ಭಾರತೀಯರು ಬೇರೆಡೆ ಹುಟ್ಟುಹಾಕಿದ ವಿಚಾರಗಳನ್ನು ಅನ್ವಯಿಸುವಲ್ಲಿ ಉತ್ತಮರು: ಇನ್ಫೋಸಿಸ್ ನಾರಾಯಣ ಮೂರ್ತಿ

ನವದೆಹಲಿ, ಮೇ 17: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಇತ್ತೀಚೆಗೆ, ಭಾರತೀಯರು ಬೇರೆಡೆ ಉತ್ಪತ್ತಿಯಾಗುವ ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನು ಅನ್ವಯಿಸುವಲ್ಲಿ ಉತ್ತಮರು ಎಂದು ಹೇಳಿದ್ದಾರೆ.

"ಭಾರತದ ವಾಸ್ತವವೆಂದರೆ, ಈ ಸಮಯದಲ್ಲಿ ಒಟ್ಟಾರೆಯಾಗಿ, ನಾವು ಭಾರತದ ಹೊರಗೆ ಆವಿಷ್ಕರಿಸಲಾದ ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನು ಅನ್ವಯಿಸುವ ಕಕ್ಷೆಗೆ ನಮ್ಮನ್ನು ಅಪಡೇಟ್‌ ಮಾಡಿದ್ದೇವೆ ಮತ್ತು ಕೆಲವು ಆವಿಷ್ಕಾರಗಳನ್ನು ಮಾಡಿ ತಜ್ಞರಾಗಿದ್ದೇವೆ. ಇಂದು ಭಾರತ ಏನಾಗಿದೆ ಎಂದರೆ, ಬೇರೆಡೆ ಹುಟ್ಟಿಕೊಂಡ ವಿಚಾರಗಳನ್ನು ಬಳಸಿಸಿಕೊಂಡು ಅದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳಲು ಸಿದ್ಧವಾಗಿರುವ ರಾಷ್ಟ್ರ. ಇದು ಮೊದಲ ಹೆಜ್ಜೆ. ಅದು ತುಂಬಾ ಒಳ್ಳೆಯದು ಎಂದು ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಭಾರತೀಯರ ಬಗ್ಗೆ ಹೊಸ ವಿಚಾರ ಹೇಳಿದ ನಾರಾಯಣ  ಮೂರ್ತಿ

ಕೃತಕ ಬುದ್ಧಿಮತ್ತೆಯಲ್ಲಿ ಹೊಸ ಆವಿಷ್ಕಾರಗಳ ವಿಚಾರದಲ್ಲಿ ಭಾರತವು ಪಾಶ್ಚಿಮಾತ್ಯ ದೇಶಗಳೊಂದಿಗೆ ಹೇಗೆ ಹಿಡಿಯಬಹುದು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, "ನಾವೂ ಹೊಸ ವಿಷಯಗಳನ್ನು ಆವಿಷ್ಕರಿಸಲು ಸಾಧ್ಯವಾಗುತ್ತದೆ. ಅದು ಸಂಭವಿಸುತ್ತದೆ ಎಂದು ನಾನು ತುಂಬಾ ಸಕಾರಾತ್ಮಕವಾಗಿದ್ದೇನೆ. ಆದರೆ ಇದು ಕ್ರಮೇಣ ಪ್ರನಡೆಯುವ ಕ್ರಿಯೆಯಾಗಿದೆ. ಇದು ಸಮಯ ತೆಗೆದುಕೊಳ್ಳುತ್ತದೆ. ನಾವು ಧನಾತ್ಮಕವಾಗಿರಬೇಕು. ನಾವು ಉತ್ಸಾಹದಿಂದ ಇರಬೇಕು" ಎಂದು ಅವರು ಹೇಳಿದರು.

77 ವರ್ಷದ ಮೂರ್ತಿ, ದೇಶವು ತನ್ನ ಯುವಕರಿಗೆ ಅಡೆತಡೆಗಳನ್ನು ತೆಗೆದುಹಾಕಬೇಕಾಗಿದೆ. ಏಕೆಂದರೆ ನನ್ನ ಸ್ವಂತ ನಂಬಿಕೆಯೆಂದರೆ ಇಂದಿನ ಯುವಕನು ನಾನು ಅವರ ವಯಸ್ಸಿನಲ್ಲಿದ್ದಕ್ಕಿಂತ ಕನಿಷ್ಠ 10-20 ಪಟ್ಟು ಬುದ್ಧಿವಂತನಾಗಿರುತ್ತಾನೆ. ಯುವಜನರಲ್ಲಿನ ಪ್ರಗತಿ, ಮಾಹಿತಿಗೆ ಹೇರಳವಾದ ಪ್ರವೇಶ ಮತ್ತು ಉತ್ಸಾಹವನ್ನು ಹುರಿದುಂಬಿಸಬೇಕಾಗಿದೆ. ಅವರಿಗೆ ಅವಕಾಶಗಳನ್ನು ಒದಗಿಸಲು ನಾವು ಏನು ಮಾಡಬಹುದೋ ಅದನ್ನು ಮಾಡೋಣ, ಇದರಿಂದ ಅವರು ಕೂಡ ಆಕಾಶವನ್ನು ಮುಟ್ಟಬಹುದು" ಎಂದು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+