ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಡಿಜಿಟಲ್ ಮಾಧ್ಯಮಗಳಲ್ಲಿ ಅಸಭ್ಯತೆ, ಅಶ್ಲೀಲತೆ ಹಾಗೂ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುವ ವಿಷಯಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ 25ಕ್ಕೂ ಹೆಚ್ಚು ಓಟಿಟಿ (OTT) ಪ್ಲಾಟ್ಫಾರ್ಮ್ಗಳ ಮೇಲೆ ನಿಷೇಧ ವಿಧಿಸುವ ಮೂಲಕ, ಇದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಭಾವವನ್ನು ಗಮನಿಸಿದ ಗಂಭೀರ ನಿರ್ಧಾರವೆಂದು ಪರಿಗಣಿಸಲಾಗಿದೆ.

ಉಲ್ಲು, ALTT (ಆಲ್ಟ್ ಬಾಲಾಜಿ), ಡೆಸಿಫ್ಲಿಕ್ಸ್ ಮೊದಲಾದ ಜನಪ್ರಿಯ OTT ಆ್ಯಪ್ಗಳು ಸಹ ಈ ಕ್ರಮದೊಳಗೆ ಬಿದ್ದಿದ್ದು, ಇವುಗಳಲ್ಲಿ ಪ್ರಸಾರವಾಗುತ್ತಿದ್ದ ವಿಷಯಗಳು ಯುವಜನತೆಗೆ ಹಾನಿಕಾರಕರಾಗಿದ್ದು, ಅಸಭ್ಯತೆಯ ಮಟ್ಟವನ್ನು ಮೀರಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಪ್ಲಾಟ್ಫಾರ್ಮ್ಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67 ಹಾಗೂ 67A, ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 294, ಮತ್ತು ಮಹಿಳೆಯರ ಅಸಭ್ಯ ಪ್ರತಿನಿಧನೆ (ನಿಷೇಧ) ಕಾಯ್ದೆ 1986ರ ಸೆಕ್ಷನ್ 4 ಸೇರಿದಂತೆ ಹಲವು ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ದೃಢಪಟ್ಟಿದೆ.
ನಿಷೇಧ ಪಟ್ಟಿಯಲ್ಲಿ ಬಿಗ್ ಶಾಟ್ಸ್, ಬೂಮೆಕ್ಸ್, ನವರಸ ಲೈಟ್, ಕಂಗನ್, ಬುಲ್, ಹಾಟ್ ಎಕ್ಸ್ ವಿಐಪಿ, ಟ್ರಿಫ್ಲಿಕ್ಸ್, ಲುಕ್ ಎಂಟರ್ಟೈನ್ಮೆಂಟ್, ಹಿಟ್ಪ್ರೈಮ್, ಶೂಕ್ಸ್, ಸೋಲ್ ಟಾಕೀಸ್, ಜಲ್ವಾ, ವಾವ್ ಎಂಟರ್ಟೈನ್ಮೆಂಟ್, ಮೂಡ್ಎಕ್ಸ್, ಫೂಗಿ, ಮೊಜ್ಫ್ಲಿಕ್ಸ್ ಮುಂತಾದ 25 OTT ಆ್ಯಪ್ಗಳಿವೆ.
ಈ ಆ್ಯಪ್ಗಳಲ್ಲಿ 'ಬಾಲಿವುಡ್ ಶೈಲಿ' ಹೆಸರಿನಲ್ಲಿ ಅಸಭ್ಯ ದೃಶ್ಯಗಳ ಹರಿವು ನಡೆಯುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಪ್ರಾಪ್ತರು ಸೇರಿದಂತೆ ಹಲವರು ನೇರವಾಗಿ ಅವುಗಳನ್ನು ನೋಡುವ ಸ್ಥಿತಿಗೆ ತಲುಪುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ಇದರ ಮೂಲಕ ತಂತ್ರಜ್ಞಾನ ಬಳಕೆಯ ಹೆಸರಿನಲ್ಲಿ ಅಸಭ್ಯತೆಗೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸರ್ಕಾರ ಈOTT ಸೇವೆಗಳ ಪ್ರವೇಶವನ್ನು ತಡೆಗಟ್ಟಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISPs) ತುರ್ತು ಸೂಚನೆ ನೀಡಿದ್ದು, ಸಾರ್ವಜನಿಕರಿಗೆ ಈ ಪ್ಲಾಟ್ಫಾರ್ಮ್ಗಳು ಲಭ್ಯವಿರುವುದನ್ನು ತಕ್ಷಣ ನಿಲ್ಲಿಸಲು ಸೂಚಿಸಲಾಗಿದೆ. ದೂರಸಂಪರ್ಕ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು, ಈ ಕ್ರಮವನ್ನು ಶೀಘ್ರ ಜಾರಿಗೆ ತರಲು ವಿನಂತಿಸಲಾಗಿದೆ.
ಇತ್ತ ಸುಪ್ರೀಂ ಕೋರ್ಟ್ ಕೂಡ OTT ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯತೆ ಹೆಚ್ಚುತ್ತಿರುವುದರ ಕುರಿತು ತೀವ್ರ ಚಿಂತನೆ ವ್ಯಕ್ತಪಡಿಸಿ, "ಇದು ಕೇವಲ ನ್ಯಾಯಾಂಗದ ವಿಚಾರವಲ್ಲ - ಸರ್ಕಾರ ಕೂಡ ಪ್ರಭಾವಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಸಲಹೆ ನೀಡಿದ ಬಳಿಕ ಈ ನಿರ್ಧಾರ ತಕ್ಷಣ ಜಾರಿಗೆ ಬಂತು.
ಈOTT ನಿಷೇಧ ಕ್ರಮವು ಯುವಜನತೆಗೆ ನಿಗದಿತ ಹಾಗೂ ಶಿಷ್ಟತೆಯ ಮಿತಿಯನ್ನು ಕಲಿಸಲು, ಸಂಸ್ಕೃತಿಯ ರಕ್ಷಣೆಗೆ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಶಿಸ್ತು ಕಾಪಾಡಲು ಸರ್ಕಾರದ ಬದ್ಧತೆಯೆಂದು ವ್ಯಾಖ್ಯಾನಿಸಬಹುದು. ಆದರೆ, ಈOTT ಪ್ಲಾಟ್ಫಾರ್ಮ್ಗಳಲ್ಲಿ ಕೆಲಸಮಾಡುವ ಸಾವಿರಾರು ಕಲಾವಿದರು, ತಂತ್ರಜ್ಞರು, ನಿರ್ಮಾಪಕರ ಭವಿಷ್ಯದ ಬಗ್ಗೆ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶಬ್ದಿಸು ತೊಡಗಿವೆ.
ಅಂತಿಮವಾಗಿ, OTT ಮಾಧ್ಯಮದ ಮುಕ್ತತೆಯು ಅಸಭ್ಯತೆಗೆ ನುಗ್ಗುವ ದ್ವಾರವನ್ನಾಗಿ ಪರಿವರ್ತನೆಯಾಗದಂತೆ ನಿರ್ವಹಿಸುವ ಜವಾಬ್ದಾರಿ ಸರ್ಕಾರದೊಂದಿಗೆ ಸಾಮಾಜಿಕ ಜವಾಬ್ದಾರಿಯಿಂದ ಕೂಡಿದ ಮೌಲ್ಯಾಧಾರಿತ ಸಮಾಜದ ಮೇಲೂ ಇದೆ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗುತ್ತಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications