ಇಂಟರ್ನೆಟ್ನಲ್ಲಿ ಒಂದು ವರ್ಷದ ಹಿಂದೆ ಚಾಟ್ಜಿಪಿಟಿ ಮೂಲಕ ಸುದ್ದಿ ಮಾಡಿದ್ದ ಓಪನ್ಎಐ ಸಂಸ್ಥೆಯು ಕಳೆದ ಮೂರು ದಿನಗಳ ಹಿಂದೆ ದಿಡೀರ್ ಆಗಿ ತನ್ನ ಸೆಲೆಬ್ರಿಟಿ ಸಿಇಒ ಸ್ಯಾಮ್ ಆಲ್ಟ್ಮನ್ರನ್ನು ವಜಾಗೊಳಿಸಿದೆ. ಆದರೆ ಈಗ ಓಪನ್ಎಐನ ಸಿಇಒ ಆಗಿ ಸ್ಯಾಮ್ ಆಲ್ಟ್ಮ್ಯಾನ್ರನ್ನು ನೇಮಿಸಲಾಗಿದೆ!
ಸ್ಯಾಮ್ ಆಲ್ಟ್ಮ್ಯಾನ್ ಸಹ ಸಂಸ್ಥಾಪನೆ ಮಾಡಿದ ಓಪನ್ಎಐ ಸಂಸ್ಥೆಯ ಮಂಡಳಿಯು ಶುಕ್ರವಾರ ಆಲ್ಟ್ಮ್ಯಾನ್ರನ್ನು ಹಠಾತ್ ವಜಾಗೊಳಿಸಿದೆ. ಇದಾದ ನಂತರ ಐದು ದಿನಗಳ ತೀವ್ರ ಚರ್ಚೆಗಳ ಬಳಿಕ ಈಗ ಮತ್ತೆ ಸ್ಯಾಮ್ ಆಲ್ಟ್ಮ್ಯಾನ್ರನ್ನು ಸಿಇಒ ಎಂದು ಘೋಷಿಸಿದೆ.

ಅತ್ಯಂತ ಮೌಲ್ಯಯುತವಾದ ಯುಎಸ್ನ ಸ್ಟಾರ್ಟ್ಅಪ್ ಆಗಿರುವ ಓಪನ್ಎಐ ಆಲ್ಟ್ಮ್ಯಾನ್ ಸಂಸ್ಥೆಯ ಉನ್ನತ ಹುದ್ದೆ ಮತ್ತೆ ಸ್ವೀಕಾರ ಮಾಡಿರುವುದನ್ನು "ತಾತ್ವಿಕ ಒಪ್ಪಂದ" ಎಂದು ಹೇಳಿಕೊಂಡಿದೆ. ಈ ನಡುವೆ ಈ ಸಂಸ್ಥೆಯ ಬೋರ್ಡ್ ಕಳೆದ ವಾರ ತಮ್ಮ ನಿರ್ಧಾರದ ವಿರುದ್ಧ ಧ್ವನಿ ಎತ್ತಿದವರನ್ನು ಕೂಡಾ ಬೋರ್ಡ್ನಿಂದ ಹೊರಹಾಕುತ್ತಿದೆ ಎಂದು ವರದಿ ಹೇಳಿದೆ.
ಸ್ಯಾಮ್ ಆಲ್ಟ್ಮ್ಯಾನ್ ಹೇಳುವುದೇನು?
"ನಾನು ಓಪನ್ಎಐ ಅನ್ನು ಪ್ರೀತಿಸುತ್ತೇನೆ ಮತ್ತು ಕಳೆದ ಕೆಲವು ದಿನಗಳಿಂದ ನಾನು ಮಾಡಿದ ಎಲ್ಲವೂ ಈ ತಂಡ ಮತ್ತು ಅದರ ಮಿಷನ್ ಅನ್ನು ಒಟ್ಟಿಗೆ ಇರಿಸುವ ಸೇವೆಯ ಭಾಗವಾಗಿದೆ. ಭಾನುವಾರ ಸಂಜೆ ನಾನು ಮೈಕ್ರೋಸಾಫ್ಟ್ ಅನ್ನು ಸೇರಲು ನಿರ್ಧರಿಸಿದಾಗ, ಅದು ನನಗೆ ಮತ್ತು ತಂಡಕ್ಕೆ ಉತ್ತಮ ಮಾರ್ಗವಾಗಿದೆ ಎಂಬುದು ಸ್ಪಷ್ಟವಾಯಿತು," ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
"ಹೊಸ ಬೋರ್ಡ್ ಮತ್ತು ಸತ್ಯ ನಾಡೆಲ್ಲಾರ ಬೆಂಬಲದೊಂದಿಗೆ, ನಾನು ಓಪನ್ಐಗೆ ಮರಳಲು ಎದುರು ನೋಡುತ್ತಿದ್ದೇನೆ. ಹಾಗೆಯೇ ಮೈಕ್ರೋಸಾಫ್ಟ್ನೊಂದಿಗೆ ನಮ್ಮ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ," ಎಂದು ಸ್ಯಾಮ್ ಆಲ್ಟ್ಮ್ಯಾನ್ ಈ ಹಿಂದೆ ಟ್ವಿಟ್ಟರ್ ಆಗಿದ್ದ ಎಕ್ಸ್ನಲ್ಲು ಉಲ್ಲೇಖಿಸಿದ್ದಾರೆ.
ಓಪನ್ಎಐ ಹೇಳುವುದೇನು?
"ಬ್ರೆಟ್ ಟೇಲರ್ (ಅಧ್ಯಕ್ಷ), ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ'ಏಂಜೆಲೊರ ಹೊಸ ಆರಂಭಿಕ ಮಂಡಳಿಯೊಂದಿಗೆ ಸಿಇಒ ಆಗಿ ಓಪನ್ಎಐಗೆ ವಾಪಾಸ್ ಬರಲು ಸ್ಯಾಮ್ ಆಲ್ಟ್ಮನ್ ಜೊತೆ ತಾತ್ವಿಕವಾಗಿ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ವಿವರ ನೀಡಲಾಗುವುದು," ಎಂದು ಓಪನ್ಎಐ ಎಕ್ಸ್ನಲ್ಲಿ ಮಾಹಿತಿ ನೀಡಿದೆ.
ಓಪನ್ಎಐನ ಸುಮಾರು ಶೇಕಡ 49 ರಷ್ಟು ಪಾಲನ್ನು ಹೊಂದಿರುವ ಮೈಕ್ರೋಸಾಫ್ಟ್ ಕಳೆದ ವಾರ ಓಪನ್ಎಐ ನಿರ್ಧಾರದಿಂದ ಅಸಮಾಧಾನಗೊಂಡಿತ್ತು. ಸಾಫ್ಟ್ವೇರ್ ಸಮೂಹದಲ್ಲಿ ಹೊಸ ಎಐ ಗುಂಪನ್ನು ಮುನ್ನಡೆಸಲು ಆಲ್ಟ್ಮ್ಯಾನ್ ಅನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಿಕೆಯನ್ನು ಕೂಡಾ ನೀಡಿತ್ತು.
ಈ ಹಿಂದಿನ ಓಪನ್ಎಐ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಓಪನ್ಎಐನ ಮಾಜಿ ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ ಮತ್ತು ಹಲವಾರು ಇತರ ಸದಸ್ಯರು ರಾಜೀನಾಮೆ ನೀಡಿದರು. ಕಳೆದ ವಾರ ಓಪನ್ಎಐ ಮಂಡಳಿಯ ನಿರ್ಧಾರದ ಬಗ್ಗೆ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ನಿರಾಶೆ ವ್ಯಕ್ತಪಡಿಸಿದ್ದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications