ಎಸ್ಬಿಐ ಹೇಳಿದೆ.
"ಆದ್ದರಿಂದ ಎಸ್ಬಿಐನಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದೆ ದೊಡ್ಡ ತೊಡಕಾಗಿದೆ. ಅದರಲ್ಲೂ SBI ನಲ್ಲಿ ಮಾತ್ರ 15 ವಿಭಿನ್ನ ರೀತಿಯಲ್ಲಿ KYC ಮಾಡಲಾಗುತ್ತದೆ ಎಂದು ನಾವು ಅರಿತುಕೊಂಡಿದ್ದೇವೆ. ಆದ್ದರಿಂದ, ನಾವು ನಮ್ಮದೇ ಪ್ರಕ್ರಿಯೆಗಳನ್ನು ಪರಿಷ್ಕರಿಸಲು ಮತ್ತು ಸುಧಾರಿಸಲು ಬಯಸಿದ್ದೇವೆ." ಎಂದು ಶೆಟ್ಟಿ ವಿವರಿಸಿದರು.
ಈ KYC ಸುಧಾರಣೆಯು SBI ಯ 'ಪ್ರಾಜೆಕ್ಟ್ ಸರಳ್' (Project Saral) ಎಂಬ ವಿಶಾಲ ಯೋಜನೆ ಅಡಿಯಲ್ಲಿ ಬರಲಿದೆ ಎಂದು ಹೇಳಲಾಗಿದೆ.
"YONO 2.0" ಬಿಡುಗಡೆಗೆ ಸಜ್ಜು
ಇನ್ನು ಎಸ್ಬಿಐ ಬ್ಯಾಂಕ್ನ ಡಿಜಿಟಲ್ ಅಪ್ಲಿಕೇಶನ್ನ ಎರಡನೇ ವರ್ಷನ್ ಆಗಿರುವ 'ಯೋನೊ 2.0' ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿ.ಎಸ್ ಶೆಟ್ಟಿ ಹೇಳಿದ್ದಾರೆ. "ಪ್ರಸ್ತುತ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ನಾವು ಗುರಿ ಹೊಂದಿದ್ದೇವೆ. ಯಾವುದೇ ಸಮಸ್ಯೆಗಳು ಎದುರಾಗದಿದ್ದರೆ, ಈ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುತ್ತೇವೆ" ಎಂದು ಹೇಳಿದರು. ಹೊಸ ಅಪ್ಲಿಕೇಶನ್ ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ ಎನ್ನಲಾಗಿದೆ.
ಈಗಾಗಲೇ ಬ್ಯಾಂಕ್ 9.3 ಕೋಟಿ ಮೊಬೈಲ್ ಬ್ಯಾಂಕಿಂಗ್ ಗ್ರಾಹಕರು ಮತ್ತು 10 ಕೋಟಿ ಇಂಟರ್ನೆಟ್ ಬ್ಯಾಂಕಿಂಗ್ ಗ್ರಾಹಕರನ್ನು ಹೊಂದಿದೆ. ಕೆಲವರು ಎರಡನ್ನೂ ಬಳಸುತ್ತಿದ್ದರೂ, ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ ಸಾಮಾನ್ಯ ಅನುಭವವನ್ನು ನೀಡುವುದು ಇದರ ಹಿಂದಿನ ಉದ್ದೇಶ ಎಂದು ಶೆಟ್ಟಿ ಹೇಳಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications