Karnataka Menstrual Leave: ರಾಜ್ಯ ಸರ್ಕಾರದ ಋತುಚಕ್ರದ ರಜಾ ಆದೇಶಕ್ಕೆ ಸಂಕಷ್ಟ! ಹೈಕೋರ್ಟ್‌ನಿಂದ ತಡೆ

ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದ ಮಹಿಳೆಯರ ಅನುಕೂಲಕ್ಕಾಗಿ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ (Karnataka Menstrual Leave) ನೀಡುವ ಸೌಲಭ್ಯವನ್ನು ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸಂಕಷ್ಟ ಎದುರಾಗಿದ್ದು, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ, ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ (Highcourt) ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಋತುಚಕ್ರದ ರಜಾ ಆದೇಶಕ್ಕೆ ಸಂಕಷ್ಟ! ಕಾರಣವೇನು?

ಋತುಚಕ್ರದ ರಜೆಗೆ ಸಂಕಷ್ಟ!
ರಾಜ್ಯ ಸರ್ಕಾರ ನವೆಂಬರ್‌ 12, 2025 ರಂದು ರಾಜ್ಯದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆಯನ್ನು ಕಡ್ಡಾಯಗೊಳಿಸುವ ಆದೇಶ ಹೊರಡಿಸಿತ್ತು. ಇದೀಗ ಕಾರ್ಮಿಕ ಇಲಾಖೆ 2025ರ ಹೊರಡಿಸಿರುವ ಆದೇಶವನ್ನು ರದ್ದು ಪಡಿಸುವಂತೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್‌ ನ್ಯಾಯಾಧೀಶೆ ಜ್ಯೋತಿ ಮುಲಿಮನೆ ಮಹತ್ವದ ಆದೇಶ ನೀಡಿದ್ದು, ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ ಋತುಚಕ್ರದ ರಜಾ ಆದೇಶಕ್ಕೆ ತಡೆ ನೀಡಿದೆ.

ಹೋಟೆಲ್‌ ಮಾಲೀಕರ ಸಂಘದಿಂದ ಅರ್ಜಿ!
ರಾಜ್ಯ ಸರ್ಕಾರದ ಋತುಚಕ್ರದ ರಜಾ ಆದೇಶ ಖಾಸಗಿ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು, ವಿರೋಧವೂ ವ್ಯಕ್ತವಾಗಿತ್ತು. ಹೋಟೆಲ್‌ ಮಾಲೀಕರ ಸಂಘದ ಪರವಾಗಿ ವಕೀಲರಾದ ಪ್ರಶಾಂತ್‌ ಬಿ.ಕೆ ವಾದ ಮಂಡನೆ ಮಂಡಿಸಿದ್ರು, ಇದೀಗ ಕೊನೆಗೂ ಹೋಟೆಲ್‌ ಮಾಲೀಕರ ಸಂಘ ಜಯಗಳಿಸಿದೆ.

ಸರ್ಕಾರದ ಆದೇಶ ಏನು?
ಕರ್ನಾಟಕದಲ್ಲಿ ಕಾರ್ಖಾನೆಗಳ ಕಾಯ್ದೆ 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961, ತೋಟ ಕಾರ್ಮಿಕರ ಕಾಯ್ದೆ 1951, ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961, ಬೀಡಿ ಮತ್ತು ಸಿಗಾರ್‌ ಕಾರ್ಮಿಕರ ಕಾಯ್ದೆ 1966 ರ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೈಗಾರಿಕೆ ಮತ್ತು ಕಂಪನಿಗಳಲ್ಲಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ-ಗುತ್ತಿಗೆ ಮಹಿಳಾ ಉದ್ಯೋಗಿಗಳೀಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಉದ್ಯೋಗದಲ್ಲಿ ಬೆಂಬಕ ನೀಡುವ ಉದ್ದೇಶದಿಂದ ತಿಂಗಳಿಗೆ ವೇತನ ಸಹಿತ ಋತುಚಕ್ರದ ರಜೆ ನೀಡುವಂತೆ ಘೋಷಿಸಲಾಗಿತ್ತು. ಅಂದರೆ ವಾರ್ಷಿಕವಾಗಿ 12 ರಜೆಗಳನ್ನು ವೇತನ ಸಹಿತ ಮಹಿಳೆಯರಿಗೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೋಟೆಲ್‌ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇನ್ನು ಹೋಟೆಲ್‌ ಅಸೋಸಿಯೇಷನ್‌ ಪರ ವಕೀಲರಾದ ಪ್ರಶಾಂತ್‌ ಬಿ.ಕೆ ವಾದ ಮಂಡಿಸಿದರು. ಈ ವೇಳೆ ವಾದ ಆಲಿಸಿದ ನ್ಯಾಯಧೀಶೆ ಜ್ಯೋತಿ ಮೂಲಿಮನಿ, ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಕಾಯ್ದೆಯಲ್ಲಿಲ್ಲದ ನಿಯಮವನ್ನು ಸರ್ಕಾರ ಆದೇ ನೀಡಿದೆ. ಸರ್ಕಾರದ ಏಕಪಕ್ಷೀಯ ಆದೇಶದಿಂದ ಹೋಟೆಲ್‌ಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೋಟೆಲ್‌ ಅಸೋಸಿಯೇಷನ್‌ ಪರ ವಕೀಲರು ವಾದ ಮಾಡಿದರು. ಈ ವೇಳೆ ಹೈಕೋರ್ಟ್‌, ಆದೇಶಕ್ಕ ಮುನ್ನ ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತೇ ಎಂದು ಪ್ರಶ್ನೆ ಹಾಕಿದಗ, ಅಸೋಸಿಯೇಷನ್‌ ಪರ ವಕೀಲರು "ಇಲ್ಲ" ಎಂಬ ಉತ್ತರ ನೀಡಿದ್ದಾರೆ. ಮುಂದಿನ ವಿಚಾರಣೆಯವರೆಗೆ ಆದೇಶದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+