Covid-19: ಭಾರತದಲ್ಲಿ 1,000 ದಾಟಿದ ಕೊರೋನ ಕೇಸ್‌ಗಳ ಸಂಖ್ಯೆ..ಕಳೆದ ಒಂದು ವಾರದಲ್ಲೇ 752 ಪ್ರಕರಣಗಳು! ಯಾವ ರಾಜ್ಯದಲ್ಲಿ ಎಷ್ಟು?

ದೇಶದೆಲ್ಲೆಡೆ ಕೊರೋನಾ ವೈರಸ್ ತಾಂಡವ ಆಡುತ್ತಿದೆ. ಹೊಸದಾಗಿ ಮತ್ತೆ ಬಂದು ಅಟ್ಟಹಾಸ ಮೆರೆಯುತ್ತಿರುವ ಕೊರೋನ ವೈರಸ್, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಪುನಃ ಎಚ್ಚರಿಕೆ ಬೆಳೆದುಬಂದಿದೆ. ಕಳೆದ ಒಂದೇ ವಾರದಲ್ಲಿ ದೇಶಾದ್ಯಂತ 752 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,000 ಗಿಂತ ಹೆಚ್ಚುಮಟ್ಟಕ್ಕೆ ತಂದು ತಾದಿದೆ. ವಿಶೇಷವಾಗಿ ಕೇರಳ, ಮಹಾರಾಷ್ಟ್ರ, ದೆಹಲಿ ಮೊದಲಾದ ರಾಜ್ಯಗಳಲ್ಲಿ ಈ ಹೆಚ್ಚಳ ಸ್ಪಷ್ಟವಾಗಿದೆ.

ಭಾರತದಲ್ಲಿ 1,000 ದಾಟಿದ ಕೊರೋನ ಕೇಸ್‌ಗಳ ಸಂಖ್ಯೆ..!

ಕೇರಳ ಮುಂಚೂಣಿಯಲ್ಲಿ:

ಇನ್ನು ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇರಳ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ಕೇವಲ ಏಳು ದಿನಗಳ ಅವಧಿಯಲ್ಲಿ ಇಲ್ಲಿ 335 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದರ ಪರಿಣಾಮವಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 430ಕ್ಕೆ ಏರಿಕೆಯಾಗಿದೆ. ಪಬ್ಲಿಕ್ ಪ್ಲೇಸ್‌ಗಳಲ್ಲಿ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಉಪಯೋಗ ಮತ್ತೊಮ್ಮೆ ಅವಶ್ಯಕವೆನಿಸಿದಂತಾಗಿದೆ. ಮಹಾರಾಷ್ಟ್ರ ಮತ್ತು ದೆಹಲಿ ಕೂಡ ಸೋಂಕಿನ ಹೆಚ್ಚಳವನ್ನು ನೋಡುತ್ತಿರುವ ಪ್ರಮುಖ ರಾಜ್ಯಗಳೆನ್ನಬಹುದು. ಮಹಾರಾಷ್ಟ್ರದಲ್ಲಿ ಕಳೆದ ವಾರದಲ್ಲಿ 153 ಪ್ರಕರಣಗಳು ವರದಿಯಾಗಿವೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 209. ದೆಹಲಿಯಲ್ಲಿ 99 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 104ಕ್ಕೆ ತಲುಪಿದೆ.

ಹೊಸ ರೂಪಾಂತರಗಳ ಆತಂಕ:

ಇನ್ನು ಹೆದ್ದಾರಿ ಆರೋಗ್ಯ ಸಂಸ್ಥೆ INSACOG (Indian SARS-CoV-2 Genomics Consortium) ನೀಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಇದೀಗ ಎರಡು ಹೊಸ ರೂಪಾಂತರಗಳ ಪತ್ತೆಯಾಗಿದೆ: NB.1.8.1 ಮತ್ತು LF.7. ಈ ರೂಪಾಂತರಗಳನ್ನು ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ (WHO) ಮೇಲ್ವಿಚಾರಣೆಯಲ್ಲಿರುವ ರೂಪಾಂತರಗಳು (Variants Under Monitoring) ಎಂದು ವರ್ಗೀಕರಿಸಿದ್ದು, ಅವು ಕಾಳಜಿಯ ರೂಪಾಂತರ ಅಥವಾ ಆಸಕ್ತಿಯ ರೂಪಾಂತರ ಪಟ್ಟಿಯಲ್ಲಿ ಸೇರಿಲ್ಲ.

ಹೀಗಿದ್ದರೂ ಕೂಡ ಈ ಹೊಸ ರೂಪಾಂತರಗಳು ಪರಿಸ್ಥಿತಿಯ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದು ಮುಂದಿನ ವಾರಗಳಲ್ಲಿ ತಿಳಿದುಬರಬೇಕಿದೆ. ತಜ್ಞರ ಪ್ರಕಾರ, ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಿದ್ದರೆ, ಸೋಂಕಿನ ಪ್ರಮಾಣ ಹೆಚ್ಚಾಗಬಹುದು. ಆದರೆ ಈವರೆಗೆ ಈ ರೂಪಾಂತರಗಳಿಂದ ಆಗುವ ರೋಗಲಕ್ಷಣಗಳು ಸೌಮ್ಯವಾಗಿಯೇ ಇವೆ ಎಂದು ವಿವರಿಸಲಾಗಿದೆ.

ದೆಹಲಿ ಸಿಎಂ ರೇಖಾ ಗುಪ್ತಾ ಭರವಸೆ:

ಈ ನಡುವೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸೋಂಕಿನ ಪ್ರಮಾಣದಲ್ಲಿ ಏರಿಕೆ ಇದೆ ಎಂಬುದು ನಮಗೆ ಗೊತ್ತಿದೆ. ಆದರೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ದೆಹಲಿಯ ಆಸ್ಪತ್ರೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಬೆಡ್‌ಗಳು, ಔಷಧಿಗಳು, ವೆಂಟಿಲೇಟರ್‌ಗಳು ಎಲ್ಲವೂ ಸಿದ್ಧ ಎಂದರು.

ಇತರೆ ರಾಜ್ಯಗಳಲ್ಲಿಯೂ ಹೆಚ್ಚಳ:

ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯ ಹೊರತಾಗಿ, ಇತರೆ ರಾಜ್ಯಗಳಲ್ಲಿಯೂ ಸಾಂಕ್ರಾಮಿಕದ ಏರಿಕೆಯಾಗಿರುವುದು ಸ್ಪಷ್ಟವಾಗಿದೆ. ಗುಜರಾತ್‌ನಲ್ಲಿ 83 ಹೊಸ ಪ್ರಕರಣಗಳು, ಕರ್ನಾಟಕದಲ್ಲಿ 47 ಹೊಸ ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 15 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 12 ಪ್ರಕರಣಗಳು ಇವೆ. ಈ ಸಂಖ್ಯೆ ತೀರಾ ಕಡಿಮೆಯಾದರೂ, ಇದು ದೇಶದ ಆರೋಗ್ಯ ಜಾಲದ ಮೇಲಿನ ಒತ್ತಡವನ್ನು ನಿಧಾನವಾಗಿ ಹೆಚ್ಚಿಸುವ ಸೂಚನೆಯೆಂದು ತಜ್ಞರು ಹೇಳುತ್ತಿದ್ದಾರೆ.

ಶನಿವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ರಾಷ್ಟ್ರೀಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆರೋಗ್ಯ ಸಚಿವಾಲಯದ ಪ್ರಕಟಣೆಯ ಪ್ರಕಾರ, ಇತ್ತೀಚಿನ ಹೆಚ್ಚಳದ ಪ್ರಮುಖ ಶೇಕಡಾವಾರು ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಬಂದಿದೆ. ಬಹುತೆಕ ಪ್ರಕರಣಗಳು ಸೌಮ್ಯವಾಗಿದೆ ಮತ್ತು ಪೋಷಕರು ಮನೆಯಲ್ಲಿಯೇ ಆರೈಕೆಯನ್ನು ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಔಷಧಿ ಸಂಗ್ರಹ, ಆಕ್ಸಿಜನ್ ಸಪ್ಲೈ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಸಕ್ರಿಯಗೊಳಿಸಲಾಗಿದೆ. ಸಾಮಾನ್ಯ ಜನತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಮುಂದಿನ ವಾರಗಳಲ್ಲಿ ಸೋಂಕು ಕಡಿಮೆಯಾಗುತ್ತದೆಯೋ ಅಥವಾ ಇನ್ನಷ್ಟು ಹರಡುತ್ತದೆಯೋ ಎಂಬುದನ್ನು ನಿರ್ಧರಿಸುವಲ್ಲಿ ಈ ಮುನ್ನೆಚ್ಚರಿಕೆಯ ಶಿಸ್ತೇ ನಿರ್ಣಾಯಕ.

ಮೂರು ವರ್ಷಗಳ ಸಾಂಕ್ರಾಮಿಕದ ನಂತರ, ಜನತೆ ಕೋವಿಡ್-19 ಭೀತಿಯಿಂದ ಬಹುತೇಕ ಹೊರಬಂದಂತಾಗಿದೆ. ಆದರೆ ವೈರಸ್ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ ಎಂಬುದನ್ನು ಈವರೆಗೆ ಕಂಡುಬರುವ ಸಂಖ್ಯೆಗಳು, ರೂಪಾಂತರಗಳು ಹಾಗೂ ಪತ್ತೆಯಾದ ಪ್ರಕರಣಗಳು ಮತ್ತೆ ನೆನಪಿಸುತ್ತವೆ. ಸಾವಿನ ಪ್ರಮಾಣ ಕಡಿಮೆಯಾದರೂ, ಸಾಮಾನ್ಯ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ತರುವ ಸಾಧ್ಯತೆ ಇರುವುದರಿಂದ, ಈ ಪ್ರಮಾಣದ ಹೆಚ್ಚಳವನ್ನು ಸರಳವಾಗಿ ನಿರ್ಲಕ್ಷಿಸಬಾರದು. ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಜವಾಬ್ದಾರಿಯುತವಾಗಿ ನಡೆದು, ಕೋವಿಡ್-19 ನ್ನು ಮತ್ತೆ ಹಿಡಿತಕ್ಕೊಳಪಡಿಸಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+