ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಚಾಪ್ಟರ್ 1 (Kantara Chapter 1) ಸದ್ಯ ಭಾರೀ ಸದ್ದು ಮಾಡುತ್ತಿದೆ. ಅಕ್ಟೋಬರ್ 2 ರಂದು ರಿಲೀಸ್ ಆದ ಕಾಂತಾರ ಅಧ್ಯಾಯ 1 ಸಿನಿಮಾ ಕಲೆಕ್ಷನ್ ಬರೀ 10 ದಿನದಲ್ಲಿ 500 ಕೋಟಿ ದಾಟಿದೆ. ಹತ್ತು ದಿನವಾದರೂ ಕಾಂತಾರ ಅಬ್ಬರ ಇನ್ನೂ ನಿಂತಿಲ್ಲ. ಹೌಸ್ ಫುಲ್ ಶೋಗಳು, ಥಿಯೇಟರ್ ಮುಂದೆ ಜನಜಂಗುಳಿ, ಇನ್ನೂ ಬುಕ್ಕಿಂಗ್ ಮಾಡಲಾಗದೆ ಜನ ಕಾಯುತ್ತಲೇ ಇದ್ದಾರೆ. ಅಂತೂ ಈ ಬಾರಿ ಕಾಂತಾರ ಹೊಸ ದಾಖಲೆ ಸೃಷ್ಟಿಸೋದು ಪಕ್ಕಾ ಅಂತಾನೂ ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.

ಅಂತೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಕಾಂತಾರ ಅಧ್ಯಾಯ 1, ವಿಶ್ವದಾದ್ಯಂತ ಭಾರೀ ಮೆಚ್ಚುಗೆಯನ್ನು ಗಳಿಸುತ್ತಿದೆ. ಇದೀಗ ಬಿಡುಗಡೆಯಾದ ಕೇವಲ ಹತ್ತೇ ದಿನದಲ್ಲಿ 590 ಕೋಟಿ ಗಳಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 600 ಕೋಟಿ ಗಡಿ ದಾಟುವ ನೀರೀಕ್ಷೆಯಿದೆ.
ಎರಡನೇ ವಾರದಲ್ಲೂ ಕಾಂತಾರದ ಅಬ್ಬರ
ಮೊದಲ ವಾರದಲ್ಲೇ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದ ಕಾಂತಾರ ಚಾಪ್ಟರ್ 1 ಎರಡನೇ ವಾರಾಂತ್ಯದಲ್ಲಿ ನಿರೀಕ್ಷಿಸದ ಮಟ್ಟದಷ್ಟು ಜನರನ್ನ ರೀಚ್ ಆಗಿದೆ. ಅಲ್ಲದೇ ಉತ್ತಮ ಗಳಿಕೆಯೂ ಆಗಿದೆ. ಶನಿವಾರದಂದು ದೇಶೀಯ ಸಂಗ್ರಹದಲ್ಲಿ 66% ಏರಿಕೆ ದಾಖಲಿಸಿದ್ದು, ಇದು ಕಾಂತಾರ ಸಿನಿಮಾದ ಬ್ಲಾಕ್ಬಸ್ಟರ್ ಹಿಟ್ ಅಂತಾನೇ ಹೇಳಬಹುದು.
ಚಿತ್ರವು ತನ್ನ 10ನೇ ದಿನವಾದ ಶನಿವಾರ ಭಾರತದಲ್ಲಿ ₹37 ಕೋಟಿ ನಿವ್ವಳ ಆದಾಯ ಗಳಿಸಿದೆ. ಇದು ಶುಕ್ರವಾರಕ್ಕಿಂತ 66% ಮತ್ತು ಮೊದಲ ವಾರದ ಕೊನೆಯ ದಿನವಾದ ಗುರುವಾರಕ್ಕಿಂತ ಸುಮಾರು 75% ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಈ ಮೂಲಕ 10 ದಿನಗಳಲ್ಲಿ ಭಾರತದಲ್ಲಿ ಒಟ್ಟು ₹396.65 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ.
ಇನ್ನು ಕಾಂತಾರ ಚಾಪ್ಟರ್ 1 ಕ್ಕೆ ವಿಶ್ವಾದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ, ಆದ್ದರಿಂದ ಎರಡನೇ ಭಾನುವಾರ ಮತ್ತಷ್ಟು ಗಳಿಸುವ ನಿರೀಕ್ಷೆಯಿದೆ. ಬರೀ ಭಾರತದಲ್ಲಿ ಮಾತ್ರ 40 ಕೋಟಿಗೂ ಹೆಚ್ಚು ಗಳಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಮೊದಲ ವಾರದಲ್ಲಿ ಗಳಿಸಿದ್ದೆಷ್ಟು?
ಕಾಂತಾರ ಚಾಪ್ಟರ್ 1 ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಘೋಷಿಸಿರುವ ಪ್ರಕಾರ, ಚಿತ್ರವು ಮೊದಲ ವಾರದಲ್ಲಿ ವಿಶ್ವಾದ್ಯಂತ ₹509 ಕೋಟಿ ಗಳಿಸಿರುವುದಾಗಿ ಶುಕ್ರವಾರ ಘೋಷಿಸಿತ್ತು. ಈ ಅಂದಾಜಿನ ಪ್ರಕಾರ, ಚಿತ್ರವು 10 ದಿನಗಳಲ್ಲಿ ವಿಶ್ವಾದ್ಯಂತ ₹590 ಕೋಟಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ.
ಅತೀ ಹೆಚ್ಚು ಗಳಿಕೆಯ ಸಿನಿಮಾ "ಕಾಂತಾರ ಚಾಪ್ಟರ್ 1"
ಹಾಗೆಐೇ ಭಾರತೀಯ ವ್ಯಾಪಾರ ವಿಶ್ಲೇಷಕರ ಪ್ರಕಾರ, ಕಾಂತಾರ ಚಾಪ್ಟರ್ 1 ಗಳಿಕೆ ₹560 ಕೋಟಿ ಮುಟ್ಟಬಹುದು ಎಂದು ಹೇಳಲಾಗಿದೆ. ಈ ಎರಡೂ ಅಂದಾಜಿನ ಪ್ರಕಾರವೂ, ಈ ಚಿತ್ರವು ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 25 ಭಾರತೀಯ ಚಲನಚಿತ್ರಗಳ ಪಟ್ಟಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಈ ಮೂಲಕ 'ಟೈಗರ್ ಜಿಂದಾ ಹೈ' ಮತ್ತು 'ಧೂಮ್ 3' (ಎರಡೂ ₹558 ಕೋಟಿ) ಚಿತ್ರಗಳನ್ನು ಹಿಂದಿಕ್ಕಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications