ನವದೆಹಲಿ, ಏಪ್ರಿಲ್ 12: ಸ್ಪೇಸ್ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಇದೇ ವೇಳೆ ದೇಶದಲ್ಲಿ ಹೂಡಿಕೆ ಮತ್ತು ಹೊಸ ಕರ್ಖಾನೆ ತೆರೆಯುವ ಯೋಜನೆಗಳ ಕುರಿತು ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಲಿಯನೇರ್ ಮಸ್ಕ್ ಏಪ್ರಿಲ್ 3ನೇ ವಾರದಲ್ಲಿ ಅಥವಾ ಏ.22 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಭೇಟಿ ವೇಳೆ ಭಾರತದ ಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ಘೋಷಣೆ ಮಾಡಲಿದ್ದಾರೆ ಪ್ರವಾಸದ ವಿವರಗಳು ಸದ್ಯ ಗೌಪ್ಯವಾಗಿಡಲಾಗಿದೆ. ಟೆಸ್ಲಾ ಸಿಇಒ ಭೇಟಿಯ ಸಮಯದಲ್ಲಿ ಇತರ ಕಾರ್ಯನಿರ್ವಾಹಕರು ಅವರ ಜೊತೆಯಲ್ಲಿರುತ್ತಾರೆ ಎಂದು ತಿಳಿದುಬಂದಿದೆ.

ಮಸ್ಕ್ ಅವರ ಯೋಜಿತ ಭಾರತ ಭೇಟಿಯ ವಿವರಗಳನ್ನು ರಾಯಿಟರ್ಸ್ ಮೊದಲು ವರದಿ ಮಾಡಿದ್ದುಈ ಬಗ್ಗೆ ಮೋದಿಯವರ ಕಚೇರಿ ಮತ್ತು ಟೆಸ್ಲಾ ಆಗಲಿ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಮಸ್ಕ್ ಅವರ ಭಾರತ ಪ್ರವಾಸದ ವೇಳೆ ಅಂತಿಮ ಅಜೆಂಡಾ ಬದಲಾಗವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕಳೆದ ವರ್ಷದ ಜೂನ್ನಲ್ಲಿ ಮೋದಿ ಅವರು ಅಮೇರಿಕಾದ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದ ವೇಳೆ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ 2024 ರಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಮಾತುಕತೆ ವೇಳೆ ಮಸ್ಕ್ ಪ್ರಕಟಿಸಿದ್ದರು. ಮಾತ್ರವಲ್ಲದೇ ಟೆಸ್ಲಾ ಸಂಸ್ಥೆಯೂ ಉತ್ಪಾದಿಸುತ್ತಿರುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಲು ಭಾರತಕ್ಕೆ ವಿನಂತಿಯನ್ನು ಮಾಡಿದ್ದರು.
ಇನ್ನೊಂದೆಡೆ ಸುಮಾರು $2 ಬಿಲಿಯನ್ ಹೂಡಿಕೆಯ ಅಗತ್ಯವಿರುವ ಉತ್ಪಾದನಾ ಘಟಕದ ಸೈಟ್ಗಳನ್ನು ನೋಡಲು ಟೆಸ್ಲಾ ಅಧಿಕಾರಿಗಳು ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು.
ಭಾರತವು ಕಳೆದ ತಿಂಗಳು ಹೊಸ ಎಲೆಕ್ರ್ಟಿಕ್ ವಾಹನ ನೀತಿಹೆ ಅನುಮೋದನೆ ನೀಡಿದೆ. ದೇಶದಲ್ಲಿ ತಯಾರಕರು ಕನಿಷ್ಠ $500 ಮಿಲಿಯನ್(4150 ಕೋಟಿ ರೂ) ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಕೆಲವು ಮಾದರಿಗಳ ಮೇಲಿನ ಆಮದು ತೆರಿಗೆಗಳನ್ನು 100% ರಿಂದ 15% ಕ್ಕೆ ಇಳಿಸಲಿದೆ. ಇದು ಭಾರತದ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಟೆಸ್ಲಾಗೆ ಇದು ವರದಾನವಾಗಲಿದೆ.
ಈ ವಾರ X ನಲ್ಲಿ ಮಸ್ಕ್ ಪೋಸ್ಟ್ ಮಾಡಿ "ಪ್ರತಿಯೊಂದು ದೇಶವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವಂತೆ ಭಾರತವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರಬೇಕು. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವುದು ಸಹಜ ಪ್ರಗತಿಯಾಗಿದೆ" ಎಂದು ಹೇಳಿದ್ದರು. ಬುಧವಾರ ಮಾಡಿರುವ X ನಲ್ಲಿ "ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ!" ಎಂದು ಹೇಳಿದ್ದಾರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications