ನವದೆಹಲಿ, ಮಾರ್ಚ್ 7: ಬಹಳಷ್ಟು ಯುವಕರು ತಮ್ಮದೇ ಆದ ಉದ್ಯಮ ಹುಟ್ಟುಹಾಕಲು ಬಯಸುತ್ತಾರೆ. ಇದೇ ರೀತಿ ಕನಸು ಕಂಡವರು ಗೌರವ್ ಮುಂಜಾಲ್. ದೂರದೃಷ್ಟಿಯುಳ್ಳ ಗೌರವ್ ಓರ್ವ ಶಿಕ್ಷಣತಜ್ಞ ಮತ್ತು ವಾಣಿಜ್ಯೋದ್ಯಮಿ.
ಗೌರವ್ ಅವರ ನವೀನ ಯೋಚನೆ ಮತ್ತು ತಂತ್ರಜ್ಞಾನದ ಪ್ರೀತಿಯು ಎಜ್ಯು- ಟೆಕ್ (ed-tech) ಪ್ಲಾಟ್ ಆಗಿರುವ "ಅನಾಕಾಡೆಮಿ"ಯನ್ನು ಪ್ರಾರಂಭಿಸಲು ಸಹಾಯ ಮಾಡಿತು. ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಲು ಕನಸು ಕಾಣುತ್ತಿದ್ದ ಗೌರವ್ ತನ್ನ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ 'ಫ್ಲಾಟ್ಚಾಟ್ ' ಅನ್ನು ಸ್ಥಾಪಿಸಿದರು.

ಇದೇ ವೇಳೆ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿ "ಡೈರೆಕ್ಟಿ"ಯಲ್ಲಿ ಕೆಲಸ ಮಾಡುತ್ತಿದ್ದರು. ಡೈರೆಕ್ಟಿ ಮತ್ತು ಫ್ಲಾಟ್ಚಾಟ್ ಎರಡರಲ್ಲೂ ಕೆಲಸ ಮಾಡುತ್ತಿದ್ದಂತೆಯೇ ಗೌರವ್ ಅನಾಕಾಡೆಮಿ ಯೂಟ್ಯೂಬ್ ಚಾನೆಲ್ ಆರಂಭಿಸಿ ವೀಡಿಯೊಗಳನ್ನು ಅಪ್ಲೋಡ್ ಮಾಡಲಾರಂಭಿಸಿದರು. ಅವರು ಈ ವಿಡಿಯೋಗಳನ್ನು ತಮ್ಮ ಸ್ನೇಹಿತರಿಗೆ ತೋರಿಸಿದ್ದು, ಅವರ ಸ್ನೇಹಿತರು, ಪರಿಚಯದವರು ಅವರ ಪ್ರಯತ್ನಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು.
ಕೆಲವು ವರ್ಷಗಳ ಕಾಲ ತನ್ನ ಸ್ನೇಹಿತರಾಗಿದ್ದ ರೋಮನ್ ಸೈನಿಯೊಂದಿಗೆ ಕೆಲಸ ಮಾಡಿದ ನಂತರ ಗೌರವ್ ಅವರು ಯೂಟ್ಯೂಬ್ ಚಾನೆಲ್ ಅನ್ನು ಶೈಕ್ಷಣಿಕ ವೇದಿಕೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. 2015 ರಲ್ಲಿ, ಹೇಮೇಶ್ ಸಿಂಗ್, ರೋಮನ್ ಸೈನಿ ಮತ್ತು ಸಚಿನ್ ಗುಪ್ತಾ ಅವರ ಜೊತೆ ಸೇರಿಕೊಂಡು ಗೌರವ್ ಅವರು "ಅನಾಕಾಡೆಮಿ" ಯನ್ನು ಸಹ-ಸ್ಥಾಪಿಸಿದರು ಈ ವೇದಿಕೆ ಮೂಲಕ ಅವರು UPSC, NEET, JEE ಮತ್ತು ಗೇಟ್ನಂತಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅತ್ಯುತ್ತಮ ವಿಷಯಗಳ ಮಾಹಿತಿಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.
1991 ರಲ್ಲಿ ಭಾರತದ ಮುಂಬೈನಲ್ಲಿ ಜನಿಸಿದ ಗೌರವ್ ಮುಂಜಾಲ್, NMIMS ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆಯುವ ಮೊದಲು ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ವ್ಯಾಸಂಗ ಮಾಡಿದರು. 12 ನೇ ತರಗತಿಯಲ್ಲಿ, ಅವರು ಕೋಡಿಂಗ್ ಕಲಿಕೆ ಆರಂಭಿಸಿದರು. ಜಾವಾ ಪ್ರೋಗ್ರಾಮಿಂಗ್ ಮತ್ತು ಇತರ ತಾಂತ್ರಿಕ ವಿಷಯಗಳಲ್ಲಿ ಬಗ್ಗೆ ಇತರರಿಗೆ ಮಾಹಿತಿ ಹಂಚಿಕೊಳ್ಳಲು ತಮ್ಮ ಮೊದಲ ಯೂಟ್ಯೂಬ್ ಚಾನೆಲ್ "ಅನಾಕಾಡೆಮಿ"ಯನ್ನು ರಚಿಸಿದರು. ಈ ಯೂಟ್ಯೂಬ್ ಚಾನೆಲ್ ವಿದ್ಯಾರ್ಥಿಗಳ ಸಮುದಾಯದಲ್ಲಿ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು.
ಕ್ಷಿಪ್ರ ಬೆಳವಣಿಗೆಯೊಂದಿಗೆ, ಅನಾಕಾಡೆಮಿಯು ತಿಂಗಳುಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಬೋಧಕರು, ಶಿಕ್ಷಕರು, ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಅವರು 2022 ರಲ್ಲಿ ಅನಾಕಾಡೆಮಿ ಸಿಇಒ ಮುಂಜಾಲ್ ಅವರಿಗೆ 1.58 ಕೋಟಿ ರೂ. ಸಂಭಾವನೆ ಇದ್ದು ಅನಾಕಾಡೆಮಿಯ ಮೌಲ್ಯ 28000 ಕೋಟಿ ರೂ. ಹೆಚ್ಚಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications