ಸಾಲದ ಹಣದಲ್ಲಿ ₹75,000 ಕೋಟಿ ಮೌಲ್ಯದ ಬೃಹತ್ ಸಂಸ್ಥೆ ಕಟ್ಟಿದ ಬಟ್ಟೆ ವ್ಯಾಪಾರಿಯ ಮಗ

ಒಂದು ಸಣ್ಣ ಆರಂಭದಿಂದ ಇಂದು ಭಾರತದ ಅತಿ ದೊಡ್ಡ ಆಭರಣ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ವ್ಯಕ್ತಿಯೊಬ್ಬರ ಯಶಸ್ಸಿನ ಕಥೆ ಪ್ರತಿಯೊಬ್ಬ ಕನಸುಗಾರನಿಗೆ ಪ್ರೇರಣೆಯಾಗಿದೆ. ಅಂದಹಾಗೆ ಇವತ್ತಿನ ಕಥಾನಾಯಕನ ಅಜ್ಜ ದೇವಸ್ಥಾನವೊಂದರಲ್ಲಿಅರ್ಚಕರಾಗಿದ್ದರು. ತಂದೆ ಪುಟ್ಟ ಬಟ್ಟೆ ಅಂಗಡಿಯನ್ನಿಟ್ಟುಕೊಂಡಿದ್ದರು. ಉದ್ಯಮಿಯಾಗಬೇಕೆಂಬ ಕನಸು ಹೊತ್ತು ಆರಂಭಿಸಿ ಆ ಕನಸು ನನಸಾಗಿ ಪ್ರಸ್ತುತ 75,000 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.

ಕೇರಳದ ಗಲ್ಲಿಯಲ್ಲಿ ಪ್ರಾರಂಭವಾದ ಆ ಕನಸಿನ ಬೀಜ ಭಾರತದಾದ್ಯಂತ 250 ಕಡೆ ಮೊಳಕೆಯೊಡೆದು ಬೃಹತ್ ಮರವಾಗಿ ಬೆಳೆದು ನಿಂತಿದೆ. ಯುಎಇ, ಕತಾರ್, ಕುವೈತ್ ಮತ್ತು ಒಮಾನ್‌ನಲ್ಲಿ 30 ಶೋರೂಮ್‌ಗಳನ್ನು ಹೊಂದಿದೆ. ಸದ್ಯ ಇವರ ವ್ಯವಹಾರ ದೃಷ್ಟಿಯು ಅಮೇರಿಕಾ ಕಡೆ ನೆಟ್ಟಿದೆ. ಇವರೇ ಟಿಎಸ್ ಕಲ್ಯಾಣರಾಮನ್. ಇವರ ಯಶೋಗಾಥೆಯ ಬಗ್ಗೆ ತಿಳಿದುಕೊಳ್ಳೋಣ.

ಸಾಲದ ಹಣದಲ್ಲಿ ಬೃಹತ್ ಸಂಸ್ಥೆ ಕಟ್ಟಿದ ಬಟ್ಟೆ ಬಟ್ಟೆ ವ್ಯಾಪಾರಿ ಮಗ

ಕಲ್ಯಾಣ್ ಜ್ಯುವೆಲರ್ಸ್‌ನ ಸಂಸ್ಥಾಪಕರಾದ ಟಿ.ಎಸ್.ಕಲ್ಯಾಣರಾಮನ್ ಅವರು ಉದ್ಯಮಶೀಲತೆಯ ಮನೋಭಾವ ಮತ್ತು ಪರಿಶ್ರಮದ ಜ್ವಲಂತ ಉದಾಹರಣೆಯಾಗಿದ್ದಾರೆ. ಧಾರ್ಮಿಕ ಮತ್ತು ವಾಣಿಜ್ಯ ಬೇರುಗಳನ್ನು ಹೊಂದಿರುವ ಕುಟುಂಬದಿಂದ ಬಂದ ಕಲ್ಯಾಣರಾಮನ್ ಅವರು ಭಾರತ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯವನ್ನು ಗೆದ್ದುಕೊಂಡು ಆಭರಣ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.

ಉದ್ಯಮ ಪ್ರಯಾಣ ಸಾಗಿದ್ದು ಹೀಗೆ: ಕಲ್ಯಾಣರಾಮನ್ ಅವರ ಉದ್ಯಮ ಪ್ರಯಾಣವು ಕೇರಳದ ತ್ರಿಶೂರ್‌ನಲ್ಲಿ ಪ್ರಾರಂಭವಾಯಿತು. ಇಲ್ಲಿ ಅಜ್ಜ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರೆ ಅವರ ತಂದೆ ಬಟ್ಟೆ ವ್ಯಾಪಾರವನ್ನು ನಡೆಸುತ್ತಿದ್ದರು. ಕಲ್ಯಾಣರಾಮನ್ ಆಗಾಗ್ಗೆ ಸ್ಥಳೀಯ ದೇವಸ್ಥಾನದಲ್ಲಿ ಪೂಜೆ ಮಾಡಲು ತಮ್ಮ ತಂದೆ ಟಿಆರ್ ಸೀತಾರಾಮಯ್ಯರ್ ಅವರೊಂದಿಗೆ ಹೋಗುತ್ತಿದ್ದರು.

ಸೀತಾರಾಮಯ್ಯರ್ ಅವರು ಪುರೋಹಿತರಾಗಿದ್ದ ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ ಬಟ್ಟೆ ಅಂಗಡಿಯನ್ನು ತೆರೆದರು. ಶೀಘ್ರದಲ್ಲೇ, ಅವರ ವ್ಯಾಪಾರವು ಪ್ರವರ್ಧಮಾನಕ್ಕೆ ಬಂತು. ಮುಂದೆ ತ್ರಿಶೂರ್ ನಲ್ಲಿ ಇವರು ಜವಳಿ ಕಾರ್ಖಾನೆಯನ್ನು ಪ್ರಾರಂಭಿಸಿದರು. ಅವರು ಕೇರಳದಾದ್ಯಂತ ಹಲವಾರು ಸಣ್ಣ ಶೋರೂಂಗಳನ್ನು ತೆರೆದರು. ಆದರೆ ರಾಜ್ಯ ಸರ್ಕಾರವು ಅವರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಂಡಿತು.

1947ರ ಏಪ್ರಿಲ್ 23ರಂದು ಜನಿಸಿದ ಕಲ್ಯಾಣರಾಮನ್ ಅವರು 12ನೇ ವಯಸ್ಸಿನಲ್ಲಿ ಅವರು ಕುಟುಂಬದ ವ್ಯವಹಾರದಲ್ಲಿ ತಂದೆ ಸೀತಾರಾಮಯ್ಯಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಮುಂದೆ ಅವರು ಶ್ರೀ ಕೇರಳ ವರ್ಮ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ತಂದೆ ಸಾಗಿದ ಮಾರ್ಗದಲ್ಲೇ ಸಾಗಿದ ಕಲ್ಯಾಣರಾಮನ್ ಕಲ್ಯಾಣರಾಮನ್ ಕೂಡ ತಂದೆಯ ಆಸೆಗೆ ವಿರುದ್ಧವಾಗಿ ಚಿನ್ನಾಭರಣ ಅಂಗಡಿ ತೆರೆಯಲು ಮುಂದಾದರು. ತ್ರಿಶೂರ್‌ನಲ್ಲಿರುವ ಕುಟುಂಬದ ಬಟ್ಟೆ ಶೋರೂಮ್ ಆಭರಣ ಅಂಗಡಿಗಳಿಂದ ಸುತ್ತುವರೆದಿತ್ತು, ಇದು ಅವರಿಗೆ ಸ್ಫೂರ್ತಿ ನೀಡಿತು. ಇದರ ಜೊತೆಗೆ ಕಲ್ಯಾಣರಾಮನ್ ಗ್ರಾಹಕರಿಗೆ ಆಯ್ಕೆಗಳ ಕೊರತೆ ಮತ್ತು ಪಾರದರ್ಶಕತೆಯನ್ನು ಗಮನಿಸಿ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದರು. 1996 ರಲ್ಲಿ ಕಲ್ಯಾಣರಾಮನ್ ತ್ರಿಶೂರ್‌ನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಅಂಗಡಿ ಪ್ರಾರಂಭಿಸಿದರು.

ಕಲ್ಯಾಣರಾಮನ್ ಅವರು ತಮ್ಮ ಉಳಿತಾಯದ 25 ಲಕ್ಷ ರೂಪಾಯಿಗಳನ್ನು ಆಭರಣ ಮಳಿಗೆ ತೆರೆಯಲು ಹಾಕಿದರು. ಆದರೆ ಆ ಮೊತ್ತ ಸಾಕಾಗದೇ 50 ಲಕ್ಷ ಸಾಲ ಮಾಡಿಕೊಂಡಿದ್ದರು. ತ್ರಿಶೂರ್ ನಲ್ಲಿ ಮೊದಲ ಶೋರೂಂ ತೆರೆದು ಅದಕ್ಕೆ ಕಲ್ಯಾಣ್ ಜ್ಯುವೆಲರ್ಸ್ ಎಂದು ಹೆಸರಿಟ್ಟರು. ಗ್ರಾಹಕರಿಗಾಗಿ ಹಲವಾರು ಆಭರಣ ಆಯ್ಕೆಗಲನ್ನು ಇಲ್ಲಿ ನೀಡಿದರು. ಈ ಪ್ರದೇಶದ ಇತರ ಅಂಗಡಿಗಳಿಗಿಂತ ಅವರ ಅಂಗಡಿಯು ಗಾತ್ರದಲ್ಲಿ ದೊಡ್ಡದಾಗಿತ್ತು. ಹೊಸ ಶೋರೂಂ ಗ್ರಾಹಕರಿಗೆ ವಿಶಿಷ್ಟವಾದ ಶಾಪಿಂಗ್ ಅನುಭವವನ್ನು ಒದಗಿಸಿತು ಮತ್ತು ಇದು ಕಲ್ಯಾಣ್ ಜ್ಯುವೆಲರ್ಸ್‌ನ ಯಶಸ್ಸಿಗೆ ನಾಂದಿ ಹಾಡಿತು. ಮೊದಲ ಅಂಗಡಿಯಲ್ಲಿ ಯಶಸ್ಸನ್ನು ಪಡೆದ ನಂತರ, ಕಲ್ಯಾಣರಾಮನ್ ಪಾಲಕ್ಕಾಡ್‌ನಲ್ಲಿ ಎರಡನೇ ಶೋರೂಮ್ ಅನ್ನು ತೆರೆದರು.

ನಿವ್ವಳ ಮೌಲ್ಯ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸುವ ಫೋರ್ಬ್ಸ್‌ನ ಪ್ರಕಾರ, ಕಲ್ಯಾಣರಾಮನ್ ಅವರ ನಿವ್ವಳ ಮೌಲ್ಯ 4,5397 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಲ್ಯಾಣರಾಮನ್ ಅವರ ಪ್ರಯಾಣವು ಅದರ ಸವಾಲುಗಳಿಲ್ಲದೆ ಇರಲಿಲ್ಲ, ಆದರೆ ಅವರ ಅಚಲ ದೃಢತೆ ಮತ್ತು ಸ್ಥೈರ್ಯವು ಅಡೆತಡೆಗಳನ್ನು ನಿವಾರಿಸಲು ಮತ್ತು ಯಶಸ್ವಿ ವ್ಯಾಪಾರವನ್ನು ನಿರ್ಮಿಸಲು ಸಹಾಯ ಮಾಡಿತು. ಒಟ್ಟಾರೆ ಟಿಎಸ್ ಕಲ್ಯಾಣರಾಮನ್ ಅವರ ಸ್ಪೂರ್ತಿದಾಯಕ ಕಥೆಯು ಉದ್ಯಮಶೀಲತೆಯ ಶಕ್ತಿ ಮತ್ತು ಭಾರತೀಯ ಕನಸಿಗೆ ಸಾಕ್ಷಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+