ಇಂದು ಕರ್ನಾಟಕ ಬಂದ್ ಇಲ್ಲ..ಹೌದು, ಜುಲೈ 25ರಂದು ನಡೆಯಲಿದೆ ಎನ್ನಲಾಗಿದ್ದ ಕರ್ನಾಟಕ ಬಂದ್ಗೆ ಬ್ರೇಕ್ ಬಿದ್ದಿದೆ. ಅಂದರೆ ಸಣ್ಣ ವ್ಯಾಪಾರಿಗಳಿಗೆ ತಲುಪಿದ್ದ ಜಿಎಸ್ಟಿ ನೋಟೀಸ್, ರಾಜ್ಯದೆಲ್ಲೆಡೆ ಕಿಡಿಕಾರಿಕೆ ಸೃಷ್ಟಿಸಿತ್ತು. ಜಿಎಸ್ಟಿ ಪಾವತಿ ಮಾಡುವುದು ಅಸಾಧ್ಯ ಎಂದು ಇಂದು ರಾಜ್ಯವ್ಯಾಪಿ ಬಂದ್ ನಡೆಸಿ, ಪ್ರತಿಭಟಿಸಲು ನಿರ್ಧರಿಸಿದ್ರು. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡ ನಿರ್ಧಾರದಿಂದ, ಸಣ್ಣ ವ್ಯಾಪಾರಿಗಳಿಗೆ ಕೊಂಚ ರಿಲೀಫ್ ಆಗಿದ್ದು ಬಂದ್ ಹಿಂತೆಗೆದುಕೊಂಡಿದ್ದಾರೆ.

ಚಹಾ, ಕಾಫಿ, ಹಾಲು ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಮಾರಾಟವನ್ನು ಸ್ಥಗಿತಗೊಳಿಸಿ, ಯುಪಿಐ ವಹಿವಾಟುಗಳ ಆಧಾರದ ಮೇಲೆ ಜಿಎಸ್ಟಿ ನೋಟಿಸ್ಗಳನ್ನು ನೀಡುತ್ತಿರುವುದರ ವಿರುದ್ಧ ವ್ಯಾಪಾರಿಗಳು ನಡೆಸಿದ್ದ ಪ್ರತಿಭಟನೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಜಿಎಸ್ಟಿ ನೋಟಿಸ್ನೇ ಹಿಂತೆಗೆದುಕೊಂಡಿದ್ದಾರೆ.
ಸರ್ಕಾರದ ಸ್ಪಷ್ಟ ಭರವಸೆ:
ಸರ್ಕಾರ ಇದೀಗ ಸ್ಪಷ್ಟಪಡಿಸಿರುವಂತೆ, ಹಾಲು, ತರಕಾರಿ, ಮಾಂಸ, ಹಣ್ಣು ಸೇರಿದಂತೆ ಅಗತ್ಯ ಸರಕುಗಳ ಮೇಲೆ ಹಿಂದಿನಿಂದ ಜಿಎಸ್ಟಿ ಬಾಕಿಗಳನ್ನು ಸಂಗ್ರಹಿಸಲಾಗುವುದಿಲ್ಲ. ಇದರ ಜೊತೆಗೆ 40 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವ್ಯವಹಾರ ಹೊಂದಿರುವ ವ್ಯಾಪಾರಿಗಳನ್ನು ಪರಿಶೀಲಿಸುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಇತ್ತೀಚೆಗೆ ಈ ನಿಯಮಗಳನ್ನು ಉಲ್ಲಂಘಿಸಿ, ಡಿಜಿಟಲ್ ಪಾವತಿಗಳ ಆಧಾರದಲ್ಲಿ ಹಳೆಯ ಬಾಕಿಗಳಿಗೆ ನೋಟಿಸ್ ನೀಡುತ್ತಿದ್ದ ಕ್ರಮ ವ್ಯಾಪಾರಿಗಳ ನಿರಾಸೆಗೆ ಕಾರಣವಾಗಿತ್ತು.
ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ:
ಕಳೆದ ಮೂರು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಟೀ ಸ್ಟಾಲ್ಗಳು, ಬೇಕರಿಗಳು, ಹಾಲು ಮಾರಾಟಗಾರರು ಕಪ್ಪು ಬ್ಯಾಡ್ಜ್ಗಳನ್ನು ಧರಿಸಿ ಬಾಹ್ಯ ಪ್ರತಿಭಟನೆ ನಡೆಸಿದರು. ಕೆಲವೊಂದು ಕಡೆ ಚಹಾ, ಕಾಫಿ, ಹಾಲು ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಿದ ಸರ್ಕಾರವೇ ಈಗ ಅದರ ಆಧಾರದ ಮೇಲೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿರುವುದನ್ನು ಅವರು ವಿರೋಧಿಸಿದರು.
ಹಾವೇರಿ, ಬೀದರ್ ಮುಂತಾದ ಕಡೆಗಳಲ್ಲಿ ಯುಪಿಐ ಪಾವತಿಗಳ ಆಧಾರದ ಮೇಲೆ 25 ರಿಂದ 29 ಲಕ್ಷದಷ್ಟು ತೆರಿಗೆ ಬೇಡಿಕೆಯ ನೋಟಿಸ್ಗಳು ಬರುತ್ತಿರುವ ಸುದ್ದಿ ವ್ಯಾಪಾರಿಗಳಲ್ಲಿ ಭೀತಿ ಮೂಡಿಸಿತು. ಹಲವರು ಬ್ಯಾಂಕ್ ಖಾತೆಗಳನ್ನು ಬಳಕೆ ನಿಲ್ಲಿಸಿ ನಗದು ಮಾರ್ಗಕ್ಕೆ ಹಿಂದಿರುಗಿದ್ದು, ಡಿಜಿಟಲ್ ಆರ್ಥಿಕತೆಗೆ ಹಿಂದೆಜ್ಜೆಯಾಗಿದೆ. ಈ ಸಂದರ್ಭ ಬಂದ್ ಹಂತ ತಲುಪಿದಾಗ ಸರ್ಕಾರ ಮಧ್ಯೆ ಹಸ್ತಕ್ಷೇಪಿಸಿ ಪರಿಹಾರ ನೀಡಿತು.
'ಜಿಎಸ್ಟಿ ತಿಳಿಯಿರಿ' ಅಭಿಯಾನ:
ಡಿಜಿಟಲ್ ಪಾವತಿಗಳ ಮೂಲಕ ವ್ಯವಹರಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಅನ್ಯಾಯವಾಗಿ ತೆರಿಗೆ ಹೊರೆ ಬೀರುವ ಸಂದರ್ಭ ತಪ್ಪಿಸಲು, ಸರ್ಕಾರ 'ಜಿಎಸ್ಟಿ ತಿಳಿಯಿರಿ' ಎಂಬ ಜಾಗೃತಿ ಅಭಿಯಾನವನ್ನು ಘೋಷಿಸಿದೆ. ಜೊತೆಗೆ 24×7 ಸಹಾಯವಾಣಿ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಮೂಲಕ ಜಿಎಸ್ಟಿ ಕುರಿತ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನ ವ್ಯಾಪಾರಿಗಳಿಗೆ ಲಭಿಸಲಿದೆ.
FKCCI ಸೇರಿದಂತೆ ಹಲವು ವ್ಯಾಪಾರ ಸಂಘಟನೆಗಳು ಸರ್ಕಾರದ ಕ್ರಮವನ್ನು "ಅನ್ಯಾಯಯುತ ಹಾಗೂ ಕಾನೂನುಬಾಹಿರ" ಎಂದು ಉಲೇಖಿಸಿದರು. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಿದ ನಂತರ ಇದೀಗ ಅದೇ ಆಧಾರದ ಮೇಲೆ ಹಿಂದಿನ ವರ್ಷಗಳ ತೆರಿಗೆ ಬಾಕಿಗಳನ್ನು ಹೇಗೆ ಕೇಳಬಹುದು ಎಂಬ ಪ್ರಶ್ನೆ ಎದುರಾಯ್ತು. ವ್ಯಾಪಾರಿಗಳು ಸಕಾಲದಲ್ಲಿ ನೋಂದಾಯಿಸದ ಕಾರಣದಿಂದಲೇ ಈಗ ನೋಟಿಸ್ ಬಂದಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ ಆದರೆ, ಇದರ ನ್ಯಾಯಸಮ್ಮತತೆ ಪ್ರಶ್ನಾರ್ಹವಾಗಿದೆ.
ಇಂತಹ ಬಿಕ್ಕಟ್ಟುಗಳು ಭವಿಷ್ಯದಲ್ಲಿಯೂ ತಪ್ಪಿಸಿಕೊಳ್ಳಬೇಕಾದದ್ದು. ವ್ಯಾಪಾರಿಗಳೊಂದಿಗೆ ನೇರ ಸಂವಹನ, ಸ್ಪಷ್ಟ ನಿಯಮಗಳು ಹಾಗೂ ನ್ಯಾಯಸಮ್ಮತ ಜಾರಿ ವಿಧಾನಗಳ ಮೂಲಕ ಮಾತ್ರ ಈ ರೀತಿ ಗೊಂದಲ ಮತ್ತು ಭೀತಿಯಿಂದ ರಾಜ್ಯವನ್ನು ದೂರವಿಡಬಹುದು. ಡಿಜಿಟಲ್ ಪಾವತಿ ಸ್ವೀಕರಿಸುವುದು ಅಪರಾಧವಲ್ಲ ಎಂಬ ಬುದ್ಧಿವಂತ ನಿಲುವು ಕರ್ನಾಟಕದ ಅನೌಪಚಾರಿಕ ವಲಯದ ವಿಶ್ವಾಸವನ್ನು ಮರೆತು ಹೋಗಬಾರದು.
More From GoodReturns

Karnataka Budget 2026: ಸಿದ್ದರಾಮಯ್ಯ ಬಜೆಟ್ ಮಂಡಣೆ ಎಷ್ಟು ಗಂಟೆಗೆ ಆರಂಭ? ಎಲ್ಲಿ ನೋಡಬಹುದು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications