ಮುಂಬೈ, ಜೂನ್ 25: ಕೊರೊನಾವೈರಸ್ ದೇಶದ ವಸತಿ ಕ್ಷೇತ್ರವನ್ನು ಅಕ್ಷರಶಃ ಹೈರಾಣಾಗಿಸಿದೆ. ರಿಯಲ್ ಎಸ್ಟೇಟ್ ಸಂಪೂರ್ಣ ಕುಸಿದು ಬಿದ್ದಿದೆ. ಇನ್ನೊಂದೆಡೆ ಗೃಹ ಸಾಲದ ಮೇಲಿನ ಇಎಂಐ ಕಟ್ಟಲು ಸಾಲ ಪಡೆದವರು ಪರದಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಬೇಡಿಕೆಯೂ ಕುಸಿದಿದೆ.
ಈ ಬೆಳವಣಿಗೆಯಲ್ಲೇ ರಿಯಲ್ ಎಸ್ಟೇಟ್ ಪರಿಸ್ಥಿತಿ ಕುರಿತು ವರದಿಯೊಂದು ಬಂದಿದ್ದು, ಆ ಕ್ಷೇತ್ರದ ಉದ್ಯಮಿಗಳನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ.
ದೆಹಲಿ, ಮುಂಬೈ ಸೇರಿದಂತೆ ದೇಶದ ಅಗ್ರ ಏಳು ನಗರಗಳಲ್ಲಿನ ವಸತಿ ವಸತಿ ಮಾರಾಟವು ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 81.46 ರಷ್ಟು ಕುಸಿದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
12,720 ವಸತಿ ಯುನಿಟ್ಗಳ ಮಾರಾಟ
ದೇಶದ ಏಳು ಮಹಾನಗರಗಳಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ 68,600 ಯುನಿಟ್ ವಸತಿ ಮಾರಾಟ ಕಂಡು ಬಂದಿತ್ತು. 2020 ರ ಎರಡನೇ ತ್ರೈಮಾಸಿಕದಲ್ಲಿ ವಸತಿ ಮಾರಾಟ 12,720 ಕ್ಕೆ ಇಳಿದಿದೆ. 2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 45,200 ಯುನಿಟ್ ಮಾರಾಟ ಕಡಿಮೆಯಾಗಿದೆ ಎಂದು ಎನ್ಡಿಟಿವಿ ತಿಳಿಸಿದೆ. ಕೊರೊನಾವೈರಸ್ ಕೊಳ್ಳುವವರು ಹಾಗೂ ಮಾರುವವರ ಮಧ್ಯೆ ಬಹುದೊಡ್ಡ ಕಂದಕ ಸೃಷ್ಟಿಸಿದೆ ಎಂದು ಹೇಳಿದೆ.
ರಿಯಲ್ ಎಸ್ಟೇಟ್ ಕ್ಷೇತ್ರ ನಿಧಾನವಾಗುತ್ತಿದೆ
ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ರಿಯಲ್ ಎಸ್ಟೇಟ್ ಕ್ಷೇತ್ರ ಈಗಾಗಲೇ ನಿಧಾನವಾಗುತ್ತಿದೆ. ಕತ್ತಲೆಯಾದ ಚಿತ್ರಣವನ್ನು ರಿಯಲ್ ಎಸ್ಟೇಟ್ ಪ್ರಸ್ತುತ ಕಾಣುತ್ತಿದೆ. ವ್ಯವಸ್ಥೆಯಲ್ಲಿನ ಕ್ರೆಡಿಟ್ ಬಿಕ್ಕಟ್ಟಿನ ಮಧ್ಯೆ ಕಡಿಮೆ ಬೇಡಿಕೆಯು ದೀರ್ಘಾವಧಿಯಲ್ಲಿ ರಿಯಲ್ ಎಸ್ಟೆಟ್ನ್ನು ಕುಗ್ಗಿಸಲಿದೆ.
ಏಳು ನಗರಗಳ ಡೇಟಾ
ದೆಹಲಿ, ಮುಂಬೈ ಬೆಂಗಳೂರು ಮತ್ತು ಪುಣೆ ಒಟ್ಟಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟು ಮಾರಾಟದ ಶೇಕಡಾ 85.32 ರಷ್ಟನ್ನು ಹೊಂದಿದ್ದರೆ, ಬೆಂಗಳೂರು ಮಾತ್ರ ಈ ಅವಧಿಯಲ್ಲಿ ಒಟ್ಟು ಮಾರಾಟದ ಶೇಕಡಾ 51.88 ರಷ್ಟನ್ನು ಹೊಂದಿದೆ ಎಂದು ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ ನಡೆಯುತ್ತಿರುವ ಯೋಜನೆಗಳ ಡೇಟಾವನ್ನು ಎನ್ಡಿಟಿವಿ ತೋರಿಸಿದೆ.
ಶೇಕಡಾ 98 ರಷ್ಟು ಕುಸಿದಿದ್ದು ಕಂಡು ಬಂದಿದೆ
ಏಳು ನಗರಗಳಲ್ಲಿ ಹೊಸ ಯೋಜನೆಗಳ ಪರಿಶೀಲನೆಯ ಅವಧಿಯಲ್ಲಿ ಶೇಕಡಾ 98 ರಷ್ಟು ಕುಸಿದಿದ್ದು ಕಂಡು ಬಂದಿದೆ. ಏಳು ನಗರಗಳಲ್ಲಿ, ಏಪ್ರಿಲ್-ಜೂನ್ ಅವಧಿಯಲ್ಲಿ ಸುಮಾರು 1,390 ಘಟಕಗಳನ್ನು ಹೊಂದಿರುವ ನಾಲ್ಕು ಯೋಜನೆಗಳನ್ನು ಮಾತ್ರ ಪ್ರಾರಂಭಿಸಲಾಗಿತ್ತು. ಬೆಂಗಳೂರಿನಲ್ಲಿ ಎರಡು ಮತ್ತು ಪುಣೆ ಮತ್ತು ಕೋಲ್ಕತ್ತಾದಲ್ಲಿ ತಲಾ ಒಂದನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್-ಜೂನ್ನಲ್ಲಿ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಯಾವುದೇ ಹೊಸ ವಸತಿ ಯೋಜನೆಗಳು ನಡೆದಿಲ್ಲ ಎಂದು ವರದಿ ತಿಳಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications