ದೂರ ದೂರದ ಊರುಗಳಿಂದ ಅದೆಷ್ಟೋ ಮಂದಿ ಜೀವನ ಕಟ್ಟಿಕೊಳ್ಳೋಕೆ ಬರುತ್ತಾರೆ. ಅದರಲ್ಲೂ ಮಂಗಳೂರಿನಿಂದ ಬೆಂಗಳೂರಿಗೆ ಬಹಳಷ್ಟು ಮಂದಿ ಬರುತ್ತಾರೆ. ಅದೆಷ್ಟೋ ಮಂದಿ ಈಗಾಗಲೇ ಬೆಂಗಳೂರಿನಲ್ಲಿ ನೆಲೆಸಿ, ಸ್ವಂತ ಮನೆ, ಸ್ವಂತ ವ್ಯವಹಾರವನ್ನೂ ಸಹ ಶುರು ಮಾಡಿಕೊಂಡಿದ್ದಾರೆ. ಆದರೆ ಇದೀಗ ಮಂಗಳೂರಿನಿಂದ ಬೆಂಗಳೂರು (Mangaluru-Bengaluru) ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ. ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು (KSRTC Mangaluru Section) ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ಸಂಚರಿಸುವ ಪ್ರೀಮಿಯಂ ಬಸ್ಗಳ ಟಿಕೆಟ್ ದರವನ್ನು ಕಡಿತಗೊಳಿಸಿದೆ.

ಹೌದು, ಇದೀಗ ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ಸಂಚಾರ ಮಾಡುವ ಪ್ರೀಮಿಯಂ ಬಸ್ಗಳ ಟಿಕೆಟ್ ದರಗಳನ್ನು ಸೋಮವಾರದಿಂದ ಕಡಿತಗೊಳಿಸಿದೆ. ಜನವರಿ-ಮಾರ್ಚ್ ಆಫ್-ಸೀಸನ್ನಲ್ಲಿ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಕೆಎಸ್ಆರ್ಟಿಸಿ ಈ ದರ ಕಡಿತದ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿಯ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಸಾರ್ವಜನಿಕರು ಈ ಕಡಿಮೆ ದರದ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹೇಗಿದೆ ಹೊಸ ದರ?
ದರ ಕಡಿತಗೊಂಡ ಪ್ರೀಮಿಯಂ ಎಸಿ ಬಸ್ಗಳ ವಿವರ ಹೀಗಿದೆ:
ಅಂಬಾರಿ ಉತ್ಸವ ಮಲ್ಟಿ-ಆಕ್ಸಲ್ ಸ್ಲೀಪರ್ ಕೋಚ್ಗಳಿಗೆ ಕುಂದಾಪುರ-ಬೆಂಗಳೂರು ಮಾರ್ಗದ ಬಸ್ ₹1,510, ಉಡುಪಿಗೆ ₹1,460 ಮತ್ತು ಮಂಗಳೂರಿಗೆ ₹1,350 ದರ ನಿಗದಿಪಡಿಸಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ-ಆಕ್ಸಲ್ ಸ್ಲೀಪರ್ ಸೇವೆಗಳು ಇದೇ ಮಾರ್ಗಗಳಲ್ಲಿ ಕ್ರಮವಾಗಿ ₹1,350, ₹1,300 ಮತ್ತು ₹1,200ಕ್ಕೆ ಬುಕ್ ಮಾಡಬಹುದು. ಸಾಮಾನ್ಯವಾಗಿ ಪೀಕ್ ಸೀಸನ್ಗಳಲ್ಲಿ (ಏಪ್ರಿಲ್-ಜೂನ್, ಅಕ್ಟೋಬರ್-ಡಿಸೆಂಬರ್) ದರ 10-15% ಹೆಚ್ಚಾಗಿರುತ್ತದೆ, ಅದರಲ್ಲೂ ವಾರಾಂತ್ಯದಲ್ಲಿ ಸಾಮಾನ್ಯ ದರಕ್ಕಿಂತಲೂ ಹೆಚ್ಚಿರುತ್ತದೆ. ಆದ್ರೆ ಇದೀಗ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಬಂಪರ್ ಸುದ್ದಿ ಕೊಟ್ಟಿದೆ.
ಮಲ್ಟಿ-ಆಕ್ಸಲ್ 2 ಎಸಿ ಕೋಚ್ಗಳಿಗೆ ಕುಂದಾಪುರ-ಬೆಂಗಳೂರು ಮಾರ್ಗದಲ್ಲಿ ₹1,310, ಉಡುಪಿಗೆ ₹1,250 ಮತ್ತು ಮಂಗಳೂರಿಗೆ ₹1,150 ದರ ವಿಧಿಸಲಾಗುವುದು ಎಂದು ವರದಿಯಾಗಿದೆ. ಹಳೆಯ ಮಲ್ಟಿ-ಆಕ್ಸಲ್ ಬಸ್ಗಳ ದರಗಳು ಈ ಮಾರ್ಗಗಳಲ್ಲಿ ಕ್ರಮವಾಗಿ ₹1,110, ₹1,060 ಮತ್ತು ₹1,000ಕ್ಕೆ ಇಳಿಕೆ ಕಂಡಿದೆ.
ಹವಾನಿಯಂತ್ರಿತವಲ್ಲದ ವಿಭಾಗದಲ್ಲಿಯೂ ದರ ಕಡಿತವನ್ನು ಘೋಷಣೆ ಮಾಡಲಾಗಿದೆ. ನಾನ್-ಎಸಿ ಸ್ಲೀಪರ್ ಕೋಚ್ಗಳ ದರಗಳು ಈ ಮಾರ್ಗಗಳಲ್ಲಿ ಕ್ರಮವಾಗಿ ₹1,050, ₹1,000 ಮತ್ತು ₹900ಕ್ಕೆ ಇಳಿಕೆ ಕಂಡಿದೆ. ಪಲ್ಲಕ್ಕಿ ನಾನ್-ಎಸಿ ಸೇವೆಗಳ ಶುಲ್ಕವು ₹1,100, ₹1,060 ಮತ್ತು ₹950ಕ್ಕೆ ಇಳಿಕೆಯಾಗಿದ್ದರೆ, ರಾಜಹಂಸ ನಾನ್-ಎಸಿ ಆಸನ ಸೇವೆಗಳ ದರಗಳು ₹750, ₹700 ಮತ್ತು ₹650ಕ್ಕೆ ಇಳಿಕೆ ಕಂಡಿದೆ.
ವೀಕೆಂಡ್ ಬರುತ್ತಿದ್ದಂತೆ, ಯಾವುದಾದರೂ ಹಬ್ಬ ಬಂದ್ರೆ ಸಾಕು ಬಸ್ಗಳಿಗೆ ಡಿಮ್ಯಾಂಡೊಪ್ಪೋ ಡಿಮ್ಯಾಂಡ್. ಆದ್ರೆ ಇನ್ನೇನು ಎಲ್ಲಾ ಸೀಸನ್ಗಳು ಮುಗಿಯುತ್ತಾ ಬರುತ್ತಿದ್ದಂತೆ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಆ ಒಂದು ನಿರ್ಧಾರದಿಂದ, ತುರ್ತು ಊರಿಗೆ ಹೋಗೋರಿಗೆ, ರೈಲಿಗಿಂತ ಬಸ್ ಸೇವೆ ಬಯಸೋರಿಗೆ ಈ ಸೇವೆ ತುಂಬಾನೇ ಅನುಕೂಲವಾಗಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications