ಕೇಂದ್ರ ಹಣಕಾಸು ಸಚಿವಾಲಯ 2027-28ನೇ ಸಾಲಿನ ಬಜೆಟ್ ಸಿದ್ಧತೆಗೆ ಚಾಲನೆ ನೀಡಿದೆ. ಒಳಗೊಳ್ಳುವ ಬಜೆಟ್ ರೂಪಿಸುವ ದೃಷ್ಟಿಯಿಂದ, ನಾಗರಿಕರಿಂದ ಪ್ರಮುಖ ಕ್ಷೇತ್ರ ಮತ್ತು ನೀತಿಗಳ ಕುರಿತು ಸಲಹೆಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಅಭಿವೃದ್ಧಿ ವಿಚಾರಗಳನ್ನು ಹಂಚಿಕೊಳ್ಳುವಂತೆ ಜನರಿಗೆ ಕರೆ ನೀಡಲಾಗಿದೆ. ಮೈಗವ್ ವೆಬ್ಸೈಟ್ ಮೂಲಕ ತಮ್ಮ ಅಭಿಪ್ರಾಯ ಸಲ್ಲಿಸಿ, ಹಣಕಾಸು ಯೋಜನೆಗಳಲ್ಲಿ ನೇರ ಪಾತ್ರ ವಹಿಸಬಹುದು ಎಂದು 'X' (ಹಿಂದಿನ ಟ್ವಿಟ್ಟರ್) ನಲ್ಲಿ MyGovIndia ಪೋಸ್ಟ್ ಹೇಳಿದೆ.

ಬಜೆಟ್ ಮಂಡನೆಗೆ ಮುನ್ನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪೂರ್ವ-ಬಜೆಟ್ ಸಮಾಲೋಚನೆ ನಡೆಸಿದರು. ದೇಶದ ಆರ್ಥಿಕ ಅಗತ್ಯ ಮತ್ತು ಆದ್ಯತೆಗಳ ದೃಷ್ಟಿಕೋನ ಪಡೆಯಲು, ಅವರು ಅರ್ಥಶಾಸ್ತ್ರಜ್ಞರು, ರೈತ ಸಂಘಟನೆಗಳು ಹಾಗೂ ಕೃಷಿ ತಜ್ಞರೊಂದಿಗೆ ಮಾತುಕತೆ ನಡೆಸಿದರು. ಕೇಂದ್ರ ಬಜೆಟ್ ಹೆಚ್ಚು ಗಮನ ಸೆಳೆದರೂ, ಭಾರತೀಯ ರೈಲ್ವೇಗೆ ಮಾಡುವ ಹಂಚಿಕೆಗಳು ಸದಾ ಸೂಕ್ಷ್ಮವಾಗಿ ಗಮನಿಸಲ್ಪಡುತ್ತವೆ.
ರೈಲ್ವೆ ಬಜೆಟ್ ವಿಲೀನ: ಹಿನ್ನೆಲೆ
2016ರಲ್ಲಿ, ಸರ್ಕಾರವು ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತು. ನೀತಿ ಆಯೋಗದ ಬಿಬೇಕ್ ಡೆಬರಾಯ್ ನೇತೃತ್ವದ ಸಮಿತಿಯ ಶಿಫಾರಸ್ಸಿನ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದು ದೇಶದ ಹಣಕಾಸು ನಿರ್ವಹಣೆಯನ್ನು ಸರಳವಾಗಿಸುತ್ತದೆ ಎಂಬುದು ಸಮಿತಿ ಅಭಿಪ್ರಾಯಪಟ್ಟಿತ್ತು. 'ರೈಲ್ವೆ ಬಜೆಟ್ನಿಂದ ಮುಕ್ತವಾಗುವುದು’ ಎಂಬ ಶ್ವೇತಪತ್ರವು ವಿಲೀನಕ್ಕೆ ಬೆಂಬಲ ನೀಡಿ, ರೈಲ್ವೆಯನ್ನು ಪ್ರತ್ಯೇಕ ಹಣಕಾಸು ದ್ವೀಪದಂತೆ ನೋಡುವ ಸಮಯ ಮುಗಿದಿದೆ ಎಂದು ಹೇಳಿತು.
ವಿಲೀನದ ನಂತರವೂ, ಭಾರತೀಯ ರೈಲ್ವೇ ಒಂದು ವ್ಯವಹಾರದಂತೆ ಕಾರ್ಯಾಚರಣೆ ಮುಂದುವರಿಸಿದೆ. ಆದರೆ, ಅದರ ಎಲ್ಲಾ ಖರ್ಚು ಮತ್ತು ಅನುದಾನದ ವಿವರಗಳು ಈಗ ಕೇಂದ್ರ ಬಜೆಟ್ನ ಭಾಗವಾಗಿವೆ. ಇದರಿಂದ ಹಣಕಾಸು ಸಚಿವಾಲಯವು ವೆಚ್ಚಗಳ ಮೇಲೆ ಹೆಚ್ಚು ನಿಗಾ ಇಡಲು ಸಾಧ್ಯವಾಗಿದೆ. ರೈಲ್ವೆ ಕಾರ್ಯಾಚರಣೆಗಳಿಗೆ ಧಕ್ಕೆ ಬಾರದಂತೆ ನಿರ್ವಹಿಸುವುದು ವಿಲೀನದ ಮತ್ತೊಂದು ಮುಖ್ಯ ಉದ್ದೇಶ.
ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಈ ಯೋಜನೆಗೆ ಒಪ್ಪಿಗೆ ಸೂಚಿಸಿ, ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿದರು. ರಾಜ್ಯಸಭೆಯಲ್ಲಿ ಚರ್ಚೆಯಾಗಿ 2017ರ ವೇಳೆಗೆ ವಿಲೀನವು ಸಾಕಾರಗೊಂಡಿತು. ಅಂದಿನಿಂದ ರೈಲ್ವೆಗೆ ಸಲ್ಲಿಕೆಯಾಗುವ ನಿಧಿ ಹಂಚಿಕೆಗಳು ಮುಖ್ಯ ಬಜೆಟ್ನ ಭಾಗವಾದವು.
ವಿಲೀನದ ಹಿಂದಿನ ಪ್ರಮುಖ ಕಾರಣಗಳು
ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ನೊಂದಿಗೆ ವಿಲೀನಗೊಳಿಸಲು ಪ್ರಮುಖ ಕಾರಣವೆಂದರೆ, ರೈಲ್ವೆ ನೀತಿಗಳನ್ನು ಭಾರತದ ವಿಶಾಲ ಆರ್ಥಿಕ ಕಾರ್ಯತಂತ್ರಗಳೊಂದಿಗೆ ಉತ್ತಮವಾಗಿ ಜೋಡಿಸುವುದು. ಈ ಹಿಂದೆ ರೈಲ್ವೆ ಬಜೆಟ್, ದೀರ್ಘಾವಧಿಯ ಆರ್ಥಿಕ ಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಗಿಂತ ಹೆಚ್ಚಾಗಿ ದರ ಕಡಿತ ಹಾಗೂ ಹೊಸ ಯೋಜನೆಗಳ ಘೋಷಣೆಗೆ ಆದ್ಯತೆ ನೀಡುತ್ತದೆ ಎಂಬ ಟೀಕೆಗಳಿಗೆ ಒಳಗಾಗಿತ್ತು.
ಪ್ರತ್ಯೇಕ ಕಾರ್ಯಾಚರಣೆಯು ಭಾರತೀಯ ರೈಲ್ವೆಗೆ ಸಮನ್ವಯ ಸಮಸ್ಯೆಗಳಿಗೆ ಕಾರಣವಾಗಿ, ಯೋಜನೆ, ಬಜೆಟ್, ನಿರ್ಧಾರ ಪ್ರಕ್ರಿಯೆಗಳನ್ನು ವಿಳಂಬಗೊಳಿಸುತ್ತಿತ್ತು. ವಿಲೀನದಿಂದ ಈ ಕಾರ್ಯಗಳು ಸುಗಮಗೊಂಡು, ನಿಧಿ ಹಂಚಿಕೆ ಸರಳವಾಯಿತು ಹಾಗೂ ರೈಲ್ವೆ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಮುಂದುವರಿಯಲು ನೆರವಾಯಿತು.
ಈ ಏಕೀಕೃತ ವಿಧಾನವು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೂ ವೇಗ ನೀಡಿದೆ. ಬಜೆಟ್ಗಳನ್ನು ಒಟ್ಟುಗೂಡಿಸುವುದರಿಂದ, ಆಧುನೀಕರಣ ಮತ್ತು ರೈಲ್ವೆ ಜಾಲದ ವಿಸ್ತರಣೆಗೆ ಸಂಪನ್ಮೂಲಗಳನ್ನು ಸುಲಭವಾಗಿ ಮತ್ತು ನಮ್ಯತೆಯಿಂದ ನಿರ್ದೇಶಿಸಲು ಸಾಧ್ಯವಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications