ರಿಲಯನ್ಸ್ ರಿಟೇಲ್ನ ಜಿಯೋಮಾರ್ಟ್ ಜನಪ್ರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದಲ್ಲದೆ, ಜಿಯೋಮಾರ್ಟ್ ತನ್ನ ಮುಂಬರುವ ಪೆಸ್ಟಿವ್ ಸೀಸನ್ ಪ್ರಚಾರವನ್ನು "ಜಿಯೋ ಉತ್ಸವ್: ಸೆಲೆಬ್ರೇಷನ್ ಆಫ್ ಇಂಡಿಯಾ" (ಜಿಯೋ ಉತ್ಸವ- ಭಾರತದ ಸಂಭ್ರಮ) ಎಂದು ಮರುಬ್ರಾಂಡ್ ಮಾಡಿದೆ.
ಇದನ್ನು ಅಕ್ಟೋಬರ್ 8, 2023 ರಂದು ಪ್ರಾರಂಭಿಸಲಾಗುವುದು. ಜಿಯೋಉತ್ಸವ್ ಅಭಿಯಾನವು ರಾಷ್ಟ್ರದಲ್ಲೇ ಆಚರಣೆ ಮಾಡುವ ಹಬ್ಬ ಎಂಬ ಕಲ್ಪನೆಯನ್ನು ಹೊಂದಿದೆ. ಹೊಸ ಉತ್ಸಾಹದಲ್ಲಿ ತನ್ನ ಪ್ರೀತಿಪಾತ್ರರೊಂದಿಗೆ ಸಂತೋಷದೊಂದಿಗೆ ಹಬ್ಬವನ್ನು ಆಚರಿಸುವ ಬಗ್ಗೆ ಈ ಜಾಹೀರಾತಿನಲ್ಲಿ ಮಹೇಂದ್ರ ಸಿಂಗ್ ಧೋನಿ ವಿವರಿಸಿದ್ದಾರೆ.

ಇದು 45 ಸೆಕೆಂಡುಗಳ ಜಾಹೀರಾತಾಗಿದ್ದು, ಜಾಹೀರಾತಿನ ಉದ್ದಕ್ಕೂ ಎಂಎಸ್ ಧೋನಿ ಕಾಣಿಸಿಕೊಳ್ಳುತ್ತಾರೆ. ಜಿಯೋಮಾರ್ಟ್ನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಬ್ಬದ ಗಿಫ್ಟ್ ಅನ್ನು ಖರೀದಿ ಮಾಡಲು ಹೇಳುತ್ತಾರೆ. ಹಿರಿಯರ ಆಶೀವಾರ್ದ ಪಡೆಯಿರಿ ಎಂದು ಜಾಹೀರಾತಿನಲ್ಲಿ ತಿಳಿಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, "ಮಹೇಂದ್ರ ಸಿಂಗ್ ಧೋನಿ ಅವರು ಜಿಯೋಮಾರ್ಟ್ನಂತೆಯೇ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಭರವಸೆಯನ್ನು ಒಳಗೊಂಡಿರುವ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿರುವ ಆದರ್ಶ ಆಯ್ಕೆಯಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ.
ಈ ಹಬ್ಬಗಳಲ್ಲಿ ಶಾಪಿಂಗ್ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರೀತಿಪಾತ್ರರ ಜೊತೆಗೆ ಜೀವನದ ವಿಶೇಷ ಕ್ಷಣಗಳನ್ನು ಆಚರಿಸುವುದರ ಭಾಗವಾಗಿದೆ ಎಂದು ಈ ಜಾಹೀರಾತಿನಲ್ಲಿ ಸಾರಲಾಗಿದೆ. ಪ್ರಾದೇಶಿಕ ಕುಶಲಕರ್ಮಿಗಳನ್ನು ಉತ್ತೇಜಿಸಲು ಜಿಯೋಮಾರ್ಟ್ ಯಾವಾಗಲೂ ಬದ್ಧವಾಗಿದೆ. ಪ್ರಸ್ತುತ 1000 ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಅವಕಾಶ ನೀಡಲಾಗಿದೆ. 1.5 ಲಕ್ಷ ಅನನ್ಯ ಉತ್ಪನ್ನಗಳನ್ನು ನೀಡುತ್ತಿದೆ ಎಂದು ವರದಿ ಹೇಳಿದೆ.
ಪ್ರಚಾರದ ಚಿತ್ರೀಕರಣದ ಸಮಯದಲ್ಲಿ, ವರಗಂಟಿ ಅವರು ಬಿಹಾರದ ಪ್ರಶಸ್ತಿ ವಿಜೇತ ಕುಶಲಕರ್ಮಿ ಅಂಬಿಕಾ ದೇವಿ ಅವರು ರಚಿಸಿದ ಮಧುಬನಿ ವರ್ಣಚಿತ್ರವನ್ನು ಧೋನಿಗೆ ಉಡುಗೊರೆಯಾಗಿ ನೀಡಿದರು. ಇದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಜಿಯೋಮಾರ್ಟ್ ಬದ್ಧವಾಗಿದೆ ಎಂಬುವುದರ ಪ್ರತೀಕವಾಗಿದೆ ಎಂದು ಸಿಇಒ ಹೇಳಿದ್ದಾರೆ. ಕುಶಲಕರ್ಮಿಗಳು ಮತ್ತು ಸಣ್ಣ-ಮಧ್ಯಮ-ಗಾತ್ರದ ವ್ಯವಹಾರ ನಡೆಸುವವರು ಈ ಜಿಯೋಮಾರ್ಟ್ನ ಅನುಕೂಲವನ್ನು ಪಡೆದುಕೊಳ್ಳಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications