ಭಾರತೀಯ ರೈಲ್ವೆ ಪ್ರವಾಸ ಮತ್ತು ಆಹಾರ ನಿಗಮ (IRCTC) ದೊಡ್ಡ ಗುಡ್ನ್ಯೂಸ್ ನೀಡಿದೆ. ಅದೇನೆಂದರೆ ಕರ್ನಾಟಕದ ವಾಸಿಗಳಿಗೆ ಧಾರ್ಮಿಕ ಯಾತ್ರೆಗಳನ್ನು ಅನುಭವಿಸಲು ವಿಶೇಷ ಅವಕಾಶ ಲಭಿಸಿದೆ. ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ, ಎರಡು ಪ್ರತ್ಯೇಕ ತೀರ್ಥಯಾತ್ರೆ ಪ್ಯಾಕೇಜುಗಳನ್ನು ಘೋಷಿಸಲಾಗಿದೆ. ಇದರ ಜೊತೆಗೆ, ರಾಜ್ಯ ಸರ್ಕಾರವು ಪ್ರತಿಯೊಬ್ಬ ಭಕ್ತನಿಗೂ ಆರ್ಥಿಕ ಸಹಾಯ ರೂಪದಲ್ಲಿ ವಿಶೇಷ ಸಬ್ಸಿಡಿಯನ್ನೂ ನೀಡುತ್ತಿದೆ.

ಕಾಶಿ ದರ್ಶನ..ಸಂಸ್ಕೃತಿಯ ಪವಿತ್ರ ತಾಣಗಳ ಪ್ರವಾಸ!
"ಕಾಶಿ ದರ್ಶನ" ಎಂಬ ಹೆಸರಿನ ಮೊದಲ ಪ್ರವಾಸವು ಆಗಸ್ಟ್ 31ರಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ 8ರವರೆಗೆ ಒಂಬತ್ತು ದಿನಗಳ ಧಾರ್ಮಿಕ ಯಾತ್ರೆಯಾಗಿದೆ. ಈ ಪ್ರವಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣವಾಗಿರುವ ಸ್ಥಳಗಳಾದ ವಾರಣಾಸಿ, ಅಯೋಧ್ಯೆ, ಗಯಾ ಮತ್ತು ಬೋಧ್ ಗಯಾ ಪ್ರದೇಶಗಳನ್ನು ಒಳಗೊಂಡಿದೆ.
ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇವಾಲಯ, ತುಳಸಿ ಮಂದಿರ ಮತ್ತು ಸಂಕಷ್ಟ ಮೋಚನ ಹನುಮಾನ್ ಮಂದಿರ ಸೇರಿವೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಮತ್ತು ಹನುಮಾನ್ ಗರ್ಹಿಯಂತೆ ಐತಿಹಾಸಿಕ ದೇವಾಲಯಗಳು ಹಾಗೂ ಗಯಾ ಮತ್ತು ಬೋಧ್ ಗಯಾದಲ್ಲಿ ವಿಷ್ಣುಪಾದ್ ಮತ್ತು ಹನುಮಾನ್ ದೇವಾಲಯಗಳಿಗೂ ಭೇಟಿ ನೀಡಲಾಗುತ್ತದೆ.
ಕಾಶಿ ದರ್ಶನ ಪ್ಯಾಕೇಜಿನ ವೆಚ್ಚ ಮತ್ತು ಸಬ್ಸಿಡಿ:
ಈ ಪ್ರವಾಸದ ಸಂಪೂರ್ಣ ವೆಚ್ಚ 22,500 ರೂ. ಆಗಿದ್ದು, ಕರ್ನಾಟಕ ಸರ್ಕಾರವು ₹7,500 ನಷ್ಟ ಭರ್ತಿಯಾಗಿ ನೀಡುತ್ತಿರುವ ಕಾರಣ, ಭಕ್ತರಿಗೆ 15,000 ರೂ.ಗೆ ಪ್ರವಾಸದ ಅನುಭವ ದೊರೆಯಲಿದೆ. ಈ ಪ್ರಯಾಣಕ್ಕಾಗಿ ನಿಗದಿಪಡಿಸಿದ ಬೋರ್ಡಿಂಗ್ ಪಾಯಿಂಟ್ಗಳಲ್ಲಿ ಬೆಂಗಳೂರು (SMVT), ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ಸೇರಿವೆ.
ದಕ್ಷಿಣ ಯಾತ್ರೆ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು:
ದ್ವಿತೀಯ ಪ್ರವಾಸ "ದಕ್ಷಿಣ ಯಾತ್ರೆ" ಎಂಬ ಹೆಸರಿನಲ್ಲಿ ಸೆಪ್ಟೆಂಬರ್ 11ರಿಂದ ಆರಂಭಗೊಂಡು ಆರು ದಿನಗಳ ಕಾಲ ನಡೆಯಲಿದೆ. ಈ ಪ್ರವಾಸವು ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಾದ ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ ಮತ್ತು ಮಧುರೈ ಪ್ರದೇಶಗಳಿಗೆ ಸಾಗುತ್ತದೆ. ಈ ಪ್ರವಾಸದಲ್ಲಿ ಕನ್ಯಾಕುಮಾರಿಯ ಭಗವತಿ ದೇವಸ್ಥಾನ ಮತ್ತು ವಿವೇಕಾನಂದ ಶಿಲಾ ಸ್ಮಾರಕ, ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯ, ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ ಮತ್ತು ಮಧುರೈನ ಶ್ರೀಮೀನಾಕ್ಷಿ ದೇವಸ್ಥಾನಗಳ ಭೇಟಿ ನಿಗದಿಯಾಗಿದೆ.
ಈ ಯಾತ್ರೆಯ ಪ್ಯಾಕೇಜ್ ವೆಚ್ಚ 15,000 ರೂ. ಆಗಿದ್ದು, ರಾಜ್ಯ ಸರ್ಕಾರವು ₹5,000 ಸಬ್ಸಿಡಿ ನೀಡುತ್ತಿದೆ. ಪರಿಣಾಮವಾಗಿ ಭಕ್ತರು 10,000 ರೂ.ಗೆ ಈ ಯಾತ್ರೆಯಲ್ಲಿ ಭಾಗವಹಿಸಬಹುದು. ಈ ಪ್ರವಾಸದ ಬೋರ್ಡಿಂಗ್ ಪಾಯಿಂಟ್ಗಳಲ್ಲಿ SMVT ಬೆಂಗಳೂರು, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ಸೇರಿವೆ.
ಎರಡೂ ಯಾತ್ರೆಗಳಿಗೆ ಭಾರತ್ ಗೌರವ್ ಎಸಿ III ಟೈರ್ ಕ್ಲಾಸ್ ರೈಲುಗಳಲ್ಲಿ ಪ್ರಯಾಣ ಕಲ್ಪಿಸಲಾಗಿದೆ. ಪ್ರವಾಸದ ವೇಳೆ ಹವಾನಿಯಂತ್ರಣವಿಲ್ಲದ ಕೊಠಡಿಗಳಲ್ಲಿ ವಸತಿ, ಸ್ನಾನ ಮತ್ತು ಬಟ್ಟೆ ಬದಲಾವಣೆಗೆ ವ್ಯವಸ್ಥೆ, ಸಸ್ಯಾಹಾರಿ ಆಹಾರ, ಸ್ಥಳಾಂತರಕ್ಕೆ ಬಸ್ ಸೇವೆ, ಪ್ರವಾಸದ ಬಗ್ಗೆ ಮಾರ್ಗದರ್ಶನ ನೀಡಲು IRCTC ಪ್ರವಾಸ ವ್ಯವಸ್ಥಾಪಕರು, ಆನ್ಬೋರ್ಡ್ ಭದ್ರತೆ ಮತ್ತು ಪ್ರಯಾಣ ವಿಮೆಯಂತಹ ಮೂಲಭೂತ ಹಾಗೂ ಸುಧಾರಿತ ಸೌಲಭ್ಯಗಳು ಲಭ್ಯವಿರುತ್ತವೆ.
- ಬೆಂಗಳೂರು: 9003140710, 8595931290, 8595931291, 8595931292
- ಮೈಸೂರು: 8595931294
- ಹುಬ್ಬಳ್ಳಿ: 8595931293
IRCTC ಮತ್ತು ಕರ್ನಾಟಕ ಸರ್ಕಾರದ ಈ ಜಂಟಿ ಯೋಜನೆಯು ನಂಬಿಕೆ ಮತ್ತು ಅನುಭವಗಳನ್ನು ಮತ್ತಷ್ಟು ಸಮೃದ್ಧಗೊಳಿಸುವ ದಾರಿ ತೋರುತ್ತಿದೆ. ಕಡಿಮೆ ವೆಚ್ಚದಲ್ಲಿ ಸ್ಮರಣೀಯ ತೀರ್ಥಯಾತ್ರೆ ಮಾಡಬೇಕೆಂಬ ಉದ್ದೇಶವಿದ್ದವರಿಗೆ ಇದು ಒಂದು ಅದ್ಭುತ ಅವಕಾಶ. ಪವಿತ್ರತೆಯ ಜೊತೆ, ಸುರಕ್ಷತೆಯೂ ಕೂಡ ಈ ಯಾತ್ರೆಯ ಪ್ರಮುಖ ಅಂಶವಾಗಿದ್ದು, ಭಕ್ತರಿಗೆ ನೆಮ್ಮದಿಯ ಪ್ರಯಾಣ ಖಚಿತವಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications