ನವೆಂಬರ್ 1 ರಿಂದ ಹಲವು ನಿಯಮಗಳಲ್ಲಿ (November 1 Rules) ಹೊಸ ಬದಲಾವಣೆ ಬರಲಿದೆ. ಆಧಾರ್ಕಾರ್ಡ್, ಸೆಬಿ, ಮ್ಯೂಚುವಲ್ ಫಂಡ್, ಎಲ್ಪಿಜಿ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಹೊಸ ನಿಯಮ, ದರ ಪರಿಷ್ಕರಣೆ ಪರಿಣಾಮ ಬೀಳಲಿದೆ. ಈ ಮೂಲಕ ಮತ್ತೊಮ್ಮೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ. ಹಾಗಿದ್ರೆ ನವೆಂಬರ್ 1 ರಿಂದ ಬದಲಾಗುತ್ತಿರುವ ಆ 5 ನಿಯಮಗಳು ಏನೆಲ್ಲಾ ಎಂಬುದರ ಮಾಹಿತಿ ಇಲ್ಲಿದೆ ಓದಿ.

ಹೌದು, ನವೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಬ್ಯಾಂಕಿಂಗ್, ಡಿಜಿಟಲ್ ಪಾವತಿ, ಆಧಾರ್ ಅಪ್ಡೇಟ್, LPG ಹಾಗೂ ಮ್ಯೂಚುವಲ್ ಫಂಡ್ ಇನ್ವೆಸ್ಟ್ಮೆಂಟ್ ಮೇಲೆ ಪರಿಣಾಮ ಬೀರಲಿವೆ. ಇದೆಲ್ಲಾ ಅಗತ್ಯ ವಹಿವಾಟು ಆಗಿರುವ ಕಾರಣ ಪ್ರತಿಯೊಬ್ಬರು ನಿಯಮ ಬದಲಾವಣೆ ಬಗ್ಗೆ ತಿಳಿದುಕೊಳ್ಳಲೇಬೇಕು.
1. ಆಧಾರ್ಕಾರ್ಡ್ ಅಪ್ಡೇಟ್ ಮತ್ತಷ್ಟು ಸುಲಭ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆಯನ್ನು ಇದೀಗ ಮತ್ತಷ್ಟು ಸರಳವಾಗಿಸಿದೆ. ನವೆಂಬರ್ 1 ರಿಂದ, ಸಾರ್ವಜನಿಕರು ಯಾವುದೇ ದಾಖಲೆಗಳನ್ನು ನೀಡದೆ, ಕೇವಲ ಮೊಬೈಲ್ ನಂಬರ್ ಮೂಲಕ ಆನ್ಲೈನ್ನಲ್ಲೇ ಆಧಾರ್ ಅಪ್ಡೇಟ್ ಮಾಡಬಹುದು. ಕೇವಲ ಬಯೋಮೆಟ್ರಿಕ್ ಅಪ್ಡೇಟ್ಗಳಿಗೆ (ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್) ಮಾತ್ರ ಸೇವಾಕೇಂದ್ರಗಳಿಗೆ ಭೇಟಿ ನೀಡಬಹುದು.
2. ಎಸ್ಬಿಐ ಕ್ರೆಡಿಟ್ ಕಾರ್ಡ್ ಶುಲ್ಕ ಹೆಚ್ಚಳ:
ಅದೇ ರೀತಿ ನವೆಂಬರ್ 1ರಿಂದ ಎಸ್ಬಿಐ ಕಾರ್ಡ್ ಬಳಕೆದಾರರಿಗೆ ಶುಲ್ಕ ಪಾವತಿ ಹೆಚ್ಚಾಗಲಿದೆ. ಎಸ್ಬಿಐ ಗ್ರಾಹಕರು ಅದಕ್ಕಾಗಿ ಹೆಚ್ಚಿನ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅಸುರಕ್ಷಿತ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಶೇ 3.75ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ CRED, CheQ ಅಥವಾ Mobikwik ನಂತಹ ಥರ್ಡ್-ಪಾರ್ಟಿನಂತರ ಅಪ್ಲಿಕೇಶನ್ ಮೂಲಕ ಸ್ಕೂಲ್ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ಶೇ 1ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕು. ಆದರೆ, ಶಾಲೆಯ ಅಧಿಕೃತ ವೆಬ್ಸೈಟ್ ಅಥವಾ ಪಾಯಿಂಟ್-ಆಫ್-ಸೇಲ್ (POS) ವ್ಯವಸ್ಥೆಗಳ ಮೂಲಕ ಡೈರೆಕ್ಟ್ ಪೇಮೆಂಟ್ ಮಾಡಿದ್ರೆ ಈ ಶುಲ್ಕ ಅನ್ವಯಿಸುವುದಿಲ್ಲ. ₹1,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಲೆಟ್ ರೀಚಾರ್ಜ್ಗಳಿಗೆ ಸಹ ಶೇ 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ನವೆಂಬರ್ 1 ರಿಂದ ಮತ್ತಷ್ಟು ಹೊರೆ ಬೀಳಲಿದೆ.
3. ಗ್ಯಾಸ್ ಸಿಲಿಂಡರ್, ಸಿಎನ್ಜಿ ಮತ್ತು ಪಿಎನ್ಜಿ ಬೆಲೆ ಬದಲಾವಣೆ:
ಹಿಂದಿನ ಬೆಲೆಗಳಿಗೆ ಹೋಲಿಸಿದ್ರೆ, ಇತ್ತೀಚೆಗೆ ಸಿಲಿಂಡರ್ ಕಡಿಮೆ ಬೆಲೆಗೆ ಸಿಗುತ್ತಿದೆ. ಆದ್ರೆ ನವೆಂಬರ್ 1 ರಿಂದ ಎಲ್ಪಿಜಿ, ಸಿಎನ್ಜಿ ಮತ್ತು ಪಿಎನ್ಜಿ ಬೆಲೆ ಮತ್ತೆ ಪರಿಷ್ಕರಿಸುವ ಸಾಧ್ಯತೆ ಇದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ದೇಶೀಯ ಸಬ್ಸಿಡಿಗಳನ್ನು ಹೊಂದಾಣಿಕೆ ಮಾಡಿ, ಬೆಲೆ ಪರಿಷ್ಕರಿಸಬಹುದು. ಈ ಪರಿಣಾಮ ಮುಂದಿನ ದಿನಗಳಲ್ಲಿ ಎಲ್ಪಿಜಿ ಬೆಲೆ ಹೆಚ್ಚೂ ಆಗಬಹುದು ಅಥವಾ ಕಡಿಮೆಯೂ ಆಗಬಹುದು. .
4. SEBI, ಮ್ಯೂಚುವಲ್ ಫಂಡ್ ನಿಯಮದಲ್ಲಿ ಬದಲಾವಣೆ: ಮ್ಯೂಚುವಲ್ ಫಂಡ್ ಹೂಡಿಕೆದಾರರಿಗಾಗಿ, ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (SEBI) ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಇದು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಹೊಸ ನಿಯಮದ ಪ್ರಕಾರ, ಯಾವುದೇ ಅಧಿಕಾರಿ, ಉದ್ಯೋಗಿ ಅಥವಾ ಅವರ ಸಂಬಂಧಿಕರು ₹15 ಲಕ್ಷಕ್ಕಿಂತ ಹೆಚ್ಚಿನ ಮ್ಯೂಚುವಲ್ ಫಂಡ್ ವಹಿವಾಟು ನಡೆಸಿದರೆ, ಆಸ್ತಿ ನಿರ್ವಹಣಾ ಕಂಪನಿ (AMC) ಈ ಬಗ್ಗೆ Compliance Officerಗೆ ತಿಳಿಸಬೇಕು. ಇದು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಹೆಚ್ಚಿನ ನಂಬಿಕೆ ಮತ್ತು ಭರವಸೆಯನ್ನು ಮೂಡುವಂತೆ ಮಾಡುತ್ತದೆ.
5. ಬ್ಯಾಂಕ್ ನಾಮಿನಿಗಳಲ್ಲಿ ಬದಲಾವಣೆ:
ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ 2025 ರ ಅಡಿಯಲ್ಲಿ ಒಂದು ಪ್ರಮುಖ ನಿಯಮ ಜಾರಿಗೆ ಬಂದಿದೆ. ಇನ್ಮೇಲೆ ಬ್ಯಾಂಕ್ ಗ್ರಾಹಕರು ತಮ್ಮ ಒಂದೇ ಬ್ಯಾಂಕ್ ಖಾತೆಗೆ, ಲಾಕರ್ ಅಥವಾ ಸುರಕ್ಷಿತ ಕಸ್ಟಡಿಗೆ ನಾಲ್ಕು ಜನರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು. ಅಲ್ಲದೇ ಅವರೇ ನಾಮಿನಿದಾರರಿಗೆ ಎಷ್ಟು ಪಾಲು ಸೇರಬೇಕೆಂದು ನಿರ್ಧರಿಸಬೇಕು. ಆ ಪ್ರಕಾರ, ಮೊದಲ ನಾಮಿನಿ ವ್ಯಕ್ತಿ ಲಭ್ಯವಿಲ್ಲದಿದ್ದರೆ, ಅವರ ಪಾಲು ಸ್ವಯಂಚಾಲಿತವಾಗಿ ಎರಡನೇ ವ್ಯಕ್ತಿಗೆ ವರ್ಗಾಯಿಸಲಾಗುತ್ತದೆ. ಈ ಬದಲಾವಣೆಯಿಂದ ಕುಟುಂಬ ವಿವಾದಗಳು, ಹಣ ವಿಥ್ಡ್ರಾ ಪ್ರಕ್ರಿಯೆ ಸುಲಭವಾಗಲಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications