ಬೆಂಗಳೂರು-ವಿಜಯಪುರಕ್ಕೆ ವೇಗದ ರೈಲು ಸಂಪರ್ಕ..ನೈಋತ್ಯ ರೇಲ್ವೇ ಅಧಿಕಾರಿಗಳಿಗೆ ಎಂ.ಬಿ ಪಾಟೀಲ್ ಮನವಿ..! ಅಧಿಕಾರಿಗಳು ಹೇಳಿದ್ದೇನು?

ರಾಜಧಾನಿ ಬೆಂಗಳೂರಿನಿಂದ ವಿಜಯಪುರ ಬಹುದೂರದಲ್ಲಿದೆ. ಬೆಂಗಳೂರಿನಿಂದ ತಮ್ಮೂರಿಗೆ ಹೋಗಬೇಕು ಅಂದ್ರೆ, ವಿಜಯಪುರ ಜನರು ಏನಿಲ್ಲವೆಂದರೂ ಸುಮಾರು 14 ರಿಂದ 15 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಈ ಬಹುದೂರದ ಪ್ರಯಾಣವನ್ನು ಕೊಂಚ ಮಟ್ಟಿಗಾದರೂ ತಗ್ಗಿಸಬೇಕೆಂದು, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಶ್ರೀ ಎಂ.ಬಿ. ಪಾಟೀಲ್ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ನೈಋತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಹಲವಾರು ಹೊಸ ಮಾರ್ಗಗಳನ್ನು ಚರ್ಚಿಸಿದ್ದಾರೆ.

ಬೆಂಗಳೂರು-ವಿಜಯಪುರಕ್ಕೆ ವೇಗದ ರೈಲು ಸಂಪರ್ಕಕ್ಕೆ ಎಂಬಿಪಿ ಮನವಿ..!

ಇನ್ನು ಆಗಲೇ ಹೇಳಿದಂತೆ ಬೆಂಗಳೂರಿನಿಂದ ವಿಜಯಪುರದವರೆಗೆ ಸುಮಾರು 15 ರಿಂದ 15 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಈ ದೂರದ ಪ್ರಯಾಣ ಉತ್ತರ ಕರ್ನಾಟಕ ಭಾಗದ ಜನರಿಗೆ ಅತಿದೊಡ್ಡ ಸಮಸ್ಯೆಯಾಗಿದೆ. ಹೆಚ್ಚಿನವರು ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುವುದೇ ಆಯ್ಕೆಮಾಡಿಕೊಳ್ಳುತ್ತಾರೆ, ಏಕೆಂದರೆ ರೈಲುಗಳು ನಿರಂತರ ತಡವಾಗಿ ಗಮ್ಯಸ್ಥಾನ ತಲುಪುತ್ತವೆ. ಈ ತಡದ ಪ್ರಮುಖ ಕಾರಣವೆಂದರೆ, ರೈಲುಗಳು ಮಧ್ಯದಲ್ಲಿಯೇ ಇಂಜಿನ್ ಬದಲಾಯಿಸುವ ಅವಶ್ಯಕತೆ.

ಹುಬ್ಬಳ್ಳಿ ಮತ್ತು ಗದಗ ಎಂಬ ಎರಡು ಪ್ರಮುಖ ಸ್ಥಳಗಳಲ್ಲಿ ಇಂಜಿನ್ ಬದಲಾಯಿಸುವ ಪ್ರಕ್ರಿಯೆಯಿಂದಾಗಿ ಪ್ರಯಾಣದ ಸಮಯ ಹೆಚ್ಚಾಗುತ್ತದೆ. ಈ ದೋಷಪೂರಿತ ವ್ಯವಸ್ಥೆಯನ್ನು ಸರಿಪಡಿಸಲು ಸಚಿವ ಪಾಟೀಲ್ ಪ್ರಮುಖ ಸಲಹೆಗಳನ್ನು ಮುಂದಿಟ್ಟು, ರೈಲ್ವೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಹೊಸ ಮಾರ್ಗದ ಯೋಚನೆ:

ಸಭೆಯಲ್ಲಿ ಶ್ರೀ ಪಾಟೀಲ್ ಅವರು, ಬೆಂಗಳೂರಿನಿಂದ ವಿಜಯಪುರದತ್ತ ಸಾಗುವ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣ ಹಾಗೂ ಗದಗ ಬೈಪಾಸ್ ಮಾರ್ಗವನ್ನು ಬಳಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಈ ಮಾರ್ಗಗಳಿಂದ ರೈಲುಗಳು ಮಧ್ಯದ ಸ್ಟೇಷನ್‌ಗಳಲ್ಲಿ ಇಂಜಿನ್ ಬದಲಾಯಿಸುವ ಅಗತ್ಯವಿಲ್ಲದೆ ನೇರವಾಗಿ ಮುಂದುವರಿಯಬಹುದು. ಇದರಿಂದ ಕನಿಷ್ಠ ಎರಡು ಗಂಟೆಗಳ ಪ್ರಯಾಣ ಸಮಯ ಉಳಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಮತ್ತೊಂದು ಪ್ರಮುಖ ವಿಷಯವಾಗಿ ಗದಗ-ವಿಜಯಪುರ ಹಳಿ ದ್ವಿಗುಣಗೊಳಿಸುವ ಯೋಜನೆಯ ಕುರಿತು ಚರ್ಚೆ ನಡೆಯಿತು. ಈ ಯೋಜನೆ ಪೂರ್ಣಗೊಂಡ ಬಳಿಕ, ಉತ್ತಮ ವೇಗದ ಮತ್ತು ಆಧುನಿಕ ವೈಶಿಷ್ಟ್ಯಗಳನ್ನೊಳಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ಸಾಧ್ಯವಾಗಲಿದೆ. ಇದರಿಂದ ವಿಜಯಪುರ ಜಿಲ್ಲೆಯ ರೈಲು ಸಂಪರ್ಕ ಮತ್ತಷ್ಟು ಗತಿಯುತವಾಗಿ ಮಾರ್ಪಡಲಿದೆ.

ಬಾಗಲಕೋಟೆ ಜಿಲ್ಲೆಗೆ ಕೂಡ ಲಾಭವಾಗಲಿದ್ಯಾ?

ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗದಲ್ಲಿ ಕೆಲವು ರೈಲುಗಳನ್ನು ತಿರುಗಿಸಿ ಓಡಿಸುವ ಬಗ್ಗೆ ಸಚಿವರು ಪ್ರಸ್ತಾಪಿಸಿರುವ ಸಲಹೆ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರಯಾಣಿಕರಿಗೆ ಅಪಾರ ಲಾಭ ನೀಡಲಿದೆ. ಈ ಮಾರ್ಗದಲ್ಲಿ ರೈಲುಗಳು ಓಡಿದರೆ, ಈ ಭಾಗದ ಜನರು ಕೂಡ ಬೇಗನೇ ಬೆಂಗಳೂರಿಗೆ ಅಥವಾ ಬೇರೆಯಲ್ಲಿಯೂ ಸುಲಭವಾಗಿ ತಲುಪಬಹುದಾದ ಅವಕಾಶ ದೊರಕುತ್ತದೆ.

ರೈಲ್ವೆ ಇಲಾಖೆಯ ಸ್ಪಂದನೆ:

ಸಚಿವ ಪಾಟೀಲ್ ಅವರ ಈ ಸಲಹೆಗೆ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ, ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ. ಇದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ನಡುವೆ ಉತ್ತಮ ಸಂವಹನದ ಸಂಕೇತವೂ ಹೌದು.

ಈ ಎಲ್ಲಾ ಕ್ರಮಗಳು ಯಶಸ್ವಿಯಾಗಿ ಜಾರಿಗೆ ಬಂದರೆ, ಉತ್ತರ ಕರ್ನಾಟಕದ ಜನರಿಗೆ ಹೆಚ್ಚು ವೇಗದ, ಸಮರ್ಥ ಮತ್ತು ಸ್ಮಾರ್ಟ್ ಸಂಪರ್ಕ ವ್ಯವಸ್ಥೆ ದೊರೆಯಲಿದೆ. ಬೆಂಗಳೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ಇತರ ಪಟ್ಟಣಗಳ ಮಧ್ಯೆ ರೈಲು ಸಂಪರ್ಕ ಹೆಚ್ಚು ವೇಗವಾಗಿ ಆಗಲಿದ್ದು, ಆರ್ಥಿಕ ಪ್ರಗತಿಯ ಹೊಸ ಅಲೆ ಆರಂಭವಾಗಬಹುದು.

ಈ ಸಭೆಯಲ್ಲಿ ನಡೆದ ಚರ್ಚೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುವದು ನಿಶ್ಚಿತವಾದರೆ, ಉತ್ತರ ಕರ್ನಾಟಕದ ಜನತೆಗೆ ಇದೊಂದು ಹೊಸ ಬಾಗಿಲು ತೆರೆಯುವಂತಾಗಲಿದೆ. ತ್ವರಿತ ರೈಲು ಸಂಚಾರದಿಂದ ರಾಜ್ಯದ ಒಳಭಾಗ ಮತ್ತು ರಾಜಧಾನಿಯ ನಡುವಿನ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ. ವಿಶೇಷವಾಗಿ ವಿಜಯಪುರ, ಬಾಗಲಕೋಟೆ ಹಾಗೂ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರಿಗೆ ಇದು ಉಳಿತಾಯದ ಪ್ರಯಾಣ ಮಾರ್ಗವಾಗಿ ಪರಿಣಮಿಸಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಹಾರಾಟದ ಕನಸು ಈಗ ಉತ್ತರ ಕರ್ನಾಟಕದ ಮೇಲೆ ಮೂಡುತ್ತಿರುವುದು ಉತ್ಸಾಹವರ್ಧಕ ಬೆಳವಣಿಗೆಯಾಗಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ಶೀಘ್ರವೇ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತದೆ ಎಂಬ ನಿರೀಕ್ಷೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+