ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದ್ದೇ ಆಗಿದ್ದು, ಆಟೋ ಚಾಲಕರ ದುಬಾರಿ ದರ್ಬಾರ್ನಿಂದ ಬೆಂಗಳೂರು ಜನತೆಗೆ ದೊಡ್ಡ ತಲೆಬಿಸಿ ಎದುರಾಗಿತ್ತು. ಆದರೆ ಈಗ ಸಾರಿಗೆ ಇಲಾಖೆ ನೀಡಿರುವ ಸೂಚನೆ ಮೀರಿದರೆ, ಆಟೋ ಚಾಲಕರಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ಈ ಹೊಸ ನಿಯಮದಿಂದ ಪ್ರಯಾಣಿಕರಿನ್ನು ಸೇಫ್ ಎನ್ನಬಹುದು.

ಹೌದು, ಇತ್ತೀಚೆಗೆ ಸರ್ಕಾರ ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಂಡ ನಂತರ, ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರು ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರಿಂದ ಅಧಿಕ ದರ ವಸೂಲಿಸುವುದು ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಸಾರಿಗೆ ಇಲಾಖೆ ಸಾರ್ವಜನಿಕರಿಗೆ 'ಮೀಟರ್ ದರಕ್ಕೆ ಒತ್ತಾಯಿಸಿ' ಎಂಬ ಗಂಭೀರ ಸಂದೇಶವನ್ನು ನೀಡಿದೆ
ನಗರದ ಹಲವು ಭಾಗಗಳಲ್ಲಿ ಪ್ರಯಾಣಿಕರು ಕೇವಲ 1-2 ಕಿ.ಮೀ ಪ್ರಯಾಣಕ್ಕೂ ₹100ಕ್ಕಿಂತ ಹೆಚ್ಚು ಶುಲ್ಕ ಕೊಡುತ್ತಿರುವ ವರದಿಗಳು ಬಂದಿವೆ. ಅನೇಕ ಆಟೋ ಚಾಲಕರು ಮೀಟರ್ನ್ನು ಬಳಸದೆ ತಮ್ಮ ಇಚ್ಛೆಯ ದರವನ್ನು ವಿಧಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಸಾರ್ವಜನಿಕರ ಸಹಕಾರವೇ ಶೋಷಣೆಯ ವಿರುದ್ಧದ ಶಸ್ತ್ರಾಸ್ತ್ರವಾಗಿದೆ.
ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ:
ಜೂನ್ 28ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಹೊರಡಿಸಿದ ಅಧಿಕೃತ ಸೂಚನೆಯ ಪ್ರಕಾರ, ಆಟೋ ಚಾಲಕರ ಅಕ್ರಮ ದರ ಶೂಲ್ಕದ ಬಗ್ಗೆ ಹಲವಾರು ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ: "ಸಾರ್ವಜನಿಕರು ಮೀಟರ್ ಇಲ್ಲದ ದರವನ್ನು ಒಪ್ಪಿಕೊಳ್ಳಬಾರದು. ಎಲ್ಲಿ ಬೇಕಾದರೂ ದೂರು ಕೊಡಿ. ಸರ್ಕಾರ ನಿಮ್ಮ ಬೆಂಬಲದಲ್ಲಿದೆ."
ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ ಕೇಂದ್ರಗಳಲ್ಲಿ ತಪಾಸಣೆ ಆರಂಭಿಸಿದ್ದಾರೆ. ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆಯು ಕಂಡುಬಂದಲ್ಲಿ ನೇರವಾಗಿ ದಂಡ ವಿಧಿಸಲಾಗುತ್ತದೆ.
ಉದಾಹರಣೆ: ₹100.89 ಬಿಲ್, ನಿಜವಾದ ದರ ₹48.49:
ಜೂನ್ 18ರಂದು ನಡೆದ ತಪಾಸಣೆಯೊಂದರಲ್ಲಿ, ಕೇವಲ 1.3 ಕಿ.ಮೀ ಪ್ರಯಾಣಕ್ಕೆ ಒಂದು ಆಟೋ ಚಾಲಕ ₹100.89 ಶುಲ್ಕ ವಸೂಲಿಸಿದ್ದ. ಮೀಟರ್ ದರದ ಪ್ರಕಾರ ಇದು ಕೇವಲ ₹48.49 ಆಗಬೇಕಿತ್ತು. ಈ ಒಂದು ಪ್ರಕರಣವಷ್ಟೇ ಅಲ್ಲ; ಇತ್ತೀಚಿನ ದಿನಗಳಲ್ಲಿ ಈ ರೀತಿಯ ಹಲವಾರು ದೂರುಗಳು ಸರಕಾರಕ್ಕೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತಮ್ಮ ಹಕ್ಕಿನ ಅರಿವು ಅಗತ್ಯ:
ಆಟೋ ಚಾಲಕರಿಂದ ನಡೆಯುತ್ತಿರುವ ದರ ಶೋಷಣೆಯ ವಿರುದ್ಧ ಪ್ರತಿ ಪ್ರಯಾಣಿಕರೂ ತಮ್ಮ ಹಕ್ಕನ್ನು ಉಪಯೋಗಿಸಬೇಕಾಗಿದೆ. ಸಾರಿಗೆ ಇಲಾಖೆ ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಮೀಟರ್ ಬಳಸದೆ ದುಬಾರಿ ದರ ಕೇಳುವ ಆಟೋಗಳನ್ನು ನಿರಾಕರಿಸಬೇಕು. ಯಾವುದೇ ಪ್ರಯಾಣಕ್ಕೂ ಸರಿಯಾದ ರಶೀದಿಯನ್ನು ಕೇಳುವುದು ನಿಮ್ಮ ಹಕ್ಕು. ಅಲ್ಲದೆ, ಅನ್ಯಾಯವಾದ ಶುಲ್ಕ ವಸೂಲಿ ಅಥವಾ ಮೀಟರ್ ಬಳಕೆ ನಿರಾಕರಣೆಯಂತಹ ಘಟನೆಗಳನ್ನು ನೀವು ಸೇವಾ ಸಿಂಧು ಪೋರ್ಟಲ್ ಅಥವಾ ಸಾರ್ವಜನಿಕ ಕುಂದುಕೊರತೆ ಪೋರ್ಟಲ್ಗಳ ಮೂಲಕ ಅಧಿಕೃತವಾಗಿ ವರದಿ ಮಾಡಬಹುದು. ಹೆಚ್ಚುವರಿ ದರ ಒಪ್ಪಿಕೊಳ್ಳುವುದು ಶೋಷಣೆಗೆ ಪ್ರೋತ್ಸಾಹ ನೀಡುವಂತಾಗುತ್ತದೆ; ಹಾಗಾಗಿ, ಎಲ್ಲಿ ಅಗತ್ಯವೋ ಅಲ್ಲಿಯೇ ದಟ್ಟ ಮನವಿಯೊಂದಿಗೆ ನಿಮ್ಮ ಹಕ್ಕುಗಳನ್ನು ಸ್ಥಿರವಾಗಿ ಪ್ರಯೋಗಿಸಬೇಕು.
ರಾಮಲಿಂಗಾ ರೆಡ್ಡಿಯವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ: "ನಿಮ್ಮ ಧೈರ್ಯ ಮತ್ತು ಸ್ಪಷ್ಟತೆ ಈ ಶೋಷಣೆಗೆ ವಿರಾಮ ನೀಡಬಹುದು. ನಿಯಮ ಉಲ್ಲಂಘನೆ ಕಂಡುಬಂದರೆ ತಕ್ಷಣ ದೂರು ನೀಡಿ. ಸರ್ಕಾರ ನೀವು ಸುರಕ್ಷಿತವಾಗಿ ಮತ್ತು ನ್ಯಾಯೋಚಿತವಾಗಿ ಪ್ರಯಾಣಿಸಬಹುದಾದ ಪರಿಸರವನ್ನು ರೂಪಿಸುತ್ತಿದೆ."
More From GoodReturns

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications