ಬೆಂಗಳೂರು, ಜುಲೈ 18: ಬಜೆಟ್ ಮಂಡನೆಯಾಗುತ್ತದೆ ಎನ್ನುವಾಗ ಎಲ್ಲ ವರ್ಗದವರ ನಿರೀಕ್ಷೆ ಸಹ ಹೆಚ್ಚಾಗುತ್ತದೆ. ಈ ಬಾರಿಯ ಬಜೆಟ್ ಮೇಲೆ ಸ್ವಯಂ ಉದ್ಯೋಗಿಗಳ ನಿರೀಕ್ಷೆ ಸಹ ಹೆಚ್ಚಾಗಿದೆ. ಸ್ವಯಂ ಉದ್ಯೋಗಿಗಳು ಸಾಲ ಪಡೆಯಲು ಇರುವ ನಿಯಮದಲ್ಲಿ ಮಹತ್ವದ ಬದಲಾವಣೆಯಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ಹಪ್ಪಳ-ಸಂಡಿಗೆ ತಯಾರಿಸಿ ಮಾರಾಟ ಮಾಡುವವರು, ಬೊಂಬೆ ತಯಾರಕರು. ದರ್ಜಿಗಳು, ಸಣ್ಣ ಹೂಡಿಕೆಯ ವ್ಯಾಪರಿಗಳು, ಸ್ಥಳೀಯ ದಿನಸಿ ಅಥವಾ ಸ್ಟೇಷನರಿ ಅಂಗಡಿಗಳು, ಗಾರ್ಮೆಂಟ್, ನೈರ್ಮಲ್ಯ, ಪೀಠೋಪಕರಣಗಳು, ಮಸಾಲೆ ಮತ್ತು ಹಾರ್ಡ್ವೇರ್ ವ್ಯಾಪಾರ, ಬೇಕರಿ ಮಾಲೀಕರು, ಇಟ್ಟಿಗೆ ತಯಾರಿಕೆ, ಕೈಯಿಂದ ಮೇಣದಬತ್ತಿ ತಯರಾರಿಕೆ, ಸಾಬೂನುಗಳು ಮತ್ತು ಚಾಕೊಲೇಟ್ ತಯಾರಿಕೆ, ತೆಂಗಿನ ಎಣ್ಣೆ ಉತ್ಪಾದಕರು, ಆಟೋಮೊಬೈಲ್ ತಯಾರಿಕೆ, ಹೇರ್ ಕಟಿಂಗ್, ಫ್ಯಾಶನ್ ಡಿಸೈನಿಂಗ್, ವೆಡ್ಡಿಂಗ್ ಫೋಟೊಗ್ರಫಿ, ಇಂಟೀರಿಯರ್ ಡೆಕೊರೇಶನ್ ಮತ್ತು ಮೋಟಾರ್ ರಿಪೇರಿ, ಸಣ್ಣ ಗುತ್ತಿಗೆದಾರರು, ಸ್ವತಂತ್ರ ಬರವಣಿಗೆ ಮತ್ತು ಕಾಪಿರೈಟಿಂಗ್ ಕೆಲಸ ಮಾಡುವವರು, ಗ್ರಾಫಿಕ್ ವಿನ್ಯಾಸ ಮಾಡುವವರು, ಛಾಯಾಗ್ರಹಣದಲ್ಲಿ ನಿರತರಾದವರು, ಆನ್ಲೈನ್ ಬೋಧಕರು, ಶಿಶುಪಾಲನಾ ಸೇವೆ ನೀಡುವವರು, ಈವೆಂಟ್ ಮ್ಯಾನೆಜ್ ಮೆಂಟ್ ಮಾಡುವವರು, ಕ್ಯಾಟರಿಂಗ್ ಮಾಡುವವರು. ಈ ರೀತಿ ನೂರಾರು ವರ್ಗದ ಜನರು ಬಜೆಟ್ ಮೇಲೆ ತಮ್ಮ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಈ ವರ್ಗದವರು ತುಂಬಾ ಸವಾಲುಗಳನ್ನು ಎದುರಿಸಿದ್ದಾರೆ. ನಿಧಾನಕ್ಕೆ ಚೇತರಿಸಿಕೊಂಡಿದ್ದರೂ ಹಳೆಯ ದಿನಗಳಿಗೆ ಮರಳಲು ಸಾಧ್ಯವಾಗಿಲ್ಲ.

ಇವರಿಗೆಲ್ಲ ಬೃಹತ್ ಮೊತ್ತದ ಬಂಡವಾಳ ಒಂದೇ ಬಾರಿಗೆ ಹೊಂದಿಸುವುದು ದೊಡ್ಡ ಸವಾಲಾಗಿದೆ. ಸಾಲ ಕೇಳಲು ಬ್ಯಾಂಕ್ ಬಳಿ ಹೋದರೆ ಮೇಲಾಧಾರವಾಗಿ ಏನನ್ನು ನೀಡುತ್ತೀರಿ ಎನ್ನುವ ಪ್ರಶ್ನೆ ಎದುರಾಗುತ್ತದೆ. ಗುತ್ತಿಗೆ ಆಧಾರದಲ್ಲಿ ಯಾರ ಬಳಿಯಿಂದಾದರೂ ಕೆಲಸ ಪಡೆದುಕೊಂಡು ಬಂದರೆ ಎಲ್ಲವನ್ನು ಪೂರೈಸುವ ತನಕ ಲಾಭ ಎಂದು ಏನೂ ಉಳಿಯುತ್ತಿಲ್ಲ. ಇಂಥ ವರ್ಗದವರೆಲ್ಲ ಈ ಬಜೆಟ್ ನಲ್ಲಿ ಸಮರ್ಪಕ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಕಚ್ಚಾ ಸರಕು ಮಾರುಕಟ್ಟೆ:
ಈ ರೀತಿಯ ಕೆಲಸ ಮಾಡಿಕೊಂಡು ಬಂದವರಿಗೆ ಸರಿಯಾದ ಬೆಲೆಯಲ್ಲಿ ಕಚ್ಚಾ ಸರಕು ಸಿಗಲು ಬಗಜೆಟ್ ನಲ್ಲಿ ಏನಾದರೂ ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ. ಹತ್ತಿ, ಲೋಹ, ಬಟ್ಟೆ, ಸಂಬಂಧಿಸಿದ ಆಹಾರ ಸಾಮಗ್ರಿಗಳು ಕಡಿಮೆ ದರದಲ್ಲಿ ಸಿಗುವಂತಹ ಕೆಲಸ ಆಗಬೇಕಿದೆ. ಸ್ವಯಂ ಉದ್ಯೋಗ ಮಾಡಿಕೊಂಡು ಬಂದಿದ್ದಾರೆ ಎಂದರೆ ಅಂಥವರನ್ನು ಗುರುತಿಸಿ ಸರ್ಕಾರವೇ ನಿಗಮಗತಳ ಮೂಲಕ ಕಚ್ಚಾ ವಸ್ತು ಪೂರೈಕೆ ಮಾಡುವಂತಹ ವ್ಯವಸ್ಥೆ ನಿರ್ಮಾಣವಾದರೆ ಒಳಿತು.
ಸುಲಭ ಸಾಲ ಸಿಗಬೇಕಿದೆ:
ಬಂಡವಾಳ ಸಂಗ್ರಹಣೆಗೆ ಈ ಸ್ವಯಂ ಉದ್ಯೋಗಿಗಳು ಹರಸಾಹಸ ಮಾಡಬೇಕಿದ್ದು ಅದಕ್ಕೆ ಒಂದು ಸಮರ್ಪಕ ಪರಿಹಾರ ಸಿಗಬೇಕಿದೆ. ಇಂಥವರಿಗೆ ಮನೆ ಕಟ್ಟುವ ಕನಸಿದ್ದರೂ ಹೋಂ ಲೋನ್ ಸಹ ಸುಲಭಕ್ಕೆ ಸಿಗುವುದಿಲ್ಲ. ರೆಗ್ಯೂಲರ್ ಇನ್ ಕಂ ಇಲ್ಲ. ರೆಗ್ಯೂಲರ್ ಜಾಬ್ ಇಲ್ಲ ಎನ್ನುವ ಕಾರಣ ನೀಡಿ ಅಂಥವರನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ.
ಸಾಮಾನ್ಯವಾಗಿ ಬ್ಯಾಂಕ್ಗಳು ಅಥವಾ NBFCಗಳು ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡ್ತವೆ. ಆದ್ದರಿಂದ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅರ್ಜಿ ಸಲ್ಲಿಕೆ ಮಾಡುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ. ಸ್ಯಾಲರಿ ಪಡೆಯುವ ವ್ಯಕ್ತಿಗಿಂತ ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ ಕಡಿಮೆ ಇರೋ ಕಾರಣಕ್ಕೆ ಹೋಂ ಲೋನ್ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ.
ಸ್ವಯಂ ಉದ್ಯೋಗಿಗಳಿಗೆ ಸುಲಭದಲ್ಲಿ ಕಚ್ಚಾ ವಸ್ತು ಸಿಗುವಂತೆ ಮಾಡುವುದು, ಅವರು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಮನೆ ಕಟ್ಟುವ ಕನಸಿದ್ದರೆ ಸುಲಭ ಮಾನದಂಡ ಇಟ್ಟುಕೊಂಡು ಹೋಂ ಲೋನ್ ನೀಡಿಕೆ. ಈ ರೀತಿಯ ವಿಚಾರಗಳಿಗೆ ಈ ಬಜೆಟ್ ನಲ್ಲಿ ಪರಿಹಾರ ಸಿಗುತ್ತದೆಯಾ ಕಾದು ನೋಡಬೇಕಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications