ಸೀಮಿತ ಪೂರೈಕೆ ಮತ್ತು ಏಷ್ಯನ್, ಆಫ್ರಿಕನ್ ಖರೀದಿದಾರರಿಂದ ಬೇಡಿಕೆ ಅಧಿಕವಾದ ಕಾರಣದಿಂದಾಗಿ ಭಾರತದ ಅಕ್ಕಿ ರಫ್ತು ದರಗಳು ಈ ವಾರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಪಾರ್ಬಾಯಿಲ್ಡ್ ಅಕ್ಕಿ ಪ್ರತಿ ಟನ್ಗೆ ಶೇಕಡ 5 ರಷ್ಟು ಹೆಚ್ಚಾಗಿ $533-$542 ಗೆ ತಲುಪಿದೆ.
ಕಳೆದ ವಾರದಲ್ಲಿ ಪಾರ್ಬಾಯಿಲ್ಡ್ ಅಕ್ಕಿ $525- $535 ಆಗಿತ್ತು. ಸರ್ಕಾರದ ಭತ್ತ ಖರೀದಿ ಮತ್ತು ನಡೆಯುತ್ತಿರುವ ಅಕ್ಕಿ ಗಿರಣಿ ಲಭ್ಯತೆ ಕಡಿಮೆಯಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ಓಲಂ ಅಗ್ರಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ನಿತಿನ್ ಗುಪ್ತಾ, "ಸರಕಾರದ ಭತ್ತ ಖರೀದಿಯು ಖಾಸಗಿಯವರಿಗೆ ಸ್ವಲ್ಪಮಟ್ಟಿಗೆ ಬಿಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸರಬರಾಜು ಸೀಮಿತವಾಗಿದೆ," ಎಂದು ಹೇಳಿದ್ದಾರೆ.

ಭಾರತದ ಅಕ್ಕಿ ಉತ್ಪಾದನೆಯು ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಈ ಆರ್ಥಿಕ ವರ್ಷದಲ್ಲಿ ಕುಸಿಯುವ ನಿರೀಕ್ಷೆಯಿದೆ. ಚುನಾವಣೆಯ ಮೊದಲು ಆಹಾರ ಬೆಲೆಗಳನ್ನು ನಿಯಂತ್ರಿಸಲು ಸಂಭಾವ್ಯ ರಫ್ತು ನಿರ್ಬಂಧಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ವಿಯೆಟ್ನಾಂನ 5 ಪ್ರತಿಶತ ಮುರಿದ ಅಕ್ಕಿಯನ್ನು ಪ್ರತಿ ಮೆಟ್ರಿಕ್ ಟನ್ಗೆ $ 630 ಕ್ಕೆ ನೀಡಲಾಯಿತು. ಹಿಂದಿನ ವಾರ $ 653 ರಷ್ಟಿದ್ದು, ಅದಕ್ಕಿಂತ ಕಡಿಮೆ ಇದಾಗಿದೆ. ಮೆಕಾಂಗ್ ಡೆಲ್ಟಾದಲ್ಲಿ ಮುಂಬರುವ ಚಳಿಗಾಲದ ಕಾರಣ ವ್ಯಾಪಾರಿಗಳು ಬಲವಾದ ಸರಬರಾಜುಗಳನ್ನು ನಿರೀಕ್ಷಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಬ್ಯಾಂಕಾಕ್ ಮೂಲದ ವ್ಯಾಪಾರಿಯ ಪ್ರಕಾರ, ಥೈಲ್ಯಾಂಡ್ 5 ಪ್ರತಿಶತ ಬ್ರೀಕನ್ ರೈಸ್ ಬೆಲೆಯಲ್ಲಿ ಸ್ವಲ್ಪ ಕುಸಿತವಾಗಿದೆ. ಬಹ್ತ್ ಮೌಲ್ಯ ದುರ್ಬಲಗೊಳ್ಳುತ್ತಿರುವ ಕಾರಣ ಪ್ರತಿ ಟನ್ಗೆ $663-$665 ಆಗಿದೆ. ಆದರೆ ದೇಶೀಯ ಚಟುವಟಿಕೆ ಮತ್ತು ಇಂಡೋನೇಷ್ಯಾದಿಂದ 0.5 ಮಿಲಿಯನ್ ಟನ್ಗಳಿಗೆ ಹೊಸ ಆರ್ಡರ್ ಬೆಂಬಲ ಬೆಲೆಯನ್ನು ಹೊಂದಿದೆ ಎಂದು ಬ್ಯಾಂಕಾಕ್ ಮೂಲದ ವ್ಯಾಪಾರಿ ತಿಳಿಸಿದ್ದಾರೆ.
ಈ ನಡುವೆ ಉತ್ತಮ ಇಳುವರಿ ಮತ್ತು ದಾಖಲೆಯ ಮೀಸಲುಗಳ ಹೊರತಾಗಿಯೂ ಬಾಂಗ್ಲಾದೇಶದಲ್ಲಿ ಅಕ್ಕಿ ಬೆಲೆಗಳು ಹೆಚ್ಚಾಗಿ ಉಳಿದಿದೆ. ಇದಾದ ಬಳಿಕ ಅಕ್ಕಿ ಸಂಗ್ರಹಕಾರರ ವಿರುದ್ಧ ಪ್ರಧಾನಿ ಶೇಖ್ ಹಸೀನಾ ಆದೇಶವನ್ನು ನೀಡಿದರು. ಇನ್ನು ಕರ್ನಾಟಕದಲ್ಲಿಯೂ ಅಕ್ಕಿ ಶೇಖರಣೆ ಅಧಿಕವಾಗಿದ್ದು, ಇದರಿಂದಾಗಿ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಬೆಲೆ ಏರಿಕೆ?
ಕರ್ನಾಟಕದ ಅಧಿಕವಾಗಿ ಭತ್ತವನ್ನು ಬೆಳೆಯುವ ಪ್ರದೇಶ ಎಂದು ಪರಿಗಣಿಸಲಾದ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭತ್ತದ ಉತ್ಪಾದನೆಯಲ್ಲಿ ಶೇಕಡ 15 ರಷ್ಟು ಹೆಚ್ಚಳ ಕಂಡು ಬಂದಿದೆ. ಆದರೂ ಭತ್ತದ ಬೆಲೆ ಮಾತ್ರ ಕರ್ನಾಟಕದಲ್ಲಿ ಶೇಕಡ 25 ರಷ್ಟು ಏರಿಕೆಯಾಗಿದೆ.
ಈ ಭತ್ತದ ಬೆಲೆ ಏರಿಕೆಯಿಂದಾಗಿ ಅಕ್ಕಿ ಬೆಲೆಯು ಕೂಡಾ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಈಗಾಗಲೇ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಪ್ರತಿ ನಿತ್ಯ ಒಂದು ಪ್ಲೇಟ್ ಊಟದ ಬೆಲೆಯೂ ಗಗನಕೇರುತ್ತಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications