ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ: ಹೊಸ ಆಡಳಿತ ಪರಿಷ್ಕರಣೆ..BBMP ಪುನರ್ ರಚನೆಗೆ ಚಿಂತನೆ..!

ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ, ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಮಂಡಿಸಿದ್ದಾರೆ. ರಾಜಧಾನಿ ಬೆಂಗಳೂರು ನಗರವನ್ನು ಮತ್ತಷ್ಟು ಸಮರ್ಥವಾಗಿ ಆಡಳಿತ ನಡೆಸುವ ಉದ್ದೇಶದಿಂದ, ಈ ಮಸೂದೆಯನ್ನು ಮಂಡಿಸಲಾಗಿದೆ. ಅವರು ಹೇಳಿರುವ ಪ್ರಕಾರ ಈ ಮಸೂದೆ ಅಧಿಕಾರ ವಿಕೇಂದ್ರೀಕರಣದ ಮೂಲಕ ನಗರ ಆಡಳಿತವನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ. ಮತ್ತು ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲು ಸಹಾಯ ಮಾಡಲಿದೆ.

ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ: ಹೊಸ ಆಡಳಿತ ಪರಿಷ್ಕರಣೆ..!

ಮಸೂದೆಯ ಪ್ರಮುಖ ಅಂಶಗಳು:

ಮೇಯರ್ ಮತ್ತು ಉಪಮೇಯರ್ ಅವಧಿ:

ಈ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಪ್ರಕಾರ, ಮೇಯರ್ ಮತ್ತು ಉಪಮೇಯರ್‍‌ಗಳ ಅವಧಿ 30 ತಿಂಗಳಿಗೇ ಸೀಮಿತವಾಗಿರಲಿದೆ. ಇದರಿಂದ ಮೇಯರ್‍‌ ಮತ್ತು ಉಪಮೇಯರ್‍‌ಗಳು ಸಮರ್ಪಿತವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಲಾಗುತ್ತದೆ. ಮೇಯರ್, ಉಪಮೇಯರ್‍‌ಗಳ ಅವಧಿ ಕಡಿಮೆ ಮಾಡಿದರೆ, ಉತ್ತಮ ಆಡಳಿತ ಸಿಗುತ್ತದೆ ಎಂಬ ದೃಷ್ಟಿಕೋನದಿಂದ ಈ ಮಸೂದೆಯನ್ನು ಮಂಡಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ಥಾಪನೆ:

ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಸುಗಮಗೊಳ್ಳಬೇಕು, ಸಮನ್ವಯವಾಗಿರಬೇಕು ಎಂಬ ಉದ್ದೇಶವಿದೆ. ಮತ್ತು ನಿಗಮಗಳ ಮೇಲ್ವಿಚಾರಣೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ಹೊಸ ಸಂಸ್ಥೆಯನ್ನು ರಚಿಸಲಾಗುತ್ತದೆ. ಇದು ಪ್ಲ್ಯಾನಿಂಗ್ ಬೋರ್ಡ್‌ ಆಗಿ ಕೆಲಸ ಮಾಡಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಜೆಕ್ಟ್‌ಗಳನ್ನು ನಿರ್ವಹಣೆ ಮಾಡುತ್ತದೆ.

ಬಿಬಿಎಂಪಿ ಪುನರ್ ರಚನೆ:

ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಬಿಎಂಪಿಯನ್ನು ಪುನರ್‍‌ ರಚನೆ ಮಾಡಲಾಗುತ್ತದೆ. ಅಂದರೆ ಇದರಲ್ಲಿ ಹಲವು ಸಣ್ಣ ನಿಗಮಗಳಾಗಿ ವಿಭಜನೆ ಮಾಡಲಾಗುತ್ತದೆ. ಪ್ರಾರಂಭಿಕ ಯೋಜನೆ ಪ್ರಕಾರ, ಇದನ್ನು ಮೂರು ಅಥವಾ ನಾಲ್ಕು ನಿಗಮಗಳಾಗಿ ಹಂಚಬಹುದಾಗಿದೆ. ಆದರೆ ಅಂತಿಮ ಗುರಿ ಏಳು ನಿಗಮಗಳನ್ನು ಸ್ಥಾಪಿಸುವುದಾಗಿದೆ. ಸರ್ಕಾರದ ಪ್ರಕಾರ, ಈ ವಿಭಜನೆಯಿಂದ ನಾಗರಿಕ ಸೇವೆಗಳ ಅನುಷ್ಠಾನ ಸುಗಮವಾಗಲಿದೆ ಮತ್ತು ಆಡಳಿತದ ದಕ್ಷತೆ ಹೆಚ್ಚಲಿದೆ.

ವಾರ್ಡ್‌ಗಳ ಸಮಿತಿಗಳ ಸಬಲೀಕರಣ:

ಸ್ಥಳೀಯ ಮಟ್ಟದಲ್ಲಿ ಹಲವು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು, ವಾರ್ಡ್ ಸಮಿತಿಗಳನ್ನು ಬಲಪಡಿಸುವ ಪ್ರಯತ್ನಿಸಲಾಗಿದೆ. ಅಂದರೆ ಪ್ರತಿಯೊಂದು ನಿರ್ಧಾರವನ್ನೂ ಹಿಡಿಯ ಆಡಳಿತ ಮಂಡಳಿ ತೆಗೆದುಕೊಳ್ಳುವುದಕ್ಕಿಂತ, ವಾರ್ಡ್‌ ಮಟ್ಟದಲ್ಲೇ ಎಲ್ಲವೂ ಬಗೆಹರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ನೀಡಲಿದೆ.

ಆರ್ಥಿಕ ಸ್ವಾಯತ್ತತೆ ಮತ್ತು ಸುಸ್ಥಿರತೆ:

ಹೊಸ ನಿಗಮಗಳು ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಸ್ವಂತ ಆದಾಯವನ್ನು ಗಳಿಸಬಹುದು. ಅಲ್ಲದೇ ಕೆಲವು ನಿಗಮಗಳು ಆರ್ಥಿಕ ತೊಂದರೆ ಅನುಭವಿಸಿದರೆ ಅದಕ್ಕೆ ಸರ್ಕಾರದ ನೆರವು ಸಿಗಲಿದೆ. ಆದ ನಷ್ಟವನ್ನು ಸರ್ಕಾರವೇ ಪೂರೈಸಲು ಸಹಾಯ ಮಾಡಲಿದೆ. ಇದರಿಂದ ಶಾಶ್ವತ ಆರ್ಥಿಕ ಸುಸ್ಥಿರತೆ ಖಚಿತವಾಗಲಿದೆ.

ಈ ಮಸೂದೆಗೆ ಬಿಜೆಪಿಯಿಂದ ವಿರೋಧ:

ಈ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್‌, ಈ ಮಸೂದೆ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸಂಬಂಧಿಸಿದ ಕನಸಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಬಿಜೆಪಿ ನಾಯಕ ಎಸ್.ಆರ್. ವಿಶ್ವನಾಥ್ ಕೂಡಾ ಈ ಮಸೂದೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದರೆ ಕಳೆದ ಕೆಲವು ವರ್ಷಗಳಿಂದ ಬಿಬಿಎಂಪಿ ಆಯುಕ್ತರ ಆಡಳಿತದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಆದರೆ ಇದೀಗ ಬಿಬಿಎಂಪಿಯನ್ನು ಪುನರ್ರಚನೆ ಮಾಡುವುದು ಅನಗತ್ಯ. ಬಿಬಿಎಂಪಿಯ ಚುನಾವಣೆ ನಡೆಸಿ ಜನರ ಆಯ್ಕೆ ಮಾಡಿದ ಆಡಳಿತ ಮಂಡಳಿಯನ್ನು ರಚಿಸುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯು ನಗರ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸರ್ಕಾರ ಈ ಹೊಸ ಪ್ರಯತ್ನಿಸಲಾಗಿದೆ. ಅಲ್ಲದೇ ಈ ಆಡಳಿತವನ್ನು ವಿಕೇಂದ್ರೀಕರಿಸಲು, ಹೊಸ ಸಂಸ್ಥೆಗಳನ್ನು ಸ್ಥಾಪಿಸಲು, ವಾರ್ಡ್ ಸಮಿತಿಗಳನ್ನು ಬಲಪಡಿಸಲು ಹಾಗೂ ಆರ್ಥಿಕ ಸ್ವಾಯತ್ತತೆ ನೀಡಲು ಪ್ರಯತ್ನಿಸುತ್ತದೆ. ಆದರೆ, ವಿರೋಧ ಪಕ್ಷದ ಪ್ರಕಾರ, ಈ ಮಸೂದೆ ನಗರವನ್ನು ಅನಗತ್ಯವಾಗಿ ವಿಭಜಿಸುತ್ತದೆ ಮತ್ತು ಜನರ ಆರಾಧಿತ ಸಂಸ್ಥೆಗಳ ಬದಲಿಗೆ ಹೊಸ ವ್ಯವಸ್ಥೆಯನ್ನು ಹೇರಲು ಯತ್ನಿಸುತ್ತಿದೆ. ಹಾಗೆಯೇ ಈ ಮಸೂದೆ ಅನುಷ್ಠಾನವಾದರೆ, ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸಬಹುದು. ಆದರೆ, ಇದು ಯಶಸ್ವಿಯಾಗುತ್ತದೆಯೋ ಅಥವಾ ಹೆಚ್ಚುವರಿ ಸಮಸ್ಯೆಗಳನ್ನು ತಂದೊಡ್ಡುತ್ತದೆಯೋ ಎಂಬುದನ್ನು ಕೇವಲ ಮುಂದಿನ ವರ್ಷಗಳಲ್ಲಿಯೇ ನಿರ್ಧರಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+