ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ದೇಶದ ಯುವಜನತೆಗೆ ಉದ್ಯೋಗ, ಕೌಶಲ್ಯ ಹಾಗೂ ಆರ್ಥಿಕ ಭದ್ರತೆಯ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಎಲ್ಐ (ಉದ್ಯೋಗ ಸಂಬಂಧಿತ ಪ್ರೋತ್ಸಾಹಕ) ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯು ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

2 ಲಕ್ಷ ಕೋಟಿ ರೂ. ಬಜೆಟ್ ಅನುದಾನ:
ಈ ಯೋಜನೆಯು ಪ್ರಧಾನ ಮಂತ್ರಿಯವರ ಐದು ಉದ್ಯೋಗ ಪ್ಯಾಕೇಜ್ಗಳಲ್ಲಿ ಒಂದಾಗಿದ್ದು, 2024-25ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಯಿತು. ಯೋಜನೆಯ ಅನುದಾನ ಮೊತ್ತವು ₹2 ಲಕ್ಷ ಕೋಟಿ ರೂಪಾಯಿಯಾಗಿದ್ದು, ಇದರಿಂದ ದೇಶದಾದ್ಯಾಂತ 4.1 ಕೋಟಿ ಯುವಕರಿಗೆ ಉದ್ಯೋಗ, ತರಬೇತಿ ಮತ್ತು ಆರ್ಥಿಕ ಚಟುವಟಿಕೆಗಳಿಗೆ ನೇರವಾಗಿ ಅವಕಾಶ ಸಿಗಲಿದೆ. ಈ ಯೋಜನೆಯು 2025 ಆಗಸ್ಟ್ 1 ರಿಂದ ಜಾರಿಯಾಗಲಿದ್ದು, 2027 ಜುಲೈ 31ರವರೆಗೆ ಅಳವಡಿಕೆಯಾಗಲಿದೆ.
ಯೋಜನೆಯು ಹೊಂದಿರುವ ಎರಡು ವಿಭಾಗಗಳು:
ಇಎಲ್ಐ ಯೋಜನೆಯು ಎರಡು ಮುಖ್ಯ ಭಾಗಗಳನ್ನು ಹೊಂದಿದೆ. ಮೊದಲನೆಯದಾಗಿ, ಹೊಸ ಉದ್ಯೋಗ ಅರಸುವ ಯುವಕರಿಗೆ ನೇರ ಹಣಕಾಸು ಪ್ರೋತ್ಸಾಹ ನೀಡಲಾಗುತ್ತದೆ. ಎರಡನೆಯದಾಗಿ, ಹೊಸ ಉದ್ಯೋಗಿಗಳನ್ನು ನೇಮಿಸುವ ಕಂಪನಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದು ಉದ್ಯೋಗದಾತರು ಹೊಸ ಜನರನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ನಿರಂತರ ಉದ್ಯೋಗದ ಉಳಿವಿಗೆ ಸಹಾಯ ಮಾಡುತ್ತದೆ.
ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಆರ್ಥಿಕ ನೆರವು:
ಯುವಕರು EPFO ನೋಂದಾಯಿತ ಸಂಸ್ಥೆಯಲ್ಲಿ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿದ್ದರೆ, ಅವರಿಗೆ ₹15,000 ರಷ್ಟು ಹಣಕಾಸು ನೆರವು ಸಿಗುತ್ತದೆ. ಇದರಲ್ಲಿ ₹7,500 ಅನ್ನು 6 ತಿಂಗಳ ಸೇವೆಯ ನಂತರ ಮತ್ತು ಉಳಿದ ₹7,500 ಅನ್ನು ಮತ್ತಷ್ಟು 6 ತಿಂಗಳ ಸೇವೆಯ ಬಳಿಕ ನೀಡಲಾಗುತ್ತದೆ. ಈ ಮೊತ್ತವನ್ನು ಪಡೆಯುವ ಮೊದಲು ಅಭ್ಯರ್ಥಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಆರ್ಥಿಕ ಶಿಕ್ಷಣ ಕೋರ್ಸ್ನ್ನು ಪೂರೈಸಬೇಕಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ UAN (ಯುನಿವರ್ಸಲ್ ಅಕೌಂಟ್ ನಂಬರ್ನ್ನು) ಸಕ್ರಿಯಗೊಳಿಸಿರುವುದು ಮತ್ತು ಬ್ಯಾಂಕ್ ಖಾತೆ DBTಗೆ ತಯಾರಾಗಿರುವುದು ಅಗತ್ಯ.
ಉದ್ಯೋಗದಾತರಿಗೆ ಮಾಸಿಕ ಧನ ಸಹಾಯ:
ಹೊಸ ಉದ್ಯೋಗಿಗಳನ್ನು ನೇಮಿಸಿ ಕನಿಷ್ಠ 6 ತಿಂಗಳ ಕಾಲ ಕೆಲಸದಲ್ಲಿ ಇರಿಸುವ ಉದ್ಯೋಗದಾತರಿಗೆ ಮಾಸಿಕ ಪ್ರೋತ್ಸಾಹ ಧನ ಸಿಗಲಿದೆ. ಕಂಪನಿಯು ನೀಡುತ್ತಿರುವ ಸಂಬಳದ ಆಧಾರದಲ್ಲಿ ಈ ಧನ ಸಹಾಯದ ಮೊತ್ತ ನಿಗದಿಯಾಗುತ್ತದೆ. ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಈ ಲಾಭ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ, ಇತರೆ ವಲಯಗಳಿಗೆ ಇದು ಎರಡು ವರ್ಷಗಳವರೆಗೆ ಸೀಮಿತವಾಗಿರುತ್ತದೆ.
ಅರ್ಜಿಯ ವಿಧಾನ ಮತ್ತು ಅಗತ್ಯತೆಗಳು:
ಈ ಯೋಜನೆಯ ಲಾಭ ಪಡೆಯಲು, ಉದ್ಯೋಗಿ EPFO ನೋಂದಾಯಿತ ಘಟಕದಲ್ಲಿ ಕೆಲಸ ಮಾಡಬೇಕು. ಆಧಾರ್ ಲಿಂಕ್ ಮಾಡಿದ UAN ಸಂಖ್ಯೆಯು ಸಕ್ರಿಯವಾಗಿರಬೇಕು. ಉದ್ಯೋಗದಾತನು EPF ಸಂಬಂಧಿತ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ನಿಯಮಿತ ರಿಟರ್ನ್ಗಳನ್ನು ಸಲ್ಲಿಸಬೇಕು. ಉದ್ಯೋಗಿಯ ದೃಢೀಕರಣವನ್ನು 6 ತಿಂಗಳ ಸೇವೆಯ ನಂತರ ಸರ್ಕಾರಕ್ಕೆ ಸಲ್ಲಿಸಿದ ನಂತರ, ಪ್ರೋತ್ಸಾಹ ಧನವನ್ನು ಉದ್ಯೋಗದಾತನ ಪ್ಯಾನ್ ಲಿಂಕ್ ಮಾಡಲಾದ ವ್ಯವಹಾರ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತದೆ.
ಭಾರತದ ಉದ್ಯೋಗ ಹಾದಿಗೆ ಹೊಸ ದಿಕ್ಕು:
ಈ ಯೋಜನೆಯು ಕೇವಲ ಉದ್ಯೋಗವನ್ನೇ ನೀಡುವುದಿಲ್ಲ, ಇದು ಯುವಕರಿಗೆ ಆರ್ಥಿಕ ಸ್ಥಿರತೆ, ಉದ್ಯೋಗ ಭದ್ರತೆ ಮತ್ತು ಸುದೀರ್ಘ ಸಮಯದ ವೃತ್ತಿಪರ ಬೆಳವಣಿಗೆಗೆ ಸಹಾಯಮಾಡುವ ಯೋಜನೆ. ಇದರ ಮೂಲಕ ಉದ್ಯೋಗದಾತರಿಗೆ ಖರ್ಚು ಕಡಿತಗೊಳಿಸುವ ವ್ಯವಸ್ಥೆ ದೊರೆಯುತ್ತಿದ್ದು, ಉದ್ಯೋಗ ಸೃಷ್ಟಿ ಪ್ರಕ್ರಿಯೆ ವೇಗಗೊಳ್ಳಲಿದೆ. ಇಎಲ್ಐ ಯೋಜನೆಯು ಯುವಶಕ್ತಿ ಸಂಪತ್ತನ್ನು ಬದಲಾಗುವ ಭಾರತದ ಅಭಿವೃದ್ಧಿಗೆ ಸದ್ಬಳಕೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications