ಕಳೆದ ವರ್ಷ ಸರ್ಕಾರದಿಂದ ಟಾಟಾ ಗ್ರೂಪ್ ಖರೀದಿ ಮಾಡಿದ ಏರ್ಇಂಡಿಯಾದ ಪುನರುಜ್ಜೀವನಕ್ಕಾಗಿ 15,000 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಟಾಟಾ ಗ್ರೂಪ್ ಬ್ಯಾಂಕ್ಗಳೊಂದಿಗೆ ಚರ್ಚೆಯನ್ನು ನಡೆಸುತ್ತಿದೆ.
ವಿಮಾನ ಬಾಡಿಗೆಗಳನ್ನು ಪಾವತಿಸಲು, ಫ್ಲೀಟ್ ಅನ್ನು ನವೀಕರಿಸಲು, ದಿನನಿತ್ಯದ ಕಾರ್ಯಾಚರಣೆಗಳು ಮತ್ತು ನಷ್ಟಗಳನ್ನು ಸರಿದೂಗಿಸಲು ಮತ್ತು ಐಟಿ ಕಾರ್ಯಾಚರಣೆಗಳನ್ನು ಕೂಲಂಕಷವಾಗಿ ಮಾಡಲು ಸಾಲವನ್ನು ಪಡೆದ ಹಣವನ್ನು ಬಳಕೆ ಮಾಡಲು ಟಾಟಾ ಗ್ರೂಪ್ ಚಿಂತನೆ ನಡೆಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಸಾಲವನ್ನು ಸುಮಾರು ಶೇಕಡ 7.5 ಮತ್ತು 8ರ ನಡುವಿನ ಬಡ್ಡಿದರದಲ್ಲಿ ಪಡೆಯಲು ಸಂಸ್ಥೆ ಮುಂದಾಗಿದೆ. ಹಾಗೆಯೇ ಸಾಲವನ್ನು ಮೂರು ವರ್ಷಗಳ ಮರುಪಾವತಿ ಅವಧಿಯ ಮೂಲಕ ಪಡೆಯಲು ಸಂಸ್ಥೆ ನಿರ್ಧಾರ ಮಾಡಿದೆ. ಈ ಬಗ್ಗೆ ಬ್ಯಾಂಕ್ನೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷ ಏರ್ಇಂಡಿಯಾ ಖರೀದಿ
ಟಾಟಾ ಸನ್ಸ್ ತನ್ನ ಅಂಗಸಂಸ್ಥೆ ಟ್ಯಾಲೇಸ್ ಮೂಲಕ ಕಳೆದ ವರ್ಷ ಅಕ್ಟೋಬರ್ನಲ್ಲಿ ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಖರೀದಿ ಮಾಡುವ ಬಿಡ್ ಅನ್ನು ಗೆದ್ದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ 23,000 ಕೋಟಿ ರೂಪಾಯಿಗಳ ಸಾಲವನ್ನು ಇದಕ್ಕಾಗಿ ಪಡೆದುಕೊಂಡಿದೆ. ಹಾಗೆಯೇ ಸುಮಾರು ಶೇಕಡ 4.25 ಬಡ್ಡಿದರಲ್ಲಿ ಒಂದು ವರ್ಷದ ಅವಧಿಗೆ ಸಾಲವನ್ನು ಪಡೆದುಕೊಂಡಿದೆ. ಸಾಲದ ಅವಧಿ ಜನವರಿ ಅಂತ್ಯದಲ್ಲಿ ನವೀಕರಿಸಬೇಕಾಗಿದೆ.
ಇನ್ನು ಬಡ್ಡಿದರಗಳು ಅಧಿಕವಾಗುತ್ತಿದೆ ಹಾಗೂ ದ್ರವ್ಯತೆ ಕೊರತೆಯು ಇದೆ, ಇದರಿಂದಾಗಿ ಸಾಲವು ಇನ್ನಷ್ಟು ದುಬಾರಿಯಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಏರ್ಇಂಡಿಯಾಕ್ಕೆ ಆದ ನಷ್ಟ
ಮಾರ್ಚ್ 2021 ರ ಅಂತ್ಯದ ವೇಳೆಗೆ ಏರ್ ಇಂಡಿಯಾದಿಂದ ಉಂಟಾದ ಒಟ್ಟು ನಷ್ಟವು 83,916 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2022ರಲ್ಲಿ ಹೆಚ್ಚುವರಿ 9,556.5 ಶತಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ.
ಮುಂದಿನ ಐದು ವರ್ಷಗಳಲ್ಲಿ 113 ವಿಮಾನಗಳ ಪ್ರಸ್ತುತ ಫ್ಲೀಟ್ ಅನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಏರ್ಲೈನ್ ಹೊಂದಿದೆ. ಸೆಪ್ಟೆಂಬರ್ನಲ್ಲಿ, ಐದು ಬೋಯಿಂಗ್ ಮತ್ತು 25 ಏರ್ಬಸ್ ವಿಮಾನಗಳನ್ನು ಮುಂದಿನ ಕೆಲವು ವರ್ಷಗಳವರೆಗೆ ಗುತ್ತಿಗೆ ನೀಡಲು ಒಪ್ಪಿಕೊಂಡಿದೆ. ಟಾಟಾ ಗ್ರೂಪ್ ಕೂಡ ಐಟಿ ಕ್ಷೇತ್ರಕ್ಕೂ ಹೂಡಿಕೆ ಮಾಡುತ್ತಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications