ಕೊರೊನಾವೈರಸ್ ಪರಿಣಾಮವಾಗಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಸುಮಾರು 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ.
ದೇಶಕ್ಕೆ ಮಹಾ ಆರ್ಥಿಕ ಸಂಕಟ ಬಂದಾಗ ಸರ್ಕಾರದ ಬಳಿ ಇರುವ ಚಿನ್ನವನ್ನು ಬಳಸಿಕೊಳ್ಳುತ್ತದೆ. ಅಂದರೆ ಚಿನ್ನವನ್ನು ಅಡ ಇಡುವ ಮೂಲಕ ಸಾಲ ಎತ್ತಿ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಶ್ರಮಿಸುವುದುಂಟು. ಅದೇ ರೀತಿ ಸಂಗ್ರಹವಾಗಿರುವ ವಿದೇಶಿ ವಿನಿಮಯ ಬಳಸಿಕೊಳ್ಳುವುದುಂಟು. ಈ ರೀತಿಯ ಪರಿಸ್ಥಿತಿ ಈಗ ಉದ್ಭವಿಸಿದೆ ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಚಿನ್ನವನ್ನು ಕರಗಿಸುವ ಜರೂರು ಬರದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಕೆಲ ವರದಿಗಳು ಬಂದಿವೆ. ಈ ಕುರಿತು ಇಂಡಿಯನ್ ಎಕ್ಸಪ್ರೆಸ್ ಬೆಳಕು ಚೆಲ್ಲಿದೆ. ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಸಂಭವಿಸಿರುವ ಈ ಹೊತ್ತಿನಲ್ಲಿ ದೇಶದ ವಿದೇಶಿ ವಿನಿಮಯ ಏರಿಕೆ ಕಂಡಿದೆ ಎನ್ನಲಾಗಿದೆ.
493.48 ಬಿಲಿಯನ್ ಡಾಲರ್ ವಿದೇಶಿ ವಿನಿಮಯ
ಭಾರತದ ವಿದೇಶಿ ವಿನಿಮಯ ಮೀಸಲು ಹೆಚ್ಚುತ್ತಿದೆ. ಶೀಘ್ರದಲ್ಲೇ 500 ಬಿಲಿಯನ್ ಡಾಲರ್ ಗಡಿ ತಲುಪಲಿದೆ. ಮೇ ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 493.48 ಬಿಲಿಯನ್ ಡಾಲರ್ (ಸುಮಾರು 37.30 ಲಕ್ಷ ಕೋಟಿ ರೂ.) ಗೆ ಏರಿದೆ. ಇದು 1991 ಕ್ಕೆ ಹೋಲಿಸಿದರೆ ಶೇ 8,400 ರಷ್ಟು ಏರಿಕೆಯಾಗಿದೆ.
ವಿದೇಶಿ ಹೂಡಿಕೆ ಹೆಚ್ಚಾಗುತ್ತಿದೆ
ಬಿಕ್ಕಟ್ಟಿನ ಸಮಯದಲ್ಲಿ ಅಥವಾ ಸಾಲ ಪಡೆಯುವ ವ್ಯಾಪ್ತಿಯನ್ನು ಮೊಟಕುಗೊಳಿಸಿದಾಗ ಬಿಕ್ಕಟ್ಟನ್ನು ತಡೆದುಕೊಳ್ಳಲು ವಿದೇಶಿ ವಿನಿಮಯವನ್ನು ಬಳಸಲಾಗುತ್ತಿದೆ. ಆರ್ಥಿಕತೆಯ ಮಂದಗತಿಯ ಹೊರತಾಗಿಯೂ ವಿದೇಶಿ ವಿನಿಮಯ ಸಂಗ್ರಹವು ಹೆಚ್ಚುತ್ತಿದೆ. ಏರಿಕೆಗೆ ಪ್ರಮುಖ ಕಾರಣವೆಂದರೆ ಭಾರತೀಯ ಷೇರುಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ಹೂಡಿಕೆ ಮತ್ತು ವಿದೇಶಿ ನೇರ ಹೂಡಿಕೆಗಳು (ಎಫ್ಡಿಐ). ವಿದೇಶಿ ಹೂಡಿಕೆದಾರರು ಕಳೆದ ಎರಡು ತಿಂಗಳುಗಳಲ್ಲಿ ಹಲವಾರು ಭಾರತೀಯ ಕಂಪನಿಗಳಲ್ಲಿ ಷೇರುಗಳನ್ನು ಪಡೆದುಕೊಂಡಿದ್ದರು.
ಶೇಕಡಾ 61 ರಷ್ಟು ವಿದೇಶಿ ವ್ಯಾಪಾರ ಇಳಿಕೆ
ಮತ್ತೊಂದೆಡೆ, ಕಚ್ಚಾ ತೈಲ ಬೆಲೆಗಳ ಕುಸಿತವು ತೈಲ ಆಮದು ಮೇಲಿನ ವಿನಿಮಯವನ್ನು ತಗ್ಗಿಸಿ, ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿದೆ. ಅಂತೆಯೇ, ಸಾಗರೋತ್ತರ ವ್ಯಾಪಾರ ಮತ್ತು ವಿದೇಶಿ ಪ್ರಯಾಣವು ತೀವ್ರವಾಗಿ ಕುಸಿದಿದೆ. ಏಪ್ರಿಲ್ನಲ್ಲಿ ಶೇಕಡಾ 61 ರಷ್ಟು ವಿದೇಶಿ ವ್ಯಾಪಾರ ಇಳಿಕೆಯಾಗಿ 12.87 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಭಾರತಕ್ಕೆ ಉಳಿತಾಯವಾಗಿದೆ.
ರಿಸರ್ವ್ ಬ್ಯಾಂಕ್ಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸುತ್ತದೆ
ವಿದೇಶಿ ವಿನಿಮಯ ಉಳಿತಾಯವು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸುತ್ತದೆ. ಆರ್ಥಿಕ ಮುಂಭಾಗದಲ್ಲಿ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಒಂದು ದೊಡ್ಡ ಸಹಾಯವಾಗಿ ಅನುಕೂಲ ಆಗುತ್ತದೆ. ಜಿಡಿಪಿ ಅನುಪಾತಕ್ಕೆ ವಿದೇಶಿ ವಿನಿಮಯ ಮೀಸಲು ಶೇ 15 ರಷ್ಟಿದೆ. ವಿದೇಶಿ ವಿನಿಮಯದ ಬಗ್ಗೆ ಆರ್ಬಿಐ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸರ್ಕಾರದ ನೀತಿ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ.
More From GoodReturns

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

SBI Credit Card: ಎಸ್ಬಿಐ ಗ್ರಾಹಕರೇ ಇಲ್ಲಿ ಗಮನಿಸಿ! ಏಪ್ರಿಲ್ 1 ರಿಂದ ಈ ನಿಯಮ ಚೇಂಜ್

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ



Click it and Unblock the Notifications