Bengaluru Stampede: ಕಾಲ್ತುಳಿತದಲ್ಲಿ 11 ಮಂದಿ ಮೃತ..ಸಿಎಂ ಸಿದ್ದರಾಮಯ್ಯ ₹10 ಲಕ್ಷ ಪರಿಹಾರ ಘೋಷಣೆ, ಗಾಯಾಳುಗಳಿಗೆ ಚಿಕಿತ್ಸೆ!

2025ನೇ ವರ್ಷದ ಐಪಿಲ್ ಇನ್ನೆಂದೂ ಮರೆಯದ ಇತಿಹಾಸ ಸೃಷ್ಟಿಸಿದೆ. ಈ ಪಂದ್ಯ ಒಂದೆಡೆ ದೊಡ್ಡ ಖುಷಿಸುದ್ದಿ ನೀಡಿದ್ದರೆ, ಮತ್ತೊಂದೆಡೆ ಇನ್ನೆಂದೂ ಅರಗಿಸಿಕೊಳ್ಳಲಾಗದ ಕಹಿಸುದ್ದಿಗೆ ಸಾಕ್ಷಿಯಾಗಿದೆ. ಇದಕ್ಕೆ ಕಾರಣ ನಿನ್ನೆ (ಜೂನ್ 4) ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ, ಮತ್ತು ಅದರಲ್ಲಿ ಸಾವನ್ನಪ್ಪಿದ 11 ಮಂದಿಯ ಅಂತ್ಯ. ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ 11 ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

ಕಾಲ್ತುಳಿತದಲ್ಲಿ 11 ಮಂದಿ ಸಾವು..ಸರ್ಕಾರದಿಂದ ₹10 ಲಕ್ಷ ಪರಿಹಾರ!

₹10 ಲಕ್ಷ ಪರಿಹಾರ ಘೋಷಣೆ:

ಭೀಕರ ಕಾಲ್ತುಳಿತದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ನಮಗೆ ಅತ್ಯಂತ ನೋವಿನ ಘಟನೆ ಎಂದು ಸಂತಾಪ ಸೂಚಿಸಿದ್ದಾರೆ. ಹಾಗೂ ಮೃತಪಟ್ಟಿದ 11 ಕುಟುಂಬಗಳಿಗಾದ ನಷ್ಟವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಸರ್ಕಾರದಿಂದ ನಾವು ಅವರಿಗೆ ₹10 ಲಕ್ಷ ಪರಿಹಾರ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ಸರ್ಕಾರವು ಈ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಲಿದೆ ಮತ್ತು ಅಂತ್ಯಸಂಸ್ಕಾರ ಕಾರ್ಯಗಳಲ್ಲಿ ಸಹಾಯ ನೀಡಲು ಜಿಲ್ಲಾಡಳಿತವನ್ನು ನಿರ್ದೇಶಿಸಲಾಗಿದೆ.

ಇದು ಕೇವಲ ಹಣದ ಪರಿಹಾರವಲ್ಲ, ಬದಲಾಗಿ ಆ ಕುಟುಂಬಗಳ ತಾತ್ಕಾಲಿಕ ಭವಿಷ್ಯಕ್ಕಾಗಿ ನೀಡಲಾಗುವ ತಾತ್ಕಾಲಿಕ ಆಧಾರವೆಂದು ಮುಖ್ಯಮಂತ್ರಿಯವರ ಸ್ಪಷ್ಟನೆ. ಪರಿಹಾರ ಜೀವವನ್ನು ಹಿಂದಿರುಗಿಸಲಾರದು. ಆದರೆ, ಸರ್ಕಾರ ತಾವು ಬೆದರಿದ ಕುಟುಂಬಗಳೊಂದಿಗೆ ಇದೆ ಎಂಬ ಭರವಸೆ ನೀಡುತ್ತದೆ ಎಂದು ಮಾತನಾಡಿದರು.

ಗಾಯಾಳುಗಳಿಗೂ ಉಚಿತ ಚಿಕಿತ್ಸೆ:

ದುರಂತದಲ್ಲಿ ಗಾಯಗೊಂಡ 33 ಜನರಿಗೂ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಆರೋಗ್ಯ ಇಲಾಖೆ ಪ್ರಕಾರ, ಕೆಲವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣದ ಚಿಕಿತ್ಸೆಗೆ ವೈದೇಹಿ, ಬೌರಿಂಗ್ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸುತ್ತದೆ.

ಸಿಎಂ ಆಸ್ಪತ್ರೆ ಭೇಟಿ:

ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಈ ಘಟನೆಯ ಹಿಂದೆ ಯಾರದಾದರೂ ನಿರ್ಲಕ್ಷ್ಯವಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಘೋಷಿಸಿದರು.

ಅವಘಡದ ಹಿನ್ನೆಲೆ:

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಎರಡು-ಮೂರು ಲಕ್ಷ ಜನರು ಜಮಾಯಿಸಿದ್ದು, ಇದು ನಿರ್ವಹಣಾ ವ್ಯವಸ್ಥೆಗೆ ದೊಡ್ಡ ಸವಾಲಾಗಿತ್ತು. ಕ್ರೀಡಾಂಗಣದಲ್ಲಿ 35,000 ಆಸನಗಳಿದ್ದರೂ, ಈ ಮಟ್ಟದ ಜನಪ್ರವಾಹಕ್ಕೆ ಪೊಲೀಸರು ಹಾಗೂ ಸಂಘಟಕರು ಪೂರ್ವ ಸಿದ್ಧತೆ ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ರಾಜಕೀಯವಲ್ಲ, ಮಾನವೀಯತೆ ಪ್ರಧಾನ:

ಈ ಪ್ರಕರಣವನ್ನು ನಾನು ರಾಜಕೀಯವಾಗಿ ನೋಡಲ್ಲ. ನಾನು ಆ ಕುಟುಂಬಗಳ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಸಂಭವಿಸಬಾರದ ದುರಂತವನ್ನು ನಾವು ಎಲ್ಲ ಹಂತದಲ್ಲಿ ತನಿಖೆ ಮಾಡಿಸುತ್ತೇವೆ. ಆದರೆ ಜೀವ ಹೋದವರ ಕುಟುಂಬಗಳಿಗೆ ಸರ್ಕಾರ ಕೈಹಾಕುತ್ತಿದ್ದು, ₹10 ಲಕ್ಷ ಪರಿಹಾರವು ಮೊದಲ ಹೆಜ್ಜೆಯಾಗಿದೆ ಎಂದು ಸಿಎಂ ಹೇಳಿದರು.

"ವಿಜಯಕ್ಕಿಂತ ಜೀವ ಮುಖ್ಯ":

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಟ್ವೀಟ್ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದು, ಜೀವ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದೊಂದಿಗೆ ನಾವಿದ್ದೇವೆ. ಕ್ರಿಕೆಟ್ ಗೆಲುವು ಸಂತಸದ ಸಂಗತಿ. ಆದರೆ, ಯಾವುದೇ ಕಾರಣಕ್ಕೂ ಅದು ಜೀವದ ಮೌಲ್ಯವನ್ನು ಮೀರಬಾರದು. ಅಭಿಮಾನಿಗಳು ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಈ ಪರಿಹಾರ ಘೋಷಣೆಯ ಮೂಲಕ ಸರ್ಕಾರ ತಾತ್ಕಾಲಿಕವಾಗಿ ಜನರ ಆಕ್ರೋಶವನ್ನು ತಣಿಸುತ್ತಿರುವಂತಾದರೂ, ಪರಿಣಾಮಕಾರಿ ನಿರ್ವಹಣೆಯ ಕೊರತೆಯ ಪ್ರಶ್ನೆಗಳು ಮುಂದುವರಿದಿವೆ. ಹೀಗಾಗಿ ಈ ಘಟನೆಗೆ ನಿಖರ ಕಾರಣವನ್ನು ತಿಳಿದುಕೊಳ್ಳುವುದು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಯ ಪುನರಾವೃತ್ತಿಯನ್ನೇ ತಪ್ಪಿಸುವುದು ಮುಖ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+