ಭಾರತೀಯ ಮೂಲದ ಮಹಿಳೆಯೊಬ್ಬರು ಹತ್ತು -ಇಪ್ಪತ್ತು ಕಿ.ಮೀ.ಗಳಲ್ಲ ಅಥವಾ ಬಸ್ಸು ,ಕಾರು ,ರೈಲಿನಲ್ಲಿ ಅಲ್ಲ ದಿನನಿತ್ಯ ತನ್ನ ಕಚೇರಿ ಕೆಲಸಕ್ಕಾಗಿ ವಿಮಾನದಲ್ಲಿ ಸುಮಾರು 800 ಕೀ.ಮೀ ಓಡಾಡುತ್ತಾರೆ ಎಂದರೆ ನಂಬಲೇಬೇಕು.
ಇಬ್ಬರು ಮಕ್ಕಳ ತಾಯಿಯಾಗಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಆಕಾಶ ಮಾರ್ಗವಾಗಿ ಕಚೇರಿಗೆ ದಿನನಿತ್ಯ ಸಾಗುವುದು ಮಾತ್ರವಲ್ಲದೇ ವಿಮಾನ ನಿಲ್ದಾಣಗಳು, ಭದ್ರತಾ ತಪಾಸಣೆಗಳು ಮತ್ತು ಆಕಾಶದಲ್ಲಿ ನೂರಾರು ಕಿಲೋಮೀಟರ್ಗಳ ಪ್ರಯಾಣ ಮಾಡುತ್ತಾ ವರ್ಕ್ ಮತ್ತು ಲೈಫ್ ನ ನಡುವೆ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲರೂ ಪ್ರವಾಸಕ್ಕಾಗಿ ಅಥವಾ ದೂರ ಸಂಚಾರಕ್ಕಾಗಿ ವಿಮಾನ ಹತ್ತಿದ್ರೆ ಇವರು ಮಾತ್ರ ನಿತ್ಯ ಕಚೇರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ತಮ್ಮ ಮಕ್ಕಳಿಗೆ ತಾಯಿಯ ವಾತ್ಸಲ್ಯ ಕಡಿಮೆ ಆಗಬಾರದು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯಬೇಕು ಎಂಬುದಷ್ಟೇ ಇವರ ದಿನನಿತ್ಯ ವಿಮಾನ ಪ್ರಯಾಣದ ಹಿಂದಿರುವ ನಿರ್ಧಾರ.

ಮಲೇಷ್ಯಾದ ಏರ್ಏಷ್ಯಾದಲ್ಲಿ ಹಣಕಾಸು ಕಾರ್ಯಾಚರಣೆಗಳಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಕೌರ್ ಅವರು, ಈ ದಿನಚರಿ ನಿರ್ವಹಿಸಬಹುದಾದದ್ದು ಮಾತ್ರವಲ್ಲದೆ ವೆಚ್ಚ-ಪರಿಣಾಮಕಾರಿಯೂ ಆಗಿದೆ ಎಂದು ಕುತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ವೇಳಾಪಟ್ಟಿಯು ತನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವುದು ದುಂದುವೆಚ್ಚ ಮಾಡಿದಂತೆ ಎಂದು ಭಾವಿಸುವವರಿಗೆ ತಮ್ಮ ಖರ್ಚುವೆಚ್ಚಗಳ ಮಾಹಿತಿಯನ್ನು ನೀಡಿದ್ದಾರೆ
"ಸೂಪರ್ ಕಮ್ಯೂಟರ್" ಎಂದು ಕರೆಯಲ್ಪಡುವ ರಾಚೆಲ್ ಕೌರ್, ಸಿಎನ್ಎ (ಚಾನೆಲ್ ನ್ಯೂಸ್ ಏಷ್ಯಾ) ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಏರ್ ಏಷ್ಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ರಾಚೆಲ್ ಕೌರ್, ಮಲೇಷ್ಯಾದ ಪೆನಾಂಗ್ನಿಂದ ಸೆಪಾಂಗ್ಗೆ ತಮ್ಮ ಕಚೇರಿಗೆ ಹೋಗಲು ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು 5:55 ರ ವಿಮಾನ ಹಿಡಿಯುತ್ತಾರೆ. ದಿನನಿತ್ಯ ಹೆಚ್ಚುಕಡಿಮೆ ೮೦೦ ಕೀ.ಮೀ ಪ್ರಯಾಣಿಸುತ್ತಾರೆ.
ಇದಕ್ಕೂ ಮೊದಲು, ಕೌರ್ ಅವರು ತಮ್ಮ ಕಚೇರಿಯ ಬಳಿ ಅಂದರೆ ಕೌಲಾಲಂಪುರದಲ್ಲಿ ಮನೆ ಬಾಡಿಗೆಗೆ ಪಡೆದು ವಾರಕ್ಕೊಮ್ಮೆ ಮಾತ್ರ ಮಲೇಷ್ಯಾದ ಪೆನಾಂಗ್ಗೆ ಹಿಂತಿರುಗುತ್ತಿದ್ದರು. ಆದರೆ ಮಕ್ಕಳಿಂದ ದೂರವಿರುವುದರಿಂದ ಕೆಲಸ ಮತ್ತು ಕುಟುಂಬ ಜೀವನವನ್ನು ಸಮತೋಲನಗೊಳಿಸುವುದು ತೀರಾ ಕಷ್ಟಕರವಾಗಿತ್ತು. ನನ್ನೊಳಗೆ ನಡೆಯುತ್ತಿದ್ದ ಮಾನಸಿಕ ಹೋರಾಟವು ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. 2024 ರ ಆರಂಭದಿಂದ ಪ್ರತಿದಿನ ವಿಮಾನ ಹಾರಾಟವನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡರು. ಆಶ್ಚರ್ಯವೆಂದರೆ ಅವರಿಗೆ ಈ ದಿನಚರಿಯು ತನ್ನ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ಸಹಕಾರಿಯಾಯಿತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ನನ್ನಿಬ್ಬರು ಮಕ್ಕಳೂ ಬೆಳೆಯುತ್ತಿದ್ದಾರೆ; ಹಿರಿಯವಳಿಗೆ 12 ವರ್ಷ, ಕಿರಿಯವಳಿಗೆ 11 ವರ್ಷ. ಅವರು ಬೆಳೆಯುತ್ತಿರುವ ಸಮಯದಲ್ಲಿ ತಾಯಿ ಜೊತೆಯಲ್ಲಿರಬೇಕು ಎಂದು ನನ್ನ ಭಾವನೆ. ಈ ರೀತಿ ಮಾಡುವುದರಿಂದ, ನಾನು ಪ್ರತಿದಿನ ಮನೆಗೆ ಹೋಗಿ ರಾತ್ರಿ ಅವರನ್ನು ನೋಡಬಹುದು ಎಂದು ಕೌರ್ ಹೇಳಿದ್ದಾರೆ. ಕೌರ್ ತಮ್ಮ ದಿನಚರಿಯನ್ನು ವಿವರಿಸುತ್ತಾ, ಬೆಳಿಗ್ಗೆ 4 ಗಂಟೆಗೆ ಏಳುತ್ತೇನೆ, ಸಿದ್ಧವಾಗಿ 5 ಗಂಟೆಗೆ ಮನೆಯಿಂದ ಹೊರಡುತ್ತೇನೆ ಎಂದರು. ನಂತರ ಪೆನಾಂಗ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಬೆಳಿಗ್ಗೆ 6.30ಕ್ಕೆ ಕೌಲಾಲಂಪುರಕ್ಕೆ ವಿಮಾನದಲ್ಲಿ ಪ್ರಯಾಣಿಸಿ ಬೆಳಿಗ್ಗೆ 7.45ಕ್ಕೆ ಅವಳು ತನ್ನ ಕಚೇರಿಗೆ ತಲುಪುತ್ತೇನೆ. ಕೆಲಸ ಮುಗಿಸಿ ರಾತ್ರಿ 8 ಗಂಟೆಗೆ ಮನೆಗೆ ಹಿಂದಿರುಗುತ್ತಾಳೆ. ಗೂಗಲ್ ನಕ್ಷೆಗಳ ಪ್ರಕಾರ, ಅವಳು ಪ್ರತಿದಿನ ಸುಮಾರು 700 ಕಿ.ಮೀ. ದೂರ ಪ್ರಯಾಣಿಸುತ್ತಾರೆ - ಹೋಗಿ ಬರುವುದು ಸೇರಿ. ವಾರದಲ್ಲಿ ಐದು ದಿನ ವಿಮಾನದಲ್ಲಿ ಪ್ರಯಾಣಿಸಿದರೂ, ನನ್ನ ಖರ್ಚು ಕಡಿಮೆಯಾಗಿದೆ ಎಂದು ಕೌರ್ ಹೇಳಿದ್ದಾರೆ.
ಮೊದಲಿಗೆ, ಅವರು ಬಾಡಿಗೆ ಮತ್ತು ಇತರ ಖರ್ಚುಗಳಿಗಾಗಿ ತಿಂಗಳಿಗೆ ಕನಿಷ್ಠ $474 (ಅಂದಾಜು ರೂ. 41,000) ಖರ್ಚು ಮಾಡುತ್ತಿದ್ದರು. ಈಗ, ಅವರ ಮಾಸಿಕ ಪ್ರಯಾಣ ವೆಚ್ಚವು $316 (ಸುಮಾರು ರೂ. 27,000) ಕ್ಕೆ ಇಳಿದಿದೆ. ವಿಮಾನ ಪ್ರಯಾಣದ ಸಮಯದಲ್ಲಿ, ಕೌರ್ ಸಂಗೀತ ಕೇಳುತ್ತಾ ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ "ಮೀ ಟೈಮ್" ನ್ನು ಆನಂದಿಸುತ್ತಾರೆ. ವಿಮಾನದಿಂದ ಇಳಿದ ನಂತರ, ಅಣತಿ ದೂರದಲ್ಲಿರುವ ಕಚೇರಿಗೆ 5 ರಿಂದ 10 ನಿಮಿಷಗಳ ಕಾಲ ನಡೆದುಕೊಂಡು ಹೋಗುತ್ತಾಳೆ. ಸಹಕಾರ ನೀಡುವ ಸಹೋದ್ಯೋಗಿಗಳ ನಡುವೆ ಇರುವುದು ಕಾರ್ಯಗಳನ್ನು ಪೂರ್ಣಗೊಳಿಸಲು ಸುಲಭವಾಗುತ್ತದೆ. ಜನರೊಂದಿಗೆ ಇರುವುದರಿಂದ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ನೀವು ನೇರವಾಗಿ ಜನರೊಂದಿಗೆ ಸಂವಹನ ನಡೆಸಬಹುದು ಕಚೇರಿಯಲ್ಲಿರುವಾಗ ತಮ್ಮ ಗಮನ ಸಂಪೂರ್ಣವಾಗಿ ಕೆಲಸದ ಮೇಲಿರುತ್ತದೆ ಮತ್ತು ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸಮಯವನ್ನು ನೀಡುತ್ತೇನೆ ಎಂದು ವಿವರಿಸುತ್ತಾರೆ . ಕೌರ್ ಅವರ ಉದ್ಯೋಗದಾತರಾದ ಏರ್ ಏಷ್ಯಾ, ವರ್ಕ್ ಲೈಪ್ ಬ್ಯಾಲೆನ್ಸ್ ವ್ಯವಸ್ಥೆಯನ್ನು ಬೆಂಬಲಿಸುವುದರಿಂದ ಆರೋಗ್ಯಕರ ಕೆಲಸ ಮತ್ತು ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಪ್ರತಿದಿನ ಬೆಳಿಗ್ಗೆ ಬೇಗ ಏಳುವುದು ತುಂಬಾ ಕಷ್ಟ ಎಂದು ಅವಳು ಒಪ್ಪಿಕೊಂಡರು ಮನೆಗೆ ಹಿಂದಿರುಗಿ ತನ್ನ ಮಕ್ಕಳನ್ನು ನೋಡಿದ ತಕ್ಷಣ, ಅವರ ಎಲ್ಲಾ ಆಯಾಸವು ಮಾಯವಾಗುತ್ತದೆ ಎನ್ನುವುದು ಅವರ ಮಾತುಗಳು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications