ಬೆಂಗಳೂರು, ಸೆಪ್ಟೆಂಬರ್ 22: ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕುವತ್ತ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತದ ಜಿಡಿಪಿಯೂ ಮುಂದಿನ ಆರೇಳು ವರ್ಷದಲ್ಲಿ $ 10 ಟ್ರಿಲಿಯನ್ ಗಡಿ ದಾಟಲಿದೆ ಎಂದು ವರದಿಯಾಗಿದೆ.
" ಭಾರತವು ಮುಂದಿನ ಆರು ವರ್ಷಗಳಲ್ಲಿ ಪ್ರತಿ 18 ತಿಂಗಳಿಗೊಮ್ಮೆ ತನ್ನ ಜಿಡಿಪಿಗೆ $ 1 ಟ್ರಿಲಿಯನ್ ಹೆಚ್ಚಾಗುತ್ತಾ ಸಾಗಲಿದ್ದು, ಇದು ತ್ವರಿತ ಆರ್ಥಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಈ ವೇಗದೊಂದಿಗೆ ಸಾಗಿದರೆ, ದೇಶವು 2032 ರ ವೇಳೆಗೆ ಜಿಡಿಪಿಯೂ $ 10 ಟ್ರಿಲಿಯನ್ ಗಡಿ ತಲುಪಲಿದೆ. ಇದರೊಂದಿಗೆ 2030 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಪಡೆದುಕೊಳ್ಳುತ್ತದೆ" ಎಂದು ಐಡಿಬಿಐ ಕ್ಯಾಪಿಟಲ್ನ ವರದಿ ತಿಳಿಸಿದೆ.

ವರದಿಯು ವಿವಿಧ ಅಂಶಗಳನ್ನು ಗಮನಿಸಿದರೆ ಮುಂದಿನ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಗೆ ಭಾರತಕ್ಕೆ ಎಲ್ಲಾ ರೀತಿಯ ಸಾಮರ್ಥ್ಯವಿದ್ದು, ದೇಶದ ಯುವ ಜನಸಂಖ್ಯೆ, ಬೆಳೆಯುತ್ತಿರುವ ಮಧ್ಯಮ ವರ್ಗ ಮತ್ತು ಹೆಚ್ಚುತ್ತಿರುವ ನಗರೀಕರಣವು ಈ ಆರ್ಥಿಕ ವಿಸ್ತರಣೆಯ ಪ್ರಮುಖ ಕಾರಣಗಳು ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ತನ್ನ ಸ್ಥಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಮೇಕ್ ಇನ್ ಇಂಡಿಯಾದೊಂದಿಗೆ ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರುವ ಯೋಜನೆ
ದೇಶೀಯ ಉತ್ಪಾದನಾ ವಲಯವನ್ನು ಉತ್ತೇಜಿಸಲು ಮತ್ತು ದೇಶಕ್ಕೆ ಹೂಡಿಕೆಯನ್ನು ಹೆಚ್ಚಿಸಲು 2014 ರಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮ ಜಾರಿಗೊಳಿಸಲಾಗಿದ್ದು, ಈ ಮೂಲಕ ರಾಷ್ಟ್ರದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
ಈ ಉಪಕ್ರಮವು ದೇಶದ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆಯನ್ನು ಹೆಚ್ಚಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ರಫ್ತುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಬೆಳವಣಿಗೆಯನ್ನು ಬೆಂಬಲಿಸಲು, ಭಾರತ ಸರ್ಕಾರವು ಮೂಲಸೌಕರ್ಯದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಇಂಧನ ಪೂರೈಕೆಯಲ್ಲಿ ಸುಧಾರಣೆಗಳು ಉತ್ಪಾದನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅತ್ಯಗತ್ಯ. ಸರ್ಕಾರವು ನಿಯಮಗಳನ್ನು ಸರಳೀಕರಿಸಲು ಮತ್ತು ದೇಶದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ, ಇದು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತದೆ.
ಈ ಉತ್ಪಾದನಾ ಗುರಿಗಳನ್ನು ಸಾಧಿಸುವಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆಯನ್ನು ವರದಿಯು ಒತ್ತಿಹೇಳುತ್ತದೆ. ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು 3D ಮುದ್ರಣದಂತಹ ಸುಧಾರಿತ ತಂತ್ರಜ್ಞಾನಗಳಲ್ಲಿ ಭಾರತ ಹೂಡಿಕೆ ಮಾಡುತ್ತಿದೆ. ಈ ತಂತ್ರಜ್ಞಾನಗಳು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ.
ಐಡಿಬಿಐ ಕ್ಯಾಪಿಟಲ್ ವರದಿಯಲ್ಲಿ ಈ ಸೆಕ್ಟರ್ ವಹಿಸಲಿರುವ ಮಹತ್ವದ ಪಾತ್ರದ ಕುರಿತ ಅಂಶಗಳ ಪ್ರಕಾರ ಭಾರತದ ಆರ್ಥಿಕತೆಗೆ ಸಿಗುವ ಹೆಚ್ಚುವರಿ ಕೊಡುಗೆಯಲ್ಲಿ (ಜಿವಿಎ- ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಮ್ಯಾನುಫ್ಯಾಕ್ಚರಿಂಗ್ ವಲಯದ ಕೊಡುಗೆ 32 ಪ್ರತಿಶತದಷ್ಟು ಇರಲಿದೆ.
1947ರಿಂದ 2010ರವರೆಗೆ 63 ಜಿಡಿಪಿ ಕೇವಲ 1 ಟ್ರಿಲಿಯನ್ ಡಾಲರ್, ಆದ್ರೆ ಇನ್ಮುಂದೆ ಹಾಗಲ್ಲ.!
ಭಾರತದ ಜಿಡಿಪಿ 1 ಟ್ರಿಲಿಯನ್ ಡಾಲರ್ ಗಡಿ ಮುಟ್ಟಲು 1947ರಿಂದ 2010ರವರೆಗೆ 63 ವರ್ಷ ಬೇಕಾಯಿತು.ಕಳೆದ ದಶಕದಲ್ಲಿ ಬೆಳವಣಿಗೆಯು ಗಮನಾರ್ಹವಾಗಿ ವೇಗಗೊಂಡಿದೆ. 2017ಕ್ಕೆ 2 ಟ್ರಿಲಿಯನ್ ಡಾಲರ್, 2020ಕ್ಕೆ 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. 2010ರ ಬಳಿಕ ಜಿಡಿಪಿ ಬೆಳವಣಿಗೆ ವೇಗ ಹೆಚ್ಚುತ್ತಲೇ ಹೋಗಿದೆ.
ವರದಿಯ ಪ್ರಕಾರ, COVID-19 ಸಾಂಕ್ರಾಮಿಕವು ಈ ಬೆಳವಣಿಗೆಯನ್ನು ಸ್ವಲ್ಪಮಟ್ಟಿಗೆ ಕಟ್ಟಿಹಾಕಿದರೂ ಅದರಿಂದ ಚೇತರಿಸಿಕೊಂಡು 2024 ರ ವರ್ಷದ ಅಂತ್ಯದ ವೇಳೆಗೆ USD 4 ಟ್ರಿಲಿಯನ್ಗೆ ತಲುಪಲಿದ್ದು, ಮುಂಬರುವ ವರ್ಷಗಳಲ್ಲಿ ದೇಶವು ಭಾರೀ ಬೆಳವಣಿಗೆಯನ್ನು ಕಾಣಲು ಸಿದ್ಧವಾಗಿದೆ .
ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ( ಐಐಪಿ)
2024 ಮತ್ತು 2032 ರ ಆರೇಳು ವರ್ಷಗಳ ನಡುವೆ, ಉತ್ಪಾದನೆಯಲ್ಲಿ ದೃಢವಾದ ಬೇಡಿಕೆ, ಬಲವಾದ ರಫ್ತು ಸಾಮರ್ಥ್ಯ ಮತ್ತು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗಳಂತಹ ಬೆಂಬಲಿತ ಸರ್ಕಾರಿ ನೀತಿಗಳಿಂದ ಉತ್ತೇಜಿತವಾಗಿರುವ ಭಾರತವು $ 10 ಟ್ರಿಲಿಯನ್ ಜಿಡಿಪಿಯನ್ನು ತಲುಪುವ ನಿರೀಕ್ಷೆಯಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ( ಐಐಪಿ) ಯುಎಸ್, ಚೀನಾ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಜಪಾನ್ನಂತಹ ರಾಷ್ಟ್ರಗಳನ್ನು ಹಿಂದಿಕ್ಕಿ, ಉತ್ಪಾದನೆಯಲ್ಲಿ ಭಾರತವು ಪ್ರಮುಖ ಜಾಗತಿಕ ಆರ್ಥಿಕತೆಯನ್ನು ಮೀರಿಸುತ್ತದೆ ಎಂದು ವರದಿ ಹೇಳಿದೆ .
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications