For Daily Alerts
ಭಾರತದ ಆರ್ಥಿಕ ಶಕ್ತಿ 'ಮುಂಗಾರು' ಕೇರಳಕ್ಕೆ ಆಗಮನ
|
ನವದೆಹಲಿ, ಜೂನ್ 1: ದೇಶದ ಆರ್ಥಿಕ ಚಟುವಟಿಕೆಯನ್ನು ಗಣನೀಯವಾಗಿ ನಿಯಂತ್ರಿಸುವ ನೈರುತ್ಯ ಮಾನ್ಸೂನ್ ಈ ವರ್ಷ ದೇಶದ ಪಶ್ಚಿಮ ಕರಾವಳಿಯಾದ ಕೇರಳಕ್ಕೆ ಆಗಮಿಸಿದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ.
ಈ ವರ್ಷ ನೈರುತ್ಯ ಮಾನ್ಸೂನ್ ಕೇರಳದಲ್ಲಿ ನಾಲ್ಕು ತಿಂಗಳ ಸುದೀರ್ಘ ಮಳೆ ಸುರಿಸುವ ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ಉತ್ತರ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಒಳನಾಡಿನಲ್ಲಿ ಸಾಮಾನ್ಯ ಮಳೆಯಾಗಲಿದೆ.
ಜಿಡಿಪಿ ದರ ಮಹಾಕುಸಿತ: ಭಾರತದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಲುಪಿದೆ?
ಆದಾಗ್ಯೂ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ದೇಶದ ಇತರ ಭಾಗಗಳಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಪಾತ್ರ ಹೇಳಿದ್ದಾರೆ.
ಜೂನ್ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಶೇಕಡಾ 75 ರಷ್ಟು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
English summary
Indian Economy Booster Mansoon Hits Kerala Coast On Monday
Story first published: Monday, June 1, 2020, 22:22 [IST]