ಹೈದರಬಾದ್, ಸೆಪ್ಟೆಂಬರ್ 22: ಸವಾಲು, ಸೋಲುಗಳನ್ನು ಮೆಟ್ಟಿ ನಿಂತು ಸಾಧನೆಯ ಕಡೆ ಪರಿಶ್ರಮ ಪಡಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ ಈ ಯಶಸ್ವಿನ ಕಥೆ. ಶಾಲಾ ದಿನಗಳಲ್ಲಿ ಶೈಕ್ಷಣಿಕ ಸಾಧನೆ ಉತ್ತಮವಾಗಿರಲಿಲ್ಲ. ಪಿಯುಸಿಯಲ್ಲಿ ಎರಡು ಬಾರಿ ವಿಫಲರಾಗಿದ್ದರು. ಹಾಗೆಂದು ಇಟ್ಟ ಹೆಜ್ಜೆ ಹಿಂದಡಿ ಇಟ್ಟಿರಲಿಲ್ಲ. ಜೀವನದಲ್ಲಿ ಬಂದಂತೆ ಎದುರಿಸೋಣ ಎನ್ನುತ್ತಾ ಸಾಗಿದವರು ಕಟ್ಟಿ ಬೆಳೆಸಿದ್ದು, ಒಂದೆರಡಲ್ಲ, ಪ್ರಸ್ತುತ ಬರೋಬ್ಬರಿ 119000 ಕೋಟಿ ರೂ. ಮಾರುಕಟ್ಟೆ ಮೌಲ್ಯವಿರುವ ಕಂಪನಿಯನ್ನು. 12 ನೇ ತರಗತಿಯಲ್ಲಿ ಅನುತ್ತೀರ್ಣರಾದ ಇವರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಫೇಲ್ ಎನ್ನುವ ಪದ ಅಡ್ಡಿಯಾಗಿಲ್ಲ. ಇವರೇ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಡಿವಿಸ್ ಲ್ಯಾಬೋರೇಟರೀಸ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಮುರಳಿ ಕೆ ಡಿವಿ.
ಡಾ.ಮುರಳಿ ಕೃಷ್ಣ ಪ್ರಸಾದ್ ದಿವಿ ಅವರು ಇಂದು 58100 ಕೋಟಿ ರೂ.ಗಳ ಸಂಪತ್ತು ಹೊಂದಿರುವ ಹೈದರಾಬಾದ್ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು 33 ವರ್ಷಗಳ ಹಿಂದೆ ಜೆನೆರಿಕ್ಸ್ ತಯಾರಕ ಔಷಧ ಸಂಶೋಧನಾ ಸಂಸ್ಥೆ ಡಿವಿಸ್ ಲ್ಯಾಬ್ ಅನ್ನು ಸ್ಥಾಪಿಸಿದ್ದರು. ಇವರು ಯುಎಸ್-ತರಬೇತಿ ಪಡೆದ ವಿಜ್ಞಾನಿಯೂ ಆಗಿದ್ದಾರೆ. ಇಂದು ಡಿವಿಸ್ ಲ್ಯಾಬ್ ಸಕ್ರಿಯ ಔಷಧೀಯ ಪದಾರ್ಥಗಳ (API) ವಿಶ್ವದ ಅಗ್ರ ಪೂರೈಕೆದಾರರಲ್ಲಿ ಒಂದಾಗಿದೆ.

ಡಿವಿಸ್ ಲ್ಯಾಬ್'ನ ಸ್ಥಾಪಕರು:
73 ವರ್ಷ ವಯಸ್ಸಿನ ಡಾ. ಡಿವಿಯವರು, 1990 ರಲ್ಲಿ ಡಿವಿಸ್ ಲ್ಯಾಬೋರೇಟರೀಸ್ ಅನ್ನು ಸ್ಥಾಪಿಸಿದ್ದು, ಇಂದು ವಿಶ್ವದಾದ್ಯಂತ ಅಗ್ರ ಮೂರು ಸಕ್ರಿಯ ಔಷಧೀಯ ಘಟಕಾಂಶದ (API) ತಯಾರಕರಲ್ಲಿ ಒಂದಾಗಿದೆ. ಅವರ ಕಂಪನಿಯು ಸಂಧಿವಾತ, ಖಿನ್ನತೆ ಮತ್ತು ಅಪಸ್ಮಾರದಂತಹ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಪ್ರಮುಖ ಔಷಧಿಗಳಿಗೆ ಅಗತ್ಯವಾದ ಪದಾರ್ಥಗಳನ್ನು ಒದಗಿಸುತ್ತದೆ.
4,000 ಕೋಟಿ ರೂ. ನಗದು ಮೀಸಲು ಹೊಂದಿರುವ ಸಾಲಮುಕ್ತ ಕಂಪನಿ
ಡಿವಿಸ್ ಲ್ಯಾಬ್ ಪ್ರಮುಖ ಸಾಧನೆಗಳಲ್ಲಿ ಒಂದು ಅದರ ಆರ್ಥಿಕ ಶಿಸ್ತು. ಸಾಲ ಪಡೆದ ಐದು ವರ್ಷಗಳಲ್ಲಿ ಎಲ್ಲಾ ಸಾಲಗಳನ್ನು ಪಾವತಿಸಿ, ಕಂಪನಿಯು ಋಣಮುಕ್ತವಾಗಿರುವುದನ್ನು ಡಾ. ಮುರಳಿ ಡಿವಿ ಖಚಿತಪಡಿಸಿದ್ದರು. ಇಂದು, ಕಂಪನಿಯು 4,000 ಕೋಟಿ ರೂಪಾಯಿ ನಗದು ಮೀಸಲುಗಳೊಂದಿಗೆ ಬಲವಾದ ಆರ್ಥಿಕ ಸ್ಥಿತಿಯನ್ನು ಹೊಂದಿದೆ, ಭವಿಷ್ಯದ ಅವಕಾಶಗಳಿಗಾಗಿ ಅದನ್ನು ಸಿದ್ಧಪಡಿಸುತ್ತದೆ.
ಹಸಿರು ರಸಾಯನಶಾಸ್ತ್ರದ ಪ್ರವರ್ತಕ:
ಡಾ. ಡಿವಿ ಅವರ ನೇತೃತ್ವದಲ್ಲಿ, ಕಂಪನಿಯು ಈಗ ಹಸಿರು ರಸಾಯನಶಾಸ್ತ್ರದಲ್ಲಿ ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸುತ್ತಿದೆ. ಕಂಪನಿಯು GLP-1 (ಗ್ಲುಟೈಡ್ಸ್) ನಂತಹ ಪೆಪ್ಟೈಡ್ಗಳ(GLP-1 (ಗ್ಲುಕಾಗೋನ್) ಎನ್ನುವ ಪೆಪ್ಟೈಡ್ವು ಶರೀರದಲ್ಲಿ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಆಹಾರದ ಮೇಲೆ ನಿಯಂತ್ರಣವನ್ನು ಸುಗಮಗೊಳಿಸುತ್ತದೆ) ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದೆ. ಇದನ್ನು ಬೊಜ್ಜು ನಿಭಾಯಿಸಲು ಬಳಸಲಾಗುತ್ತಿದೆ, ಜಾಗತಿಕ ಔಷಧೀಯ ಉದ್ಯಮದಲ್ಲಿ ಡಿವಿಸ್ ಲ್ಯಾಬ್ ನಿರಂತರ ಯಶಸ್ಸಿನ ದಾರಿಯಲ್ಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications