ಬೆಂಗಳೂರು, ಏಪ್ರಿಲ್ 30: ಓಲಾ ಕ್ಯಾಬ್ಸ್ ಸಿಇಒ ಹೇಮಂತ್ ಬಕ್ಷಿ ಕಂಪೆನಿಗೆ ಸೇರಿದ ಒಂದೇ ವರ್ಷದೊಳಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಮಿಂಟ್ ವರದಿ ಮಾಡಿದೆ.
ಹೇಮಂತ್ ಬಕ್ಷಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಭಾವಿಶ್ ಅಗರ್ವಾಲ್ ನೇತೃತ್ವದ ಓಲಾ ಕಂಪೆನಿಗೆ ಸೇರಿದ್ದರು. ಆದರೆ ಕಂಪನಿಯು ಜನವರಿಯಲ್ಲಿ ಅವರ ನೇಮಕವನ್ನು ಘೋಷಣೆ ಮಾಡಿತ್ತು ಎಂದು ಹೇಳಲಾಗಿದೆ. ಕಂಪನಿಯ ಆಂತರಿಕ ಇಮೇಲ್ ಪ್ರಕಾರ, ಹೇಮಂತ್ ಬಕ್ಷಿ ಕಂಪನಿಯ ಹೊರಗಿನ ಅವಕಾಶಗಳು ಬಂದ ಕಾರಣ ಹುದ್ದೆ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.

ದೊಡ್ಡ ಪುನರ್ರಚನೆಯ ಕ್ರಮದ ಭಾಗ:
ಬೆಂಗಳೂರು ಮೂಲದ ಸಂಸ್ಥೆಯು ದೊಡ್ಡ ಪುನರ್ರಚನಾ ಕ್ರಮದ ಭಾಗವಾಗಿ ತನ್ನ 10% ಸಿಬ್ಬಂದಿಯನ್ನು ತೆಗೆಯಲು ಯೋಜಿಸುತ್ತಿದೆ. ಈ ಕ್ರಮವು ಸುಮಾರು 200 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಲಾಭದಾಯಕತೆಯನ್ನು ಸುಧಾರಿಸುವ ಮತ್ತು ಮುಂದಿನ ಹಂತದ ಬೆಳವಣಿಗೆಗೆ ತಯಾರಿ ಮಾಡುವ ಗುರಿಯನ್ನು ಹೊಂದಿದೆ ಎಂದು ಸಂಸ್ಥಾಪಕ ಭವಿಶ್ ಅಗರ್ವಾಲ್ ಸೋಮವಾರ ಇಮೇಲ್ ಮೂಲಕ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಓಲಾ ಕ್ಯಾಬ್ಸ್ನಿಂದ ಯೋಜಿತ $500 ಮಿಲಿಯನ್ ಸಾರ್ವಜನಿಕ ಮಾರುಕಟ್ಟೆ ಪಟ್ಟಿಗೆ ಮುಂಚಿತವಾಗಿ ಹೇಮಂತ್ ಬಕ್ಷಿ ಅವರ ರಾಜೀನಾಮೆ ಮತ್ತು ಸಿಬ್ಬಂದಿ ಕಡಿತದಂತಹ ಘಟನೆಗಳು ನಡೆಯುತ್ತಿದೆ. ಇದು ಕಂಪನಿಯ ಮೌಲ್ಯವನ್ನು $5 ಬಿಲಿಯನ್ಗೆ ತಲುಪುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಐಪಿಒಗಾಗಿ ಸಲ್ಲಿಸುವ ಮೊದಲು ಕಂಪನಿಯು ಎರಡು ತ್ರೈಮಾಸಿಕ ಲಾಭವನ್ನು ತೋರಿಸಲು ಬಯಸುತ್ತದೆ ಎಂದು ಎರಡನೇ ವ್ಯಕ್ತಿ ಸೇರಿಸಿದ್ದಾರೆ.
"ಈ ಬದಲಾವಣೆಗಳು ಕಂಪನಿಯೊಳಗಿನ ಕೆಲವು ಹುದ್ದೆಗಳು ಅನಗತ್ಯವಾಗುವುದಕ್ಕೆ ಕಾರಣವಾಗುತ್ತವೆ. ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳಲಾಗಿಲ್ಲ ಮತ್ತು ಈ ಪರಿವರ್ತನೆಯ ಅವಧಿಯಲ್ಲಿ ಕೆಲಸ ಕಳೆದುಕೊಂಡವರಿಗೆ ನೆರವಾಲು ನಾವು ಬದ್ಧರಾಗಿದ್ದೇವೆ" ಎಂದು ಇಮೇಲ್ ತಿಳಿಸಿದೆ.
"ಓಲಾ ಗ್ರಾಹಕರಲ್ಲಿ ಕಳೆದ ಕೆಲವು ವರ್ಷಗಳಿಂದ ನಾವು ನಿರ್ಮಿಸಿದ ಬಲವಾದ ನಾಯಕತ್ವದ ತಂಡದ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ಅವರು ತಮ್ಮ ಪಾತ್ರಗಳಿಗೆ ಸಾಕಷ್ಟು ಅನುಭವ ಮತ್ತು ಪರಿಣತಿಯನ್ನು ತರುತ್ತಾರೆ. ತಂತ್ರಜ್ಞಾನ ನೇತೃತ್ವದ ಬೆಳವಣಿಗೆಯನ್ನು ಹೆಚ್ಚಿಸಲು ಅವರು ನನ್ನೊಂದಿಗೆ ನಿಕಟವಾಗಿ ಸಹಕರಿಸುತ್ತಾರೆ" ಎಂದು ಅಗರ್ವಾಲ್ ಹೇಳಿದರು.
ಏಪ್ರಿಲ್ನಲ್ಲಿ ಓಲಾ ತನ್ನ ಎಲೆಕ್ಟ್ರಿಕ್ ಯೋಜನೆಯನ್ನು ಭಾರತದಲ್ಲಿ ವಿಸ್ತರಿಸಲು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಯುಕೆಯಲ್ಲಿ ತನ್ನ ರೈಡ್-ಹೇಲಿಂಗ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications