ಇರಾನ್ನಿಂದ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ತೀವ್ರ ಕಟ್ಟೆಚ್ಚರದಲ್ಲಿದೆ. ದೇಶದ ಹಲವು ಭಾಗಗಳಲ್ಲಿ ವಾಯು ದಾಳಿ ಸೈರನ್ಗಳು ಮೊಳಗಿದ್ದು, ಕ್ಷಿಪಣಿಗಳು ಇಸ್ರೇಲಿ ಪ್ರದೇಶದತ್ತ ಬಂದಿರುವುದನ್ನು ಸೇನೆ ದೃಢಪಡಿಸಿದೆ. ತಡೆಗಟ್ಟುವ ವ್ಯವಸ್ಥೆಗಳು ಕಾರ್ಯನಿರತವಾಗಿದ್ದು, ತುರ್ತು ಎಚ್ಚರಿಕೆ ರವಾನಿಸಲಾಗಿದೆ.

ಇಸ್ರೇಲ್ ಮತ್ತು ಅಮೆರಿಕ (ಯುಎಸ್) ಇರಾನ್ ಮೇಲೆ ನಡೆಸಿದ ಸಮನ್ವಯ ಸೇನಾ ದಾಳಿಯ ನಂತರ ಈ ಬೆಳವಣಿಗೆ. ಟೆಹ್ರಾನ್ ಸುತ್ತಮುತ್ತಲ ಸ್ಫೋಟಗಳನ್ನು ಮಿಲಿಟರಿ ಗುರಿಗಳನ್ನಷ್ಟೇ ಉದ್ದೇಶಿಸಿದ 'ತಡೆಗಟ್ಟುವ ದಾಳಿ' ಎಂದು ಇಸ್ರೇಲಿ ಅಧಿಕಾರಿಗಳು ಬಣ್ಣಿಸಿದ್ದಾರೆ. ಇದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ.
ಟೆಹ್ರಾನ್ನಾದ್ಯಂತ ಭಾರೀ ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಕೆಲವು ದಾಳಿಗಳು ಹಿರಿಯ ನಾಯಕತ್ವಕ್ಕೆ ಸಂಬಂಧಿಸಿದ ಉನ್ನತ ಭದ್ರತಾ ವಲಯಗಳ ಬಳಿ ನಡೆದಿವೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿ ಬಳಿ ದಾಳಿ ನಡೆದಿತ್ತು ಎಂದು ಎಎಫ್ಪಿ ವರದಿಯಾಗಿದೆ, ಆದರೆ ಇರಾನ್ ಇದನ್ನು ದೃಢಪಡಿಸಿಲ್ಲ.
ದಾಳಿ ದೃಢಪಟ್ಟ ಕೂಡಲೇ, ಇಸ್ರೇಲ್ ವಾಯುಮಾರ್ಗವನ್ನು ನಾಗರಿಕ ವಿಮಾನಗಳಿಗೆ ತಡೆ ನೀಡಿದೆ. ಸಾರಿಗೆ ಸಚಿವ ಮಿರಿ ರೆಗೆವ್, ಭದ್ರತಾ ಬೆದರಿಕೆಗಳನ್ನು ಉಲ್ಲೇಖಿಸಿ ಈ ನಿರ್ಧಾರ ಘೋಷಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸಹ ನಿಷೇಧಿಸಿದೆ.
ಇರಾನ್ನಿಂದ ಬರುವ ಬೆದರಿಕೆ ನಿಷ್ಕ್ರಿಯಗೊಳಿಸುವುದು ಸೇನಾ ಕಾರ್ಯಾಚರಣೆಯ ಉದ್ದೇಶ ಎಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸ್ಪಷ್ಟಪಡಿಸಿದರು. ರಾಷ್ಟ್ರೀಯ ಭದ್ರತೆ ಕಾಪಾಡಲು ಮಿಲಿಟರಿ ಮೂಲಸೌಕರ್ಯಗಳ ಮೇಲೆ ಮಾತ್ರ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಒತ್ತಿ ಹೇಳಿದರು.
ಇದೇ ವೇಳೆ, ಯುನೈಟೆಡ್ ಸ್ಟೇಟ್ಸ್ ಕೂಡ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ದೃಢಪಡಿಸಿತು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ನೊಂದಿಗಿನ ಅಣ್ವಸ್ತ್ರ ಮಾತುಕತೆಗಳ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಇರಾನ್ ದೀರ್ಘಕಾಲದ ಹಿಂಸಾತ್ಮಕ ಕೃತ್ಯಗಳು ಮತ್ತು ಅಸ್ಥಿರತೆಗೆ ಕಾರಣ ಎಂದು ಟ್ರಂಪ್ ಆರೋಪಿಸಿದರು. ವಾಷಿಂಗ್ಟನ್ ಪ್ರಮುಖ ಕಾರ್ಯತಂತ್ರದ ನಿರ್ಧಾರ ಎದುರಿಸುತ್ತಿದೆ ಎಂದ ಅವರು, ಶ್ವೇತಭವನದ ಹೆಚ್ಚಿದ ಹತಾಶೆ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡಾಗ ಬಲವಂತದ ವಿಧಾನಕ್ಕೆ ಬದಲಾಯಿಸುವ ಸೂಚನೆ ನೀಡಿದವು.
ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ, ಭಾರತ ತನ್ನ ನಾಗರಿಕರಿಗೆ ಸಲಹೆಗಳನ್ನು ನೀಡಿದೆ. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್ನಲ್ಲಿರುವವರಿಗೆ ಜಾಗರೂಕರಾಗಿರಲು ಹಾಗೂ ಇಸ್ರೇಲಿ ಅಧಿಕಾರಿಗಳ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮನವಿ ಮಾಡಿದೆ.
ಭಾರತೀಯರಿಗೆ ಎಚ್ಚರಿಕೆ: ಇರಾನ್ನಲ್ಲಿರುವ ಭಾರತೀಯರಿಗೂ ಮಾರ್ಗದರ್ಶನ ನೀಡಲಾಗಿದ್ದು, ಎಚ್ಚರಿಕೆಯಿಂದ ಇರಲು, ಸ್ಥಳೀಯ ಬೆಳವಣಿಗೆ ಗಮನಿಸಲು ಮತ್ತು ಅಪಾಯಕಾರಿ ಪ್ರದೇಶಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಅಲ್ಲದೆ, ಆಶ್ರಯಗಳ ಬಳಿ ಉಳಿಯಲು ಹಾಗೂ ಸುರಕ್ಷಿತ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ನಾಗರಿಕರಿಗೆ ಮನವಿ ಮಾಡಲಾಗಿದೆ.
ಅಲ್ಲದೇ ಶನಿವಾರ ಇಸ್ರೇಲ್-ಯುಎಸ್, ಇರಾನ್ ಮೇಲೆ ಮಾಡಿದ ಭೀಕರ ದಾಳಿಯಿಂದಾಇ, ಇರಾನ್, ಇರಾಕ್, ಇಸ್ರೇಲ್, ಜಾರ್ಡನ್ ಸೇರಿದಂತೆ ಹಲವು ದೇಶಗಳು ವಾಯುಯಾನವನ್ನು ಸಂಪೂರ್ಣವಾಗಿ ಮುಚ್ಚಿದೆ. ಯುಎಇ ಕೂಡಾ ತನ್ನ ವಾಯುಯಾನವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಇದರಿದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮಿರೇಟ್ಸ್ನ ಎಲ್ಲಾ ಆಗಮನ ಮತ್ತುನಿರ್ಗಮನ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇನ್ನು ಎಮಿರೇಟ್ಸ್ ಏರ್ಲೈನ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ "ಹಲವಾರು ಪ್ರಾದೇಶಿಕ ವಾಯುಯಾನ ಮುಚ್ಚಿದರಿಂದ ದುಬೈಗೆ ಮತ್ತು ದುಬೈನಿಂದ ಸಂಚರಿಸಬೇಕಿದ್ದ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತೊಳಿಸಲಾಗಿದೆ" ಎಂದು ತಿಳಿಸಿದೆ.
More From GoodReturns

Bengaluru Airport: ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಭೀತಿ! ಹಲವು ವಿಮಾನ ಹಾರಾಟ ರದ್ದು

Donald Trump: ‘ಯುದ್ಧ ನಿಲ್ಲಲ್ಲ, ಮುಂದುವರಿಯುತ್ತೆ’…ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಜ್ವಾಲೆ ಹೆಚ್ಚಿಸಿದ ಟ್ರಂಪ್ ಹೇಳ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Iran Supreme Leader: ಇರಾನ್ನ ಮುಂದಿನ ಸರ್ವೋಚ್ಚ ನಾಯಕ ಇವರೇನಾ? ಖಮೇನಿ ಉತ್ತರಾಧಿಕಾರಿ ರೇಸ್ನಲ್ಲಿರೋರ್ಯಾರು?

Israel-Iran War: ಭಾರತದ ಚಿತ್ತ ಕಚ್ಚಾ ತೈಲದತ್ತ; ಅತ್ತ ಏರಿಕೆಯಾಗುತ್ತಿದ್ದಂತೆ, ಹೊಸ ದಾರಿ ಹುಡುಕುತ್ತಿರುವ ಭಾರತ!

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Oil Prices Surge: ರಣಭೂಮಿಯಾದ ಇರಾನ್-ಇಸ್ರೇಲ್… ಜಾಗತಿಕ ತೈಲ ಬೆಲೆ 8% ಜಿಗಿತ, ಆತಂಕದ ಕೇಂದ್ರವಾದ ಹಾರ್ಮುಜ್ ಜಲಸಂಧಿ!

Modi-Israel: ಇಸ್ರೇಲ್ನಲ್ಲಿ 'ನಮೋ'! ಹಲವು ಒಪ್ಪಂದಗಳಿಗೆ ಸಾಕ್ಷಿಯಾಗಲಿದೆ ಮೋದಿ ಭೇಟಿ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Tumakuru: ತುಮಕೂರು-ರಾಯದುರ್ಗ ಮಾರ್ಗದಲ್ಲಿ ರೈಲು ಸಂಚಾರ ಆರಂಭ…ಸದ್ಯಕ್ಕೆ 83 ಕಿ.ಮೀವರೆಗೂ ಸಂಚಾರ!

Mysuru Airport: ಮೈಸೂರು ಏರ್ಪೋರ್ಟ್ ವಿಸ್ತರಣೆಗೆ ಕೊನೆಗೂ ಸಿದ್ಧ; ಭೂಸ್ವಾಧೀನ ಪ್ರಕ್ರಿಯೆ ಅಂತ್ಯ



Click it and Unblock the Notifications