ಎಸ್ಬಿಐ (SBI) ಮಾಡಿದ ಒಂದು ತಪ್ಪಿನಿಂದಾಗಿ ಇದೀಗ ಭಾರೀ ಮೊತ್ತ ಗ್ರಾಹಕರೊಬ್ಬರಿಗೆ ಪಾವತಿಸುವಂತಾಗಿದೆ. ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವು (Delhi State Consumer Disputes Redressal Commission) ಎಸ್ಬಿಐ ಬ್ಯಾಂಕ್ಗೆ ಮಹಿಳಾ ಗ್ರಾಹಕರಿಗೆ 1.7 ಲಕ್ಷ ರೂ. ಪಾವತಿಸುವಂತೆ ಆದೇಶ ನೀಡಿದೆ. ಮಹಿಳೆಯೊಬ್ಬರ ಎಸ್ಬಿಐ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಇಸಿಎಸ್ ಬೌನ್ಸ್ ಶುಲ್ಕವನ್ನು ತಪ್ಪಾಗಿ ವಿಧಿಸಿತ್ತು. ಮಹಿಳೆಯೊಬ್ಬರು ಎಚ್ಡಿಎಫ್ಸಿ ಬ್ಯಾಂಕ್ನಿಂದ (HDFC Bank) ಕಾರ್ ಲೋನ್ ಪಡೆದಿದ್ದರು ಮತ್ತು ಎಸ್ಬಿಐ ಖಾತೆಯಿಂದ ಇಎಂಐ ಕಡಿತಗೊಳಿಸುವಂತೆ ಸೂಚಿಸಿದ್ದರು ಆದರೆ 11 ಇಎಂಐಗಳು ಬೌನ್ಸ್ ಆಗಿದ್ದವು.

ಆ ಪ್ರಕಾರ, ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗವು (Delhi State Consumer Disputes Redressal Commission) ಭಾರತೀಯ ಸ್ಟೇಟ್ ಬ್ಯಾಂಕ್ (SBI) ಒಬ್ಬ ಮಹಿಳಾ ಗ್ರಾಹಕರಿಗೆ 1.7 ಲಕ್ಷ ರೂ. ಪಾವತಿಸುವಂತೆ ಆದೇಶ ಹೊರಡಿಸಿದೆ. ಏಕೆಂದರೆ ಎಸ್ಬಿಐ ಬ್ಯಾಂಕ್ ಮಹಿಳೆಯ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಇಸಿಎಸ್ (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವಿಸ್) ಬೌನ್ಸ್ ಶುಲ್ಕವನ್ನು ತಪ್ಪಾಗಿ ವಿಧಿಸಿದೆ ಎಂದು ಆಯೋಗ ತೀರ್ಪು ನೀಡಿ, ಗ್ರಾಹಕರಿಗೆ ಇಷ್ಟು ಮೊತ್ತವನ್ನು ಪಾವತಿಸುವಂತೆ ಹೇಳಿದೆ. ಈ ಮೂಲಕ ಪ್ರಕರಣವು ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ಗ್ರಾಹಕ ಆಯೋಗಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಏನಿದು ಪ್ರಕರಣ?
ಒಬ್ಬ ಮಹಿಳಾ ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕ್ನಿಂದ ಕಾರ್ ಲೋನ್ ಪಡೆದಿದ್ದರು ಮತ್ತು ತಮ್ಮ ಎಸ್ಬಿಐ ಉಳಿತಾಯ ಖಾತೆಯಿಂದ ಮಾಸಿಕ ಇಎಂಐ ಕಡಿತಗೊಳಿಸುವಂತೆ ಸೂಚನೆ ನೀಡಿದ್ದರೆ. ಆದರೆ, ಎಸ್ಬಿಐ ಅವರ 11 ಇಎಂಐಗಳನ್ನು ಬೌನ್ಸ್ ಮಾಡಿತ್ತು ಮತ್ತು ಎಸ್ಬಿಐ ಅದಕ್ಕೆ ಪ್ರತಿ ಬಾರಿಯೂ ಅವರಿಂದ 400 ರೂ. ಶುಲ್ಕ ವಿಧಿಸಿತ್ತು.
ಆದರೆ ಎಸ್ಬಿಐ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇದ್ದರೂ, ಇಎಂಐ ಬೌನ್ಸ್ ಆಗಿದ್ದು ಅವರನ್ನು ಆಶ್ಚರ್ಯಕ್ಕೀಡುಮಾಡಿತ್ತು. ಇದಕ್ಕೆ ಸಾಕ್ಷಿಯಾಗಿ, ಅವರು ತಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಮುದ್ರಿಸಿ ಬ್ಯಾಂಕ್ಗೆ ಸಲ್ಲಿಸಿದರು.
ಆದರೆ ಎಸ್ಬಿಐ ಬೌನ್ಸ್ ಶುಲ್ಕವನ್ನು ಹಿಂದಿರುಗಿಸಲು ನಿರಾಕರಿಸಿತು. ಇದರಿಂದ ರೊಚ್ಚಿಗೆದ್ದ ಗ್ರಾಹಕರು, 2010 ರಲ್ಲಿ ಜಿಲ್ಲಾ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಿದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ನಂತರ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ಮನವಿ ಸಲ್ಲಿಸಿದರು, ಅದು ಪ್ರಕರಣವನ್ನು ಮತ್ತೆ ದೆಹಲಿ ರಾಜ್ಯ ಗ್ರಾಹಕ ಆಯೋಗಕ್ಕೆ ವರ್ಗಾಯಿಸಿತು. ಅಲ್ಲಿ, ಗ್ರಾಹಕರು ಅಂತಿಮವಾಗಿ ಅಕ್ಟೋಬರ್ 9, 2025 ರಂದು ಪ್ರಕರಣವನ್ನು ಗೆದ್ದರು.
ಎಸ್ಬಿಐ ವಾದಿಸುತ್ತಾ, ಇಸಿಎಸ್ ಮ್ಯಾಂಡೇಟ್ನಲ್ಲಿ ನೀಡಲಾದ ಮಾಹಿತಿ ಸರಿಯಾಗಿಲ್ಲ, ಇದರಿಂದಾಗಿ ಮಹಿಳೆಯ ಚೆಕ್ಗಳು ಬೌನ್ಸ್ ಆಗಿವೆ ಎಂದು ತಿಳಿಸಿತ್ತು. ಆದರೆ ಎಸ್ಬಿಐ ವಾದವನ್ನು ದೆಹಲಿ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ ಸಮಂಜಸವಲ್ಲ ಎಂದು ಹೇಳಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications