RCB Victory Parade: ಆರ್ಸಿಬಿ..ಕನ್ನಡಿಗರ ಜೀವ, ಜೀವಾಳ ಎಲ್ಲವೂ ಅಂದ್ರೆ ತಪ್ಪಾಗಲ್ಲ. 18 ವರ್ಷಗಳ ಬಳಿಕೆ 'ಈ ಸಲ ಕಪ್ ನಮ್ದೇ' ಅನ್ನೋ ಮಾತಿಗೆ ಬೆಲೆ ತಂದುಕೊಟ್ಟಿದ್ದಾರೆ. ವಿಜಯಪತಾಕೆ ಹಾರಿಸಿ ಕಪ್ಗೆ ಮುತ್ತಿಟ್ಟಿರುವ ಆರ್ಸಿಬಿ ತಂಡ, ಇಂದು ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಿದೆ.

ಮೆರವಣಿಗೆ ಎಲ್ಲಿಂದ ಆರಂಭ:
ಆರ್ಸಿಬಿ ವಿಜಯ ಮೆರವಣಿಗೆ ವಿಧಾನಸೌಧದಿಂದ ಆರಂಭವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆಯಲಿದೆ. ಈ ಮಾರ್ಗದಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸೇರಿದಂತೆ ನವಾಬ್ ಪೇಟೆ, ಕಿತ್ತೂರು ರಾಜಕುಮಾರಿ ರಸ್ತೆ, ಕನ್ನಡಿಗ ರಸ್ತೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಪ್ರದೇಶಗಳ ಮೂಲಕ ಮೆರವಣಿಗೆ ನಡೆಯಲಿದೆ. ಮಾರ್ಗದ ಎರಡೂ ಬದಿಯಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಧ್ವಜ ಹಿಡಿದು, ಉತ್ಸಾಹದಿಂದ ತುಂಬಿದ ಸಾವಿರಾರು ಅಭಿಮಾನಿಗಳು ತಮ್ಮ ತಂಡವನ್ನು ಅಭಿನಂದಿಸುತ್ತಾ, ವಿಜಯಭೇರಿ ಘೋಷಿಸುತ್ತಾರೆ. ಹೀಗೆ, ಈ ನಗರದ ಪ್ರಮುಖ ಸ್ಥಳಗಳ ಮೂಲಕ ಹೆಸರಾಂತ ಆಟಗಾರರು ಮತ್ತು ತಂಡದ ಸದಸ್ಯರು ಜಯದ ಹಬ್ಬವನ್ನು ಹಂಚಿಕೊಳ್ಳುವ ಮೂಲಕ ಬೆಂಗಳೂರು ನಗರವು ಸಂಭ್ರಮದ ಕಣ್ಮಣಿಯಾಗಿರುತ್ತದೆ.
ವಿಜಯ ಮೆರವಣಿಗೆಯ ಪೂರ್ವಸಿದ್ಧತೆಗಳು:
ಇಂದು ಮಧ್ಯಾಹ್ನ 3:30ಕ್ಕೆ ಮೆರವಣಿಗೆ ಆರಂಭವಾಗುತ್ತದೆ. ಈ ಮಾರ್ಗದಲ್ಲಿ ಐಪಿಲ್ ತಂಟವು ಬಸ್ ಮೂಲಕ, ಟ್ರೋಫಿ ಹಿಡಿದು ಸಾಗಿಸಲಿದ್ದಾರೆ. ಇದಕ್ಕಾಗಿ ಪೊಲೀಸರು ಪೂರ್ವ ಸಿದ್ಧತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಮಾರ್ಗ ಬದಲಾವಣೆಯೂ ಆಗಲಿದೆ. ಮೆರವಣಿಗೆಯ ಮಾರ್ಗವು ನಗರದ ಪ್ರಮುಖ ವ್ಯಾಪಾರಿಕ ಪ್ರದೇಶವಾದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಮೂಲಕ ಹಾದು ಹೋಗಲಿದ್ದು, ಈ ಸಮಯದಲ್ಲಿ "ಆರ್ಸಿಬಿ" ಧ್ವಜಗಳು, ಘೋಷಣೆಗಳು ಹಾಗೂ ಆನಂದಭರಿತ ಜನಸಂದಣಿ ನಗರವನ್ನೇ ಕಂಪಿಸಲಿದೆ.
ಭದ್ರತೆ, ಸಂಚಾರ ನಿಯಂತ್ರಣ:
ಈ ಮೆರವಣಿಗೆಗೆ ವಿಶೇಷ ಭದ್ರತೆಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯು ರಸ್ತೆ ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದು, ಮುಂದಿನಂತೆ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಿಳಿಸಲಾಗಿದೆ. ಕೆಂಪೇಗೌಡ ರಸ್ತೆ, ಕಬ್ಬನ್ ಪಾರ್ಕ್, ಎಂಜಿ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪರಿಸರದಲ್ಲಿ ಭದ್ರತೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ನಿಗಾವೀಕ್ಷಣೆಯೂ ಸಕ್ರಿಯಗೊಳಿಸಲಾಗಿದ್ದು, ಯಾವುದೇ ಅನಿರೀಕ್ಷಿತ ಘಟನೆಗಳಿಗೆ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.
ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ಗೆ ಆಹ್ವಾನ:
ಈ ವಿಜಯೋತ್ಸವ ಸಂಭ್ರಮದಲ್ಲಿ ಆರ್ಸಿಬಿ ಯೋಧ ಎಂದು ಕರೆಸಿಕೊಂಡಿದ್ದ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವರನ್ನು ಕೂಡ ಆಹ್ವಾನಿಸಲಾಗಿದೆ. ಈ ಇಬ್ಬರು ನಾಯಕರು ಇಲ್ಲದೇ ಈ ಸಂಭ್ರಮ ಅಪೂರ್ಣ ಎಂದು ಕೊಹ್ಲಿ ಬಾಯ್ಸ್ ಹೇಳಿದ್ದಾರೆ.
ಅಭಿಮಾನಿಗಳ ಭರವಸೆಗೆ ಗೌರವ:
ಆರ್ಸಿಬಿ ಎಂಬ ಹೆಸರು ಕೇವಲ ಒಂದು ತಂಡವಲ್ಲ. ಅದು ನಂಬಿಕೆ, ನಿರೀಕ್ಷೆ, ನಿಷ್ಠೆ ಮತ್ತು ನಿರಾತಂಕ ಅಭಿಮಾನಿಗಳ ಸಂಕೇತವಾಗಿದೆ. 2008ರಿಂದ 2024ರವರೆಗೆ ಮೂರು ಬಾರಿ ಫೈನಲ್ ತಲುಪಿದರೂ ತಲೆಯ ಮೇಲೆ ಕಪ್ ಎತ್ತಿದ ಇತಿಹಾಸವಿರಲಿಲ್ಲ. ಆದರೆ ಈ ಬಾರಿ ಆ ನಿರೀಕ್ಷೆಗಳು ಸುಳ್ಳಾಗದೆ, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿತು.
ಇನ್ನು ಈ ಮೆರವಣಿಗೆ ಕೇವಲ ಒಂದು ಕ್ರೀಡಾ ತಂಡದ ಸಂಭ್ರಮವಲ್ಲ. ಇದು ನಂಬಿಕೆಯ ಆಚರಣೆ, ಬದ್ಧತೆಯ ಗೆಲುವು, ಮತ್ತು ಅಭಿಮಾನಿಗಳ ಧೈರ್ಯದ ಪ್ರತಿಫಲವಾಗಿದೆ. ಇದು ಕ್ರೀಡೆ ಎಂಬುದನ್ನು ಮೀರಿದ ಭಾವನೆಯ ಸಮಾರೋಪ ಸಮಾರಂಭವಾಗಿದೆ. ನಾಳೆಯ ತಲೆಮಾರಿಗೆ ಈ ದಿನ ಒಂದು ಸ್ಪೂರ್ತಿಯ ಕ್ಷಣವಾಗಿದೆ. ಸೋಲುಗಳ ನಡುವೆಯೂ ಮುಂದುವರಿದ ಹೋರಾಟ, ನಿರೀಕ್ಷೆ ಕೊತ್ತಿಲ್ಲದ ಅಭಿಮಾನಿಗಳು, ಹಾಗೂ ಅಂತಿಮವಾಗಿ ಮೊಟ್ಟಮೊದಲ ಟ್ರೋಫಿಗೆ ಮುತ್ತಿಟ್ಟ ಸಂತೋಷ.
More From GoodReturns

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?



Click it and Unblock the Notifications