6th guarantee: ಸರ್ಕಾರದ 6ನೇ ಗ್ಯಾರಂಟಿ ಘೋಷಣೆ..! ಉಚಿತ..ಉಚಿತ..ಭೂಮಿಯೂ ಉಚಿತ..! ಪಡೆಯೋದು ಹೇಗೆ, ಏನು ಲಾಭ..?

ಕರ್ನಾಟಕ ಜನತೆಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ ಸರ್ಕಾರ..ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಸರ್ಕಾರ ಈಗ 6ನೇ ಗ್ಯಾರಂಟಿ ಘೋಷಿಸಿದೆ. ಅದೇ 'ಭೂ ಗ್ಯಾರಂಟಿ'..ಅಂದರೆ ಜನರಿಗೆ ಉಚಿತ ಭೂಮಿ ನೀಡುವ ಗ್ಯಾರಂಟಿ. ಇದು ಈಗ ಆರನೇ ಗ್ಯಾರಂಟಿ ಯೋಜನೆಯಾಗಿ ಹೊರ ಹೊಮ್ಮಿದೆ. ಇದು ಯಾರಿಗೆ ಅರ್ಹ, ಇದು ಬಡ ಜನರಿಗೆ ಹೇಗೆ ಸಿಗುತ್ತದೆ. ಇದು ಹೇಗೆ ಉಪಯೋಗವಾಗುತ್ತದೆ ಎಂಬುದರ ಸಂಪೂರ್ಣ ಡೀಟೆಲ್ಸ್ ಇಲ್ಲಿದೆ ನೋಡಿ.

6ನೇ ಗ್ಯಾರಂಟಿ..! ಉಚಿತ..ಉಚಿತ..ಭೂಮಿಯೂ ಉಚಿತ..!

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು (ಮೇ 21) ಈ ಮಹತ್ವದ ಗ್ಯಾರಂಟಿ ಬಗ್ಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೊದಲೇ ತಿಳಿಸಿದ್ದರು. ಆದರೆ ಇದು ಈಗ ಗ್ಯಾರಂಟಿಗಳ ಗುಂಪಿಗೆ ಸೇರಿರುವ ಮಹತ್ವದ ನಿರ್ಧಾರವಾಗಿದೆ. ಗ್ಯಾರಂಟಿ ಫಲಾನುಭವಿಗಳಿಗೆ ಇದು ಮತ್ತೊಂದು ಆಶಾಭಾವ ಮೂಡಿಸಿದೆ.

ಅಂದಹಾಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮೊದಲೇ ಹೇಳಿದ ಹಾಗೆ, ಹಲವಾರು ವರ್ಷಗಳಿಂದ ಹಕ್ಕುಪತ್ರ ಇಲ್ಲದವರು ಈ ಯೋಜನೆಗೆ ಪಾತ್ರರಾಗುತ್ತಾರೆ. ಕಾನೂನುಬದ್ಧ ಭೂಸ್ವಾಮ್ಯ ದಾಖಲೆ ಇಲ್ಲದವರು ಈ ಯೋಜನೆಯ ಲಾಭಾರ್ಥಿಗಳು ಎನ್ನಬಹುದು. ಇವರು ತಮ್ಮ ಬಳಿಯು ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರೂ, ಆಡಳಿತಾತ್ಮಕವಾಗಿ ಅಕ್ರಮ ವಾಸಸ್ಥಾನ ಎನ್ನಲಾಗುತ್ತಿತ್ತು. ಆದರೀಗ ಈ ಯೋಜನೆಯಡಿ, ಸರ್ಕಾರ ಅವರಿಗೆ ಅಧಿಕೃತ ಖಾತಾ ನೀಡುತ್ತದೆ.

ಈ ಯೋಜನೆ ಪಡೆಯುವುದು ಹೇಗೆ?

1. ಕಂದಾಯ ಇಲಾಖೆ ಪರಿಶೀಲನೆ:

ಸ್ಥಳೀಯ ತಹಶೀಲ್ದಾರ್‌ಗಳು ಅಥವಾ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಯಾರ್ಯಾರು ಈ ಭೂಮಿಯನ್ನು ವರ್ಷಗಳಿಂದ ಉಪಯೋಗಿಸುತ್ತಿದ್ದಾರೆ ಎಂದು ದೃಢಪಡಿಸುತ್ತಾರೆ. ವಾಸ್ತವಿಕ ಬಳಕೆದಾರರ ಹೆಸರು ದಾಖಲಿಸಿ ಖಾತಾ ಸೃಷ್ಟಿಸಲಾಗುತ್ತದೆ.

2. ಖಾತಾ ಸಿದ್ಧವಾದ ಬಳಿಕ ಲಾಭ:

ಈ ಖಾತೆಯು ವ್ಯಕ್ತಿಯ ನಾಮದಲ್ಲಿರುವ ಅಧಿಕೃತ ದಾಖಲೆ ಆಗುತ್ತದೆ. ಬ್ಯಾಂಕ್ ಸಾಲ ಪಡೆಯುವುದು, ಮನೆ ನಿರ್ಮಾಣ ಅಥವಾ ನಿವೇಶನದ ಮಾನ್ಯತೆ ಪಡೆಯುವಂತಹ ಲಾಭಗಳು ಬಳಿಕ ಸಿಗುತ್ತವೆ.

ಯಾರಿಗೆ ಇದು ಸಹಾಯಕರವಾಗುತ್ತದೆ?

ಬಡ ಮತ್ತು ಹಿನ್ನಲೆಯ ಜನರು:

ಬಡತನದಲ್ಲೇ ಬೇಯುತ್ತಿದ್ದರೂ ಹಲವು ವರ್ಷಗಳಿಂದ ವಾಸವಾಗಿರುವ ಕುಟುಂಬಗಳಿಗೆ ಇದು ಬಹಳ ಸಹಾಯಕವಾಗುತ್ತದೆ. ಅವರಿಗೆ ಹಕ್ಕುಪತ್ರ ನೀಡಿ ಅಧಿಕೃತವಾಗಿ ಜಮೀನು ಸಿಗುವಂತೆ ಮಾಡುತ್ತದೆ ಈ ಯೋಜನೆ.

ಗ್ರಾಮೀಣ ಪ್ರದೇಶದ ರೈತರು:

ಗ್ರಾಮೀಣ ಭಾಗಗಳಲ್ಲಿ ಕೆಲವು ಮಂದಿ ಅರೆ ಸರ್ಕಾರಿ ಭೂಮಿಗಳನ್ನು ಕೃಷಿಗಾಗಿ ಉಪಯೋಗಿಸುತ್ತಿದ್ದರು. ಆದರೆ ಅವರಿಗೆ ಭೂಮಿ ಮೇಲೆ ಯಾವುದೇ ಹಕ್ಕು ಇರಲಿಲ್ಲ. ಆದರೆ ಈ ಯೋಜನೆಯಿಂದ ಅವರಿಗೂ ಉಚಿತ ಭೂಮಿ ಸಿಗುವಂತಾಗಿದೆ.

ನಗರದ ಹೊರವಲಯ ನಿವಾಸಿಗಳು:

ಚಿಕ್ಕ-ಚಿಕ್ಕ ಗುತ್ತಿಗೆ ಮನೆಗಳು ಕಟ್ಟಿರುವ ಕುಟುಂಬಗಳು, ಸರಿಯಾಗಿ ನೆರಳಿಲ್ಲದೇ ಬದುಕುತ್ತಿರುವ ಜೀವಿಗಳು, ಅಸಂಘಟಿತ ಕಾರ್ಮಿಕರು ಮತ್ತು ತಮ್ಮ ಅಂಗಡಿಗಳಿಗೆ ಯಾವುದೇ ಜಮೀನು ದಾಖಲೆ ಇಲ್ಲದವರು ಈ ಯೋಜನೆಯನ್ನು ಪಡೆಯಬಹುದು.

ಭೂ ಖಾತೆ ಪಡೆಯಲು ಪ್ರಕ್ರಿಯೆ ಹೇಗೆ?

1. ರಾಜ್ಯ ಸರ್ಕಾರ ನಿರ್ಧರಿಸಿದ ಅರ್ಜಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

2.ಅಪ್ಲಿಕೇಶನ್ ಫಾರ್ಮ್‌ನಲ್ಲಿ ತಮ್ಮ ವಾಸಸ್ಥಳದ ವಿವರ, ಭೂ ಉಪಯೋಗ ವಿವರ, ಎಷ್ಟು ವರ್ಷಗಳಿಂದತಾವು ಅಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ನೀಡಬೇಕು.

3.ತಾಲ್ಲೂಕು/ನಗರ ಭೂ ದಾಖಲಾತಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

4.ಸ್ಥಳ ಪರಿಶೀಲನೆಯ ನಂತರ, ಅಧಿಕಾರಿಗಳು ನಿಮ್ಮ ಹೆಸರಿನಲ್ಲಿ ಖಾತೆ ಜಾರಿಗೆ ತರಲಿದ್ದಾರೆ.

ಯೋಜನೆಯ ಪ್ರಯೋಜನಗಳು:

1. ಈ ಯೋಜನೆಯಿಂದ, ಭೂಮಿಯ ಮೇಲೆ ಕಾನೂನುಬದ್ಧ ಹಕ್ಕು ಸಿಗುತ್ತದೆ.

2. ಬ್ಯಾಂಕ್‌ಗಳಲ್ಲಿ ರుణ ಪಡೆಯಲು ನೆರವಾಗುತ್ತದೆ.

3. ಭೂ ವಿವಾದಗಳಿಗೆ ಅಂತ್ಯ ಆಗುತ್ತದೆ.

4. ಸರ್ಕಾರದ ಭವಿಷ್ಯದ ಸಬ್ಸಿಡಿ, ಮನೆ ಯೋಜನೆ, ನೀರಾವರಿ ಯೋಜನೆಗಳಿಗೆ ಅರ್ಹತೆ ಸಿಗುತ್ತದೆ.

5. ಡಿಜಿಟಲ್ ಖಾತೆ ರೂಪದಲ್ಲಿ ಭೂಮಿ ದಾಖಲಾತಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+